Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನಸೇವೆ ಮಾಡುತ್ತೇನೆ: ಹೆಚ್ ಡಿ ದೇವೇಗೌಡ

ಜನರ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನಸೇವೆ ಮಾಡುತ್ತೇನೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 05, 2024 | 5:10 PM

ಅನ್ನದ ಋಣವನ್ನು ತಪ್ಪಿಸಲಾಗದು, ಆ ಋಣ ಎಲ್ಲಿಗೆ ಕರೆದೊಯ್ಯುತ್ತದೆಯೋ ಹೇಳಲಾಗದು ಎಂದ ದೇವೇಗೌಡ, ಮೂರು ತಿಂಗಳವರೆಗೆ ಮಾಧ್ಯಮದವರು ತನ್ನಲ್ಲಿಗೆ ಬರಲಿಲ್ಲ, ತಾನೇನು ಅಂತರಾಷ್ಟ್ರೀಯ ಖ್ಯಾತಿಯ ಅಪರಾಧಿಯಾಗಿದ್ದೆನೇ? ಆಗ ತಾನು ಅನುಭವಿಸಿದ ನೋವು ಕೇವಲ ತನಗೆ ಮಾತ್ರ ಗೊತ್ತು ಎಂದರು.

ರಾಮನಗರ: ಚನ್ನಪಟ್ಟಣದ ವೀರೂಪಾಕ್ಷಿಪುರದಲ್ಲಿ ನಡೆದ ಎನ್​ಡಿಎ ಸಮಾವೇಶದಲ್ಲಿ ಮಾತಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಅಂಬ್ಯುಲೆನ್ಸ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದ ಡಿಕೆ ಸುರೇಶ್​ಗೆ ತಿರುಗೇಟು ನೀಡಿದರು. ಆ ಮಾತು ಯಾರೇ ಹೇಳಿರಲಿ, ಎದೆ ಚಾಚಿ ಹೇಳುತ್ತೇನೆ, ಜನತೆಯ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನರ ಸೇವೆ ಮಾಡುತ್ತೇನೆ, ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕೋಸ್ಕರ ಹೋರಾಡುತ್ತೇನೆ ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಷ್ಟ ಎಷ್ಟೇ ಬಂದರೂ ಕೊನೇ ಉಸಿರಿರುವವರೆಗೆ ಹೋರಾಡುವುದು ನನ್ನ ಜಾಯಮಾನ: ಹೆಚ್​ಡಿ ದೇವೇಗೌಡ