AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bypolls: ಚನ್ನಪಟ್ಟಣದ ಜನ ಈ ಬಾರಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ: ಶೀಲಾ ಯೋಗೇಶ್ವರ್

Karnataka Bypolls: ಚನ್ನಪಟ್ಟಣದ ಜನ ಈ ಬಾರಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ: ಶೀಲಾ ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 13, 2024 | 1:23 PM

ಯೋಗೇಶ್ವರ್ ಎದುರಾಳಿ ನಿಖಿಲ್ ಕುಮಾರಸ್ವಾಮಿ ಅವರ ಪರ ಪ್ರಮುಖರು ಪ್ರಚಾರ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೀಲಾ, ಅವರ ಪ್ರಚಾರ ಅವರಿಗೆ ನಮ್ಮ ಪ್ರಚಾರ ನಮಗೆ, ಯೋಗೇಶ್ವರ್ ಒಬ್ಬ ರೈತನ ಮಗ ಮತ್ತು ರೈತ ಈ ದೇಶದ ಬೆನ್ನುಲುಬು, ಹಾಗಾಗಿ ಮತದಾರರು ಅವರನ್ನು ಗೆಲ್ಲಿಸುತ್ತಾರೆ ಎಂದರು.

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಅವರು ಮತ ಚಲಾಯಿಸಿದ ಬಳಿಕ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದರು. ಈ ಸಲ ಚನ್ನಪಟ್ಟಣದ ಜನತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ, ತನ್ನ ಪತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ ಮತ್ತು ರಾಜ್ಯದಲ್ಲಿ ಅದೇ ಪಕ್ಷ ಅಧಿಕಾರದಲ್ಲಿರುವುದರಿಂದ ಕೆಲಸಗಳಾಗುತ್ತವೆ ಮತ್ತು ಚನ್ನಪಟ್ಟಣದ ಅಭಿವೃದ್ಧಿಯೂ ವೇಗದ ಗತಿಯಲ್ಲಿ ಆಗುತ್ತದೆ ಎಂದು ಶೀಲಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಉಪ ಚುನಾವಣೆ: ಪಕ್ಷದ ಶಾಲು ಹೊದ್ದು ಮತಗಟ್ಟೆ ಬಳಿ ಸುಳಿದಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ದೂರ ಕಳಿಸಿದ ಪೊಲೀಸರು

Published on: Nov 13, 2024 12:37 PM