AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ

ಹೆನಾನ್​ ಪ್ರಾಂತ್ಯ ಚೀನಾದಲ್ಲಿ ಎರಡನೇ ದೊಡ್ಡ ಆಹಾರ ಪೂರೈಕೆ ಪ್ರಾಂತ್ಯವಾಗಿದೆ. ದೇಶದಲ್ಲಿ ಒಟ್ಟಾರೆ ಉತ್ಪತ್ತಿಯಾಗುವ ಗೋಧಿಯಲ್ಲಿ ಕಾಲು ಭಾಗ ಈ ಹೆನಾನ್​ ಪ್ರಾಂತ್ಯದಲ್ಲೇ ಉತ್ಪಾದನೆ ಆಗುತ್ತದೆ.

China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ
ಹೆನಾನ್​ ಪ್ರಾಂತ್ಯದ ಒಂದು ದೃಶ್ಯ
TV9 Web
| Updated By: Lakshmi Hegde|

Updated on: Jul 21, 2021 | 2:34 PM

Share

ಜಗತ್ತಿನ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೀಗ ಚೀನಾ (China)ದ ಮಧ್ಯ ಪ್ರಾಂತ್ಯವಾದ ಹೆನಾನ್ (Henan)​​ನ ಝೆಂಗ್​​ಝು(Zhengzhou) ನಗರದಲ್ಲಿ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿಂದ ಸುಮಾರು 2 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೆ ಮಳೆ ಮತ್ತು ಪ್ರವಾಹ (Flood) ಪರಿಸ್ಥಿತಿಯಿಂದ ಸುಮಾರು12 ಮಂದಿ ಪ್ರಾರಣ ಕಳೆದುಕೊಂಡಿದ್ದಾರೆ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ಝೆಂಗ್​​ಝು ನಗರದಲ್ಲಿ ಕಳೆದ 24ಗಂಟೆಯಲ್ಲಿ 18 ಇಂಚು(457.5ಮಿಮೀ) ಮಳೆಯಾಗಿದೆ ಎಂದರೆ ಅದರ ಭೀಕರತೆ ಎಷ್ಟಿರಬೇಕು ಎಂದು ಲೆಕ್ಕ ಹಾಕಿ. ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ವಾಹನ ಸಂಚಾರ ಸಂಪೂರ್ಣ ನಿಂತಿದೆ. ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸ ಅವಿರತವಾಗಿ ನಡೆಯುತ್ತಿದೆ. ವಿದ್ಯುತ್​ ಇಲ್ಲ, ಬಹುತೇಕ ಎಲ್ಲ ರಸ್ತೆಗಳೂ ಮುಳುಗಿವೆ. ಇದು ತುಂಬ ಗಂಭೀರ ಪರಿಸ್ಥಿತಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಘೋಷಿಸಿದ್ದಾರೆ. ನಗರದ ಅನೇಕ ಜಲಾಶಯಗಳಿಗೆ ಕಟ್ಟಲಾಗಿದ್ದ ಕಟ್ಟಡಗಳು ಒಡೆದಿವೆ. ಅನೇಕರು ಗಾಯಗೊಂಡಿದ್ದಾರೆ. ಜನರ ಜೀವ ಹೋಗುವ ಜತೆ ಅಪಾರ ಪ್ರಮಾಣದ ಬೆಳೆನಾಶವೂ ಆಗಿದೆ ಎಂದೂ ಜಿನ್​ಪಿಂಗ್​ ಹೇಳಿದ್ದಾರೆ.

ಐಫೋನ್​ ಸಿಟಿ ಹೆನಾನ್​ನ ಝೆಂಗ್​ಝು ನಗರದಲ್ಲಿ ವಿಶ್ವದ ಅತಿದೊಡ್ಡ ಐಫೋನ್​ ತಯಾರಿಕಾ ಘಟಕವಿದೆ. ತೈವಾನ್​ನ ಹಾನ್ ಹೈ ಪ್ರಿಸಿಷಿನ್​ ಕಂಪನಿಯ ಒಡೆತನದಲ್ಲಿರುವ ಘಟಕ ಇತ್ತೀಚೆಗೆ ಐಫೋನ್​ ಉತ್ಪಾದನೆ ಹೆಚ್ಚಿಸಲು ಸಕಲ ತಯಾರಿ ಮಾಡುತ್ತಿತ್ತು. ಆದರೀಗ ಪ್ರವಾಹದಿಂದ ಈ ಘಟಕಕ್ಕೂ ಸಂಕಷ್ಟ ಬಂದೊದಗಿದೆ.

ಇದರೊಂದಿಗೆ ಹೆನಾನ್​ ಪ್ರಾಂತ್ಯ ಚೀನಾದಲ್ಲಿ ಎರಡನೇ ದೊಡ್ಡ ಆಹಾರ ಪೂರೈಕೆ ಪ್ರಾಂತ್ಯವಾಗಿದೆ. ದೇಶದಲ್ಲಿ ಒಟ್ಟಾರೆ ಉತ್ಪತ್ತಿಯಾಗುವ ಗೋಧಿಯಲ್ಲಿ ಕಾಲು ಭಾಗ ಈ ಹೆನಾನ್​ ಪ್ರಾಂತ್ಯದಲ್ಲೇ ಉತ್ಪಾದನೆ ಆಗುತ್ತದೆ. ಹಾಗೇ, ಕಲ್ಲಿದ್ದಲು ಮತ್ತು ಲೋಹದ ಪ್ರಮುಖ ಕೇಂದ್ರವೂ ಹೌದು. ಇಲ್ಲಿಗೆ ಒದಗಿರುವ ವಿಪತ್ತಿನಿಂದ ಈಗಾಗಲೇ ಬೆಳೆನಾಶವಾಗಿದ್ದು, ಸಹಜವಾಗಿಯೇ ಚೀನಾ ಸರ್ಕಾರಕ್ಕೆ ಆತಂಕ ಶುರುವಾಗಿದೆ.

ಇದನ್ನೂ ಓದಿ: ಮಠದ ಉತ್ತರಾಧಿಕಾರಿ ನೇಮಿಸಲು ರಾಜಕಾರಣಿಗಳು ಹೋಗಲ್ಲ; ರಾಜಕೀಯಕ್ಕೆ ಮಠಾಧೀಶರು ಬರಬೇಡಿ: ಹೆಚ್.ವಿಶ್ವನಾಥ್

18 inches of rain in 24 hours Heavy Flood in Chinas iPhone city

ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?