ಸಂವಿಧಾನಬಾಹಿರ ಮಾತಾಡಿರುವ ರಾಷ್ಟ್ರದ್ರೋಹಿ ಜಮೀರ್ ಅಹ್ಮದ್​ನನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು: ಕೆಎಸ್ ಈಶ್ವರಪ್ಪ

ಜಮೀರ್ ಅಹ್ಮದ್ ವಿರುದ್ಧ ಏಕವಚನದಲ್ಲೇ ದಾಳಿ ನಡೆಸಿರುವ ಈಶ್ವರಪ್ಪ, ಜಮೀರ್ ತೆಲಂಗಾಣದಲ್ಲಿ ಸಂವಿಧಾನಬಾಹಿರ ಮಾತನ್ನಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೆ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ, ಅವರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಕೂಡಲೇ ಜಮೀರ್ ನನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಸಂವಿಧಾನಬಾಹಿರ ಮಾತಾಡಿರುವ ರಾಷ್ಟ್ರದ್ರೋಹಿ ಜಮೀರ್ ಅಹ್ಮದ್​ನನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು: ಕೆಎಸ್ ಈಶ್ವರಪ್ಪ
|

Updated on: Nov 21, 2023 | 2:34 PM

ಶಿವಮೊಗ್ಗ: ಸ್ಪೀಕರ್ ಸ್ಥಾನದ ಬಗ್ಗೆ ತೆಲಂಗಾಣದಲ್ಲಿ ಹಗುರವಾಗಿ ಮಾತಾಡಿ ಸಂವಿಧಾನಕ್ಕೆ ಅಪನಿಂದನೆ ಮಾಡಿರುವ ರಾಷ್ಟ್ರದ್ರೋಹಿ ಬೆಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದರು. ನಗರಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು, ಸ್ಪೀಕರ್ ಸ್ಥಾನ (Speaker chair) ಅತ್ಯಂತ ಗೌರವಯುತವಾದದ್ದು, ವಿಧಾನ ಸಭಾ ಸದಸ್ಯರು ಆ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾರೆಯೇ ಹೊರತು, ಅದರ ಮೇಲೆ ಕುಳಿತಿರುವ ವ್ಯಕ್ತಿಗಲ್ಲ, ಖಾದರ್ ಅವರು ಕೂರುವ ಪೀಠಕ್ಕೆ ಎಲ್ಲ ಸದಸ್ಯರು ಗೌರವ ಸಲ್ಲಿಸುತ್ತಾರೆ, ಖಾದರ್ ಅವರಿಗಲ್ಲ ಎಂದು ಈಶ್ವರಪ್ಪ ಹೇಳಿದರು. ಜಮೀರ್ ಅಹ್ಮದ್ ವಿರುದ್ಧ ಏಕವಚನದಲ್ಲೇ ದಾಳಿ ನಡೆಸಿರುವ ಈಶ್ವರಪ್ಪ, ಜಮೀರ್ ತೆಲಂಗಾಣದಲ್ಲಿ ಸಂವಿಧಾನಬಾಹಿರ ಮಾತನ್ನಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೆ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ, ಅವರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಕೂಡಲೇ ಜಮೀರ್ ನನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us