Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರ ಗೊಂದಲದಲ್ಲಿದ್ದರೆ, ಕುಮಾರಸ್ವಾಮಿಗೆ ನಾಲಗೆ ಮೇಲೆ ಹಿಡಿತವಿಲ್ಲ: ಎನ್ ಚಲುವರಾಯಸ್ವಾಮಿ

ವಿಜಯೇಂದ್ರ ಗೊಂದಲದಲ್ಲಿದ್ದರೆ, ಕುಮಾರಸ್ವಾಮಿಗೆ ನಾಲಗೆ ಮೇಲೆ ಹಿಡಿತವಿಲ್ಲ: ಎನ್ ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 21, 2023 | 1:04 PM

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತಾಡಿದ ಸಚಿವ, ಅವರಿಗೆ ನಾಲಗೆ ಮೇಲೆ ಹಿಡಿತದಲ್ಲಿಲ್ಲ, ಮನಸ್ಸಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ, ಹಳ್ಳಿಯಲ್ಲಿ ಹುಟ್ಟಿದವನಾಗಿರುವುದರಿಂದ ಅವರಂತೆ ಭಾಷೆ ಪ್ರಯೋಗಿಸುವುದು ಚೆನ್ನಾಗಿ ಗೊತ್ತು, ಅವರ ಬಳಸುವ ಭಾಷೆಯ ಅಪ್ಪನಂಥ ಭಾಷೆಯನ್ನು ತಾನೂ ಕೂಡ ಬಳಸಬಲ್ಲೆ ಎಂದು ಹೇಳಿದರು.

ಮಂಡ್ಯ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy), ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೀಡರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಜನರ ಗಮನ ಡೈವರ್ಟ್ ಮಾಡಲು ಅವರು ಹಾಗೆ ಮಾತಾಡುತ್ತಿದ್ದಾರೆ ಯಾಕೆಂದರೆ ಅವರನ್ನುಪಕ್ಷದ ಅಧ್ಯಕ್ಷ ಮಾಡಿದ್ದು ಯಾರಿಗೂ ಇಷ್ಟವಿಲ್ಲ, ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅರ್ ಅಶೋಕ, ಅಧ್ಯಕ್ಷರೊಂದಿಗೆ ಸೇರಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ, ನೋಡೋಣ ಏನು ಮಾಡ್ತಾರೆ ಅಂತ ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಗ್ಗೆ ಮಾತಾಡಿದ ಸಚಿವ, ಅವರಿಗೆ ನಾಲಗೆ ಮೇಲೆ ಹಿಡಿತದಲ್ಲಿಲ್ಲ, ಮನಸ್ಸಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ, ಹಳ್ಳಿಯಲ್ಲಿ ಹುಟ್ಟಿದವನಾಗಿರುವುದರಿಂದ ಅವರಂತೆ ಭಾಷೆ ಪ್ರಯೋಗಿಸುವುದು ಚೆನ್ನಾಗಿ ಗೊತ್ತು, ಅವರ ಬಳಸುವ ಭಾಷೆಯ ಅಪ್ಪನಂಥ ಭಾಷೆಯನ್ನು ತಾನೂ ಕೂಡ ಬಳಸಬಲ್ಲೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ