ಯೋಗೇಶ್ವರ್ 16 ಆದರೆ ಕುಮಾರಸ್ವಾಮಿ ನೂರಾರು ಕೆರೆಗಳಿಗೆ ನೀರು ತುಂಬಿಸಿದ್ದಾರೆ: ಮಂಜು
ಮಂಡ್ಯದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಂಜು ಮಾಜಿ ಪ್ರಧಾನಿ ದೇವೇಗೌಡರನ್ನು ತಾನು ವಿರೋಧಿಸಿದಷ್ಟು ಯಾರೂ ವಿರೋಧಿಸಿಲ್ಲ, ಆದರೆ ತನ್ನ ವಿರೋಧ ವಿಷಯಾಧಾರಿತವಾಗಿರುತಿತ್ತು, ಯಾವತ್ತೂ ವೈಯಕ್ತಿಕ ಟೀಕೆಗಳನ್ನು ಮಾಡಿಲ್ಲ, ಸಿದ್ದರಾಮಯ್ಯರನ್ನೂ ತಾನು ವೈಯಕ್ತಿಕವಾಗಿ ಟೀಕಿಸಿಲ್ಲ ಎಂದರು.
ಮಂಡ್ಯ: ಚನ್ನಪಟ್ಟಣ ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸಿದ ಬಗ್ಗೆ ಹೆಚ್ಚು ಚರ್ಚೆಯಾಗಿದೆ, ಇದೇ ಹಿನ್ನೆಲೆಯಲ್ಲಿ ತಾವು ಒಂದು ಸಮೀಕ್ಷೆ ಮಾಡಿದ್ದು ಅದರ ಪ್ರಕಾರ ಸಿಪಿ ಯೋಗೇಶ್ವರ್ 16 ಕೆರೆಗಳಿಗೆ ನೀರು ತುಂಬಿಸಿದ್ದಾರೆ ಅದರೆ ಹೆಚ್ ಡಿ ಕುಮಾರಸ್ವಾಮಿ ನೂರಾರು ಕೆರೆಗಳಿಗೆ ನೀರು ತುಂಬಿಸಿದ್ದಾರೆ, ಅದಕ್ಕಿಂತಲೂ ಮುಖ್ಯವಾಗಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ಇಗ್ಲೂರ್ ಜಲಾಶಯವನ್ನು ನಿರ್ಮಿಸಲಾಯಿತು, ಆಗ ರಾಜ್ಯದ ಮುಖ್ಯಮಂತ್ರಿ ಜೆಹೆಚ್ ಪಟೇಲ್ ಆಗಿದ್ದರು ಮತ್ತು ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು ಎಂದು ಜೆಡಿಎಸ್ ಶಾಸಕ ಎ ಮಂಜು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾವ ಸಭೆಯಲ್ಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರದ ಸಿಎಂ ಇಬ್ರಾಹಿಂ: ಶಾಸಕ ಎ ಮಂಜು ಬಿಚ್ಚಿಟ್ರು ಹೊಸ ರಹಸ್ಯ
Loading...
Unable to load recommendations.
Follow Us