ರಾಜ್ಯದ ಮಹಿಳೆಯರೆಲ್ಲ ತಿರುಗಿಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾಗಿದೆ: ಡಿಕೆ ಶಿವಕುಮಾರ್

ಈಗ ಅದೇ ಸವಾಲನ್ನು ನವೀಕರಿಸುತ್ತೇನೆ. ವಿಧಾನಸಭೆಯಲ್ಲೇ ಚರ್ಚೆ ನಡೆದರೆ ಉತ್ತಮ, ಅಥವಾ ಮಾಧ್ಯಮದವರು ಆಯೋಜಿಸಿದರೂ ಓಕೆ, ತಾನು ಅದಕ್ಕೆ ಸಿದ್ಧ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಸಂಸತ್ತಿಗೆ ಹೋಗುವುದು ಸಾಧ್ಯವೇ ಇಲ್ಲ, ಚರ್ಚೆ ನಡೆದರೆ ಅವರೆಂಥ ಸುಳ್ಳುಗಾರ ಮತ್ತು ಮೋಸಗಾರ ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದ ಮಹಿಳೆಯರೆಲ್ಲ ತಿರುಗಿಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾಗಿದೆ: ಡಿಕೆ ಶಿವಕುಮಾರ್
|

Updated on: Apr 15, 2024 | 1:20 PM

ಬೆಳಗಾವಿ: ಎರಡು ಪಕ್ಷಗಳ ರಾಜ್ಯಾಧ್ಯಕ್ಷರ ನಡುವೆ ತೀವ್ರ ಸ್ವರೂಪ ಮಾತಿನ ಕಾಳಗ ಶುರುವಾಗಿದೆ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿ ಶಿವಕುಮಾರ್ ಅವರನ್ನು ಮಿಸ್ಟರ್ ಶಿವಕುಮಾರ್ ಅನ್ನುತ್ತಾ ತೆಗಳಿದರೆ, ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಡಿಕೆ ಶಿವಕುಮಾರ್ (DK Shivakumar) ಮಿಸ್ಟರ್ ಕುಮಾರಸ್ವಾಮಿ ಅನ್ನುತ್ತಾ ಜರಿಯುತ್ತಾರೆ. ರಾಜ್ಯದ ಮಹಿಳೆಯರೆಲ್ಲ ತಿರುಗಿ ಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾದಂತಿದೆ (enlightenment), ಅದರೆ ಅವರು ಎಲ್ಲೋ ಕೂತು ಎದೆಗಾರಿಕೆ ಪ್ರದರ್ಶಿಸುವುದು ಬೇಡ, ಹಿಂದೆ ಹೇಳಿದಂತೆಯೇ ಈಗಲೂ ಎನ್ ಡಿಎ ಪಾರ್ಟ್ನರ್ ಗೆ ಸವಾಲು ಹಾಕುತ್ತೇನೆ, ತಮ್ಮಿಬ್ಬರ ನಡುವೆ ಒಂದು ಚರ್ಚೆ ನಡೆಯಲಿ, ಇದಕ್ಕೂ ಮೊದಲು ಅಸೆಂಬ್ಲಿಯಲ್ಲಿ ಚರ್ಚಿಸುವ ಅಂತ ಹೇಳಿದ್ದೆ, ಆದರೆ ಅವರು ಬರಲಿಲ್ಲ, ಈಗ ಅದೇ ಸವಾಲನ್ನು ನವೀಕರಿಸುತ್ತೇನೆ. ವಿಧಾನಸಭೆಯಲ್ಲೇ ಚರ್ಚೆ ನಡೆದರೆ ಉತ್ತಮ, ಅಥವಾ ಮಾಧ್ಯಮದವರು ಆಯೋಜಿಸಿದರೂ ಓಕೆ, ತಾನು ಅದಕ್ಕೆ ಸಿದ್ಧ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಸಂಸತ್ತಿಗೆ ಹೋಗುವುದು ಸಾಧ್ಯವೇ ಇಲ್ಲ, ಚರ್ಚೆ ನಡೆದರೆ ಅವರೆಂಥ ಸುಳ್ಳುಗಾರ ಮತ್ತು ಮೋಸಗಾರ ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಪ್ಪು ಮಾಡಿದಾಗೆಲ್ಲ ಸರಿದಾರಿಗೆ ತರುವ ಕೆಲಸ ನನ್ನ ಧರ್ಮಪತ್ನಿ ಮಾಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

Follow us