AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ದಾರಿಯಲ್ಲಿ ಸಿಕ್ಕ 1.45 ಲಕ್ಷ ರೂ. ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್

ಯಾದಗಿರಿ: ದಾರಿಯಲ್ಲಿ ಸಿಕ್ಕ 1.45 ಲಕ್ಷ ರೂ. ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್

ಅಮೀನ್​ ಸಾಬ್​
| Updated By: ಪ್ರಸನ್ನ ಹೆಗಡೆ|

Updated on:Nov 13, 2025 | 10:34 AM

Share

ಸುರಪುರ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ದಯಾನಂದ ಅವರು ದಾರಿಯಲ್ಲಿ ಸಿಕ್ಕಿದ್ದ ಹಣವನ್ನು ರೈತ ಗಾದಪ್ಪ ಅವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು.

ಯಾದಗಿರಿ, ನವೆಂಬರ್​ 13: ದಾರಿಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ಮರಳಿಸಿ ಪೊಲೀಸ್​​ ಕಾನ್ಸ್​ಟೇಬಲ್​ ಪ್ರಾಮಾಣಿಕತೆ ಮೆರೆದ ಪ್ರಸಂಗ ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಅದೇ ದಾರಿಯಲ್ಲಿ ಆಗಮಿಸಿದ ಸುರಪುರ ಪೋಲಿಸ್ ಠಾಣೆಯ ಕಾನ್ಸ್​ಟೇಬಲ್​ ದಯಾನಂದ ಜಮಾದರ್​​ ಅವರಿಗೆ ಆ ಹಣ ಸಿಕ್ಕಿದ್ದು, ಠಾಣೆ ಪಿಐ ಉಮೇಶ್​ ನಾಯಕ ನೇತೃತ್ವದಲ್ಲಿ ರೈತ ಗೌಡಪ್ಪಗೆ ಹಣ ವಾಪಸ್​ ಮಾಡಿದ್ದಾರೆ. ಸುರಪುರ ಪೋಲಿಸರ ಕಾರ್ಯಕ್ಕೆ ರೈತ ಗೌಡಪ್ಪ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 13, 2025 10:30 AM