Bigg Boss Kannada: ‘ನೋಡಪ್ಪ.. ಕೇಳಯ್ಯ ಇಲ್ಲಿ’: ಬಿಗ್​ ಬಾಸ್​ಗೆ ಏಕವಚನದಲ್ಲಿ ಮಾತನಾಡಿಸಿದ ಬ್ರಹ್ಮಾಂಡ ಗುರೂಜಿ

ಎಲ್ಲ ಸ್ಪರ್ಧಿಗಳು ಬಿಗ್​ ಬಾಸ್​ಗೆ ಬಹಳ ಗೌರವ ನೀಡುತ್ತಾರೆ. ಆದರೆ ಬ್ರಹ್ಮಾಂಡ ಗುರೂಜಿ ಅವರ ವರಸೆಯೇ ಬೇರೆ. ‘ನೋಡಪ್ಪ ಬಿಗ್​ ಬಾಸು.. ಕೇಳಯ್ಯ ಇಲ್ಲಿ.. ನನಗೆ ಓಡಾಡೋಕೆ ಆಗಲ್ಲ. ಈಗಲೇ ಹೇಳಿದೀನಿ. ಎಲ್ಲರನ್ನೂ ಒಂದು ಕಡೆ ಕೂರಿಸು’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ಫನ್ನಿ ವಿಡಿಯೋ ಇಲ್ಲಿದೆ ನೋಡಿ..

Bigg Boss Kannada: ‘ನೋಡಪ್ಪ.. ಕೇಳಯ್ಯ ಇಲ್ಲಿ’: ಬಿಗ್​ ಬಾಸ್​ಗೆ ಏಕವಚನದಲ್ಲಿ ಮಾತನಾಡಿಸಿದ ಬ್ರಹ್ಮಾಂಡ ಗುರೂಜಿ
|

Updated on: Nov 21, 2023 | 1:38 PM

ನರೇಂದ್ರ ಬಾಬು ಶರ್ಮಾ ಅಲಿಯಾಸ್​ ಬ್ರಹ್ಮಾಂಡ ಗುರೂಜಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 10’ (Bigg Boss Kannada) ಶೋಗೆ ಕಾಲಿಟ್ಟಿದ್ದಾರೆ. ಅತಿಥಿಯಾಗಿ ಬಂದಿರುವ ಅವರಿಗೂ ಬಿಗ್​ ಬಾಸ್​ನಲ್ಲಿ ಟಾಸ್ಕ್​ ನೀಡಲಾಗಿದೆ. ದೊಡ್ಮನೆಯೊಳಗಿನ ಸದಸ್ಯರಿಗೆ ಆಗಾಗ ಬಿಗ್​ ಬಾಸ್​ (Bigg Boss) ಕಡೆಯಿಂದ ಆದೇಶ ಬರುತ್ತದೆ. ಎಲ್ಲರೂ ಬಿಗ್​ ಬಾಸ್​ಗೆ ಬಹಳ ಗೌರವ ನೀಡುತ್ತಾರೆ. ‘ಕೇಳಿ, ನೋಡಿ, ಕಳಿಸಿ’ ಎಂದೆಲ್ಲ ಬಹುವಚನದಲ್ಲಿ ಗೌರವದಿಂದ ಸ್ಪರ್ಧಿಗಳು ಮಾತನಾಡುತ್ತಾರೆ. ಆದರೆ ಬ್ರಹ್ಮಾಂಡ ಗುರೂಜಿ ಅವರ ವರಸೆಯೇ ಬೇರೆ. ಸೋಮವಾರದ (ನ.20) ಎಪಿಸೋಡ್​ನಲ್ಲಿ ಅವರಿಗೆ ಒಂದು ಟಾಸ್ಕ್​ ನೀಡಲಾಗಿತ್ತು. ಆ ವೇಳೆ ಅವರು ಕ್ಯಾಮೆರಾ ಇರುವಲ್ಲಿಗೆ ಬಂದು ಬಿಗ್​ ಬಾಸ್​ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ‘ನೋಡಪ್ಪ ಬಿಗ್​ ಬಾಸು.. ಕೇಳಯ್ಯ ಇಲ್ಲಿ.. ನನಗೆ ಓಡಾಡೋಕೆ ಆಗಲ್ಲ. ಈಗಲೇ ಹೇಳಿದೀನಿ. ಎಲ್ಲರನ್ನೂ ಒಂದು ಕಡೆ ಕೂರಿಸು’ ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್​ ಬಾಸ್​ ಶೋ ಬಿತ್ತರ ಆಗುತ್ತದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!