AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷಗಳಿಂದ ನಿರುದ್ಯೋಗಿ, ತಿಂಗಳ ಖರ್ಚಿಗೆ 3 ಗರ್ಲ್​ಫ್ರೆಂಡ್ಸ್​, ಕೊನೆಗೂ ಆತನನ್ನು ಜೈಲಿಗಟ್ಟಿದ್ಹೇಗೆ?

ಪ್ರೀತಿ(Love) ಹೆಸರಿನಲ್ಲಿ ವಂಚಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಆತ ನಿರುದ್ಯೋಗಿ ಕಳೆದ ಎರಡು ವರ್ಷಗಳಿಂದ ದುಡಿಮೆ ಇಲ್ಲ, ಆದರೆ ಮೂವರು ಗರ್ಲ್​ ಫ್ರೆಂಡ್ಸ್ ಇದ್ದಾರೆ, ಅವರಿಗೆ ಪ್ರೀತಿ ಹೆಸರಿನಲ್ಲಿ ಮೋಸಮಾಡುತ್ತಾ ಇದುವರೆಗೆ 12 ಲಕ್ಷ ರೂ. ದೋಚಿದ್ದಾನೆ

3 ವರ್ಷಗಳಿಂದ ನಿರುದ್ಯೋಗಿ, ತಿಂಗಳ ಖರ್ಚಿಗೆ 3 ಗರ್ಲ್​ಫ್ರೆಂಡ್ಸ್​, ಕೊನೆಗೂ ಆತನನ್ನು ಜೈಲಿಗಟ್ಟಿದ್ಹೇಗೆ?
ಯುವತಿಯರುImage Credit source: NDTV
Follow us
ನಯನಾ ರಾಜೀವ್
|

Updated on: May 31, 2023 | 8:39 AM

ಪ್ರೀತಿ(Love) ಹೆಸರಿನಲ್ಲಿ ವಂಚಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಆತ ನಿರುದ್ಯೋಗಿ ಕಳೆದ ಎರಡು ವರ್ಷಗಳಿಂದ ದುಡಿಮೆ ಇಲ್ಲ, ಆದರೆ ಮೂವರು ಗರ್ಲ್​ ಫ್ರೆಂಡ್ಸ್ ಇದ್ದಾರೆ, ಅವರಿಗೆ ಪ್ರೀತಿ ಹೆಸರಿನಲ್ಲಿ ಮೋಸಮಾಡುತ್ತಾ ಇದುವರೆಗೆ 12 ಲಕ್ಷ ರೂ. ದೋಚಿದ್ದಾನೆ.  ಮೂವರು ಯುವತಿಯರಿಗೂ ಒಬ್ಬರಿಗೊಬ್ಬರು ಪರಿಚಯವಿಲ್ಲ, ಒಂದು ದಿನ ಆತ ಕುಡಿದು ನಶೆಯಲ್ಲಿ ಮಲಗಿರುವ ವೇಳೆ ಚೆನ್​ಹ್ಯಾಂಗ್​ಗೆ ಅನುಮಾನ ಬಂದು ಶಿವೈ ಮೊಬೈಲ್ ಪರಿಶೀಲಿಸಿದ್ದಳು, ನನ್ನ ಕರೆಗಳನ್ನು ಏಕೆ ಸ್ವೀಕರಿಸುತ್ತಿಲ್ಲ ಎನ್ನುವ ಮಹಿಳೆಯ ಸಂದೇಶವನ್ನು ನೋಡಿದ್ದಾಳೆ, ಬಳಿಕ ಚೆನ್ ಕ್ಸಿಯಾವೋ ಫ್ಯಾನ್ ಎಂಬ ಮಹಿಳೆಯನ್ನು ಸಂಪರ್ಕಿಸಿದಳು. ಶಿವೈ ಚೆನ್ ಹಾಗೂ ಕ್ಸಿಯಾವೊ ಇಬ್ಬರನ್ನೂ ಮದುವೆಯಾಗಲು ಬಯಸಿದ್ದ.

ಫೆಬ್ರವರಿ 10 ರಂದು ಝಾವೋ ಲಿನ್ ಎಂಬ ಮೂರನೇ ಮಹಿಳೆಯಿಂದ ಚೆನ್​ಗೆ ಕರೆ ಬಂತು, ಆಗ ಆಕೆ ತಾನು ಶಿವೈ ಗೆಳತಿ ಎಂದು ಹೇಳಿಕೊಂಡಳು. ತಮ್ಮಿಂದ ಪಡೆದಿರುವ ಹಣವನ್ನು ಮರಳಿ ನೀಡುವಂತೆ ಮೂವರು ಮಹಿಳೆಯರು ಒತ್ತಡ ಹೇರಿದ್ದರು, ಏನಾದರೂ ಹಣ ವಾಪಸ್ ಬರಲಿಲ್ಲ, ಹೀಗಾಗಿ ಪೊಲೀಸರ ಬಳಿ ಮೂವರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ‌ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ

2022 ರ ಅಕ್ರೋಬರ್​ನಲ್ಲಿ ಚೆನ್​, ಜೂನ್​ನಲ್ಲಿ ಕ್ಸಿಯಾವೋ ಹಾಗೂ 2021ರಿಂದ ಝಾವೋ ಜತೆಯಲ್ಲಿ ಆತ ಡೇಟಿಂಗ್ ಮಾಡುತ್ತಿದ್ದ. 202ರಲ್ಲೇ ಆತ ಕೆಲಸ ಬಿಟ್ಟಿದ್ದ, ಮಹಿಳೆಯರು ನೀಡಿರುವ ಹಣವನ್ನು ಸಾಲ ತೀರಿಸಲು ಬಳಸುತ್ತಿದ್ದ. ಬಳಿಕ ಆತನನ್ನು ಜೈಲಿಗೆ ಕಳುಹಿಸಿದ್ದಾರೆ, ಉತ್ತಮ ಸ್ನೇಹಿತರಾದ ಮೂವರು ಮಹಿಳೆಯರು ಒಟ್ಟಿಗೆ ವಿದೇಶ ಪ್ರವಾಸವನ್ನು ಕೂಡ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ