ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ಮಾರ್ಗಮಧ್ಯ ಕಾಡಾನೆಗಳ ಓಡಾಟ ಜೋರಾಗಿದೆ. ಎತ್ತಕಟ್ಟಿ ಬೆಟ್ಟ ಹಾಗೂ ತಾಳವಾಡಿ ಸೇರಿದಂತೆ ಅಕ್ಕ ಪಕ್ಕ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮುಖ್ಯರಸ್ತೆಯಲ್ಲೇ ಕಾಡಾನೆಗಳು, ಓಡಾಡುತ್ತಿವೆ. ಅದರಲ್ಲೂ ಒಂದು ಆನೆ ದಿಂಬಂ ಘಾಟ್ನಲ್ಲಿ ಪೊಲೀಸರ ರೀತಿ ಲಾರಿಗಳನ್ನು ತಪಾಸಣೆ ನಡೆಸಿದೆ. ಹೌದು... ಚಾಮರಾಜನಗರದಿಂದ ತಮಿಳುನಾಡಿನ ಬಣ್ಣಾರಿಗೆ ತೆರಳುವ ರಸ್ತೆ ಮಧ್ಯೆ ಲಾರಿಗಳನ್ನು ಅಡ್ಡ ಹಾಕಿ ಕಬ್ಬು ತರಕಾರಿ ಕೀಳುತ್ತಿವೆ. ಒಂದು ವೇಳೆ ತಿನ್ನಲು ಲಾರಿಯಲ್ಲಿ ಏನು ಇಲ್ಲದಿದ್ದರೆ ಹಾಗೇ ಕಳುಹಿಸುತ್ತಿದೆ. ವಿಡಿಯೋ ನೋಡುತ್ತಿದ್ದರೆ ಥೇಟ್ ಸೇಮ್ ಟು ಸೇಮ್ ಪೊಲೀಸರ ರೀತಿಯಲ್ಲೇ ಕಾಡಾನೆ ವಾಹನಗಳನ್ನ ಅಡ್ಡ ಹಾಕಿ ಪರಿಶೀಲನೆ ಮಾಡುತ್ತಿದೆ.
ಚಾಮರಾಜನಗರ, (ಡಿಸೆಂಬರ್ 15): ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ಮಾರ್ಗಮಧ್ಯ ಕಾಡಾನೆಗಳ ಓಡಾಟ ಜೋರಾಗಿದೆ. ಎತ್ತಕಟ್ಟಿ ಬೆಟ್ಟ ಹಾಗೂ ತಾಳವಾಡಿ ಸೇರಿದಂತೆ ಅಕ್ಕ ಪಕ್ಕ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮುಖ್ಯರಸ್ತೆಯಲ್ಲೇ ಕಾಡಾನೆಗಳು, ಓಡಾಡುತ್ತಿವೆ. ಅದರಲ್ಲೂ ಒಂದು ಆನೆ ದಿಂಬಂ ಘಾಟ್ನಲ್ಲಿ ಪೊಲೀಸರ ರೀತಿ ಲಾರಿಗಳನ್ನು ತಪಾಸಣೆ ನಡೆಸಿದೆ. ಹೌದು… ಚಾಮರಾಜನಗರದಿಂದ ತಮಿಳುನಾಡಿನ ಬಣ್ಣಾರಿಗೆ ತೆರಳುವ ರಸ್ತೆ ಮಧ್ಯೆ ಲಾರಿಗಳನ್ನು ಅಡ್ಡ ಹಾಕಿ ಕಬ್ಬು ತರಕಾರಿ ಕೀಳುತ್ತಿವೆ. ಒಂದು ವೇಳೆ ತಿನ್ನಲು ಲಾರಿಯಲ್ಲಿ ಏನು ಇಲ್ಲದಿದ್ದರೆ ಹಾಗೇ ಕಳುಹಿಸುತ್ತಿದೆ. ವಿಡಿಯೋ ನೋಡುತ್ತಿದ್ದರೆ ಥೇಟ್ ಸೇಮ್ ಟು ಸೇಮ್ ಪೊಲೀಸರ ರೀತಿಯಲ್ಲೇ ಕಾಡಾನೆ ವಾಹನಗಳನ್ನ ಅಡ್ಡ ಹಾಕಿ ಪರಿಶೀಲನೆ ಮಾಡುತ್ತಿದೆ. ನೀವೂ ಒಮ್ಮೆ ವಿಡಿಯೋ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
