AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡ ಕೇಸಿನಲ್ಲಿ ಸಿಎಂ ಪಾತ್ರ ಏನೆಂದು ಹೇಳುತ್ತಿಲ್ಲ? ಹೈಕೋರ್ಟ್ ಕಲಾಪದ ವಿಡಿಯೋ ವೈರಲ್

ಮೂಡ ಕೇಸಿನಲ್ಲಿ ಸಿಎಂ ಪಾತ್ರ ಏನೆಂದು ಹೇಳುತ್ತಿಲ್ಲ? ಹೈಕೋರ್ಟ್ ಕಲಾಪದ ವಿಡಿಯೋ ವೈರಲ್

ರಮೇಶ್ ಬಿ. ಜವಳಗೇರಾ
|

Updated on: Sep 01, 2024 | 3:24 PM

ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಕಾನೂನು ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಶನಿವಾರ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ವೇಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು, (ಸೆಪ್ಟೆಂಬರ್ 01): ಮುಡಾ ಹಗರಣ ಸಂಬಂಧ ಸಂಬಂಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್​ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಡೆದಿದ್ದು, ಈ ಸಂಬಂಧ ಶನಿವಾರ ನಡೆದ ಕಲಾಪದ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋವನ್ನು ನೀವೂ ನೋಡಿರುತ್ತೀರಿ. ವೈರಲ್ ಆದ ವಿಡಿಯೋದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದ ಖಾಸಗಿ ವ್ಯಕ್ತಿಗಳ ಪರವಾದ ವಕೀಲರನ್ನು ಒಂದು ಪ್ರಶ್ನೆ ಕೇಳುತ್ತಾರೆ. ” ನೀವೆಲ್ಲ ಇಷ್ಟು ವಾದ ಮಾಡುತ್ತಿದ್ದೀರಿ. ಆದ್ರೆ, ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ನೀವು ಯಾಕೆ ಏನೂ ಹೇಳಲಿಲ್ಲ. ಆ ಪ್ರಶ್ನೆಗೆ ನಿಮ್ಮ ಉತ್ತರ ಯಾಕೆ ಇಲ್ಲ? ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕೇಳಿದ್ದಾರೆ.

ಇದಕ್ಕೆ ಉತ್ತರಿಸುವ ವಕೀಲರುಗಳು Nothing ಎನ್ನುತ್ತಾರೆ. ನ್ಯಾಯಮೂರ್ತಿಗಳು ಆಶ್ವರ್ಯದಿಂದ Nothing? ಎಂದು ಪ್ರಶ್ನಿಸುತ್ತಾರೆ. ಆಗ ವಕೀಲರು ಹೌದು ಸ್ವಾಮಿ, ಆ ಪ್ರಶ್ನೆಗೆ ಉತ್ತರ ಏನೂ ಇಲ್ಲ. ಯಾಕೆ ಎಂಬುದಕ್ಕೆ ನಾವು ಸಮಜಾಯಿಷಿ ಕೊಡುತ್ತೇವೆ ಎನ್ನುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.