AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ

ಹೆನಾನ್​ ಪ್ರಾಂತ್ಯ ಚೀನಾದಲ್ಲಿ ಎರಡನೇ ದೊಡ್ಡ ಆಹಾರ ಪೂರೈಕೆ ಪ್ರಾಂತ್ಯವಾಗಿದೆ. ದೇಶದಲ್ಲಿ ಒಟ್ಟಾರೆ ಉತ್ಪತ್ತಿಯಾಗುವ ಗೋಧಿಯಲ್ಲಿ ಕಾಲು ಭಾಗ ಈ ಹೆನಾನ್​ ಪ್ರಾಂತ್ಯದಲ್ಲೇ ಉತ್ಪಾದನೆ ಆಗುತ್ತದೆ.

China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ
ಹೆನಾನ್​ ಪ್ರಾಂತ್ಯದ ಒಂದು ದೃಶ್ಯ
TV9 Web
| Edited By: |

Updated on: Jul 21, 2021 | 2:34 PM

Share

ಜಗತ್ತಿನ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೀಗ ಚೀನಾ (China)ದ ಮಧ್ಯ ಪ್ರಾಂತ್ಯವಾದ ಹೆನಾನ್ (Henan)​​ನ ಝೆಂಗ್​​ಝು(Zhengzhou) ನಗರದಲ್ಲಿ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿಂದ ಸುಮಾರು 2 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೆ ಮಳೆ ಮತ್ತು ಪ್ರವಾಹ (Flood) ಪರಿಸ್ಥಿತಿಯಿಂದ ಸುಮಾರು12 ಮಂದಿ ಪ್ರಾರಣ ಕಳೆದುಕೊಂಡಿದ್ದಾರೆ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ಝೆಂಗ್​​ಝು ನಗರದಲ್ಲಿ ಕಳೆದ 24ಗಂಟೆಯಲ್ಲಿ 18 ಇಂಚು(457.5ಮಿಮೀ) ಮಳೆಯಾಗಿದೆ ಎಂದರೆ ಅದರ ಭೀಕರತೆ ಎಷ್ಟಿರಬೇಕು ಎಂದು ಲೆಕ್ಕ ಹಾಕಿ. ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ವಾಹನ ಸಂಚಾರ ಸಂಪೂರ್ಣ ನಿಂತಿದೆ. ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸ ಅವಿರತವಾಗಿ ನಡೆಯುತ್ತಿದೆ. ವಿದ್ಯುತ್​ ಇಲ್ಲ, ಬಹುತೇಕ ಎಲ್ಲ ರಸ್ತೆಗಳೂ ಮುಳುಗಿವೆ. ಇದು ತುಂಬ ಗಂಭೀರ ಪರಿಸ್ಥಿತಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಘೋಷಿಸಿದ್ದಾರೆ. ನಗರದ ಅನೇಕ ಜಲಾಶಯಗಳಿಗೆ ಕಟ್ಟಲಾಗಿದ್ದ ಕಟ್ಟಡಗಳು ಒಡೆದಿವೆ. ಅನೇಕರು ಗಾಯಗೊಂಡಿದ್ದಾರೆ. ಜನರ ಜೀವ ಹೋಗುವ ಜತೆ ಅಪಾರ ಪ್ರಮಾಣದ ಬೆಳೆನಾಶವೂ ಆಗಿದೆ ಎಂದೂ ಜಿನ್​ಪಿಂಗ್​ ಹೇಳಿದ್ದಾರೆ.

ಐಫೋನ್​ ಸಿಟಿ ಹೆನಾನ್​ನ ಝೆಂಗ್​ಝು ನಗರದಲ್ಲಿ ವಿಶ್ವದ ಅತಿದೊಡ್ಡ ಐಫೋನ್​ ತಯಾರಿಕಾ ಘಟಕವಿದೆ. ತೈವಾನ್​ನ ಹಾನ್ ಹೈ ಪ್ರಿಸಿಷಿನ್​ ಕಂಪನಿಯ ಒಡೆತನದಲ್ಲಿರುವ ಘಟಕ ಇತ್ತೀಚೆಗೆ ಐಫೋನ್​ ಉತ್ಪಾದನೆ ಹೆಚ್ಚಿಸಲು ಸಕಲ ತಯಾರಿ ಮಾಡುತ್ತಿತ್ತು. ಆದರೀಗ ಪ್ರವಾಹದಿಂದ ಈ ಘಟಕಕ್ಕೂ ಸಂಕಷ್ಟ ಬಂದೊದಗಿದೆ.

ಇದರೊಂದಿಗೆ ಹೆನಾನ್​ ಪ್ರಾಂತ್ಯ ಚೀನಾದಲ್ಲಿ ಎರಡನೇ ದೊಡ್ಡ ಆಹಾರ ಪೂರೈಕೆ ಪ್ರಾಂತ್ಯವಾಗಿದೆ. ದೇಶದಲ್ಲಿ ಒಟ್ಟಾರೆ ಉತ್ಪತ್ತಿಯಾಗುವ ಗೋಧಿಯಲ್ಲಿ ಕಾಲು ಭಾಗ ಈ ಹೆನಾನ್​ ಪ್ರಾಂತ್ಯದಲ್ಲೇ ಉತ್ಪಾದನೆ ಆಗುತ್ತದೆ. ಹಾಗೇ, ಕಲ್ಲಿದ್ದಲು ಮತ್ತು ಲೋಹದ ಪ್ರಮುಖ ಕೇಂದ್ರವೂ ಹೌದು. ಇಲ್ಲಿಗೆ ಒದಗಿರುವ ವಿಪತ್ತಿನಿಂದ ಈಗಾಗಲೇ ಬೆಳೆನಾಶವಾಗಿದ್ದು, ಸಹಜವಾಗಿಯೇ ಚೀನಾ ಸರ್ಕಾರಕ್ಕೆ ಆತಂಕ ಶುರುವಾಗಿದೆ.

ಇದನ್ನೂ ಓದಿ: ಮಠದ ಉತ್ತರಾಧಿಕಾರಿ ನೇಮಿಸಲು ರಾಜಕಾರಣಿಗಳು ಹೋಗಲ್ಲ; ರಾಜಕೀಯಕ್ಕೆ ಮಠಾಧೀಶರು ಬರಬೇಡಿ: ಹೆಚ್.ವಿಶ್ವನಾಥ್

18 inches of rain in 24 hours Heavy Flood in Chinas iPhone city

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು