ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು.

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ
ಪ್ರಾತಿನಿಧಿಕ ಚಿತ್ರ
Follow us
|

Updated on: Mar 23, 2021 | 6:01 PM

ಜಗತ್ತಿನಾದ್ಯಂತ ಕೆಲವು ಕಂಪನಿಗಳು ಇವೆ. ಆ ಕಂಪನಿಗಳು ದೊಡ್ಡ ಮಟ್ಟದ ಹೆಸರು ಮಾಡಿರುವ ಜತೆಗೆ ತಮ್ಮ ಉದ್ಯೋಗಿಗಳಿಗೂ ಅಷ್ಟೇ ಸೌಕರ್ಯವನ್ನು ಕೊಡುತ್ತವೆ. ಅಂಥ ಕಂಪನಿಗಳಲ್ಲೊಂದಾದ Murphy-Goode Winery (ಮರ್ಫಿ ಗುಡ್​ ವೈನರಿ)ಯಲ್ಲೀಗ ವೆಕೆನ್ಸಿ ಖಾಲಿಯಿದೆ. ಈ ಹುದ್ದೆಗೆ ನೇಮಕ ಆಗುವವರು ನಿಜಕ್ಕೂ ಅದೃಷ್ಟವಂತರೇ ಎಂದು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಈ ಕಂಪನಿ ಉದ್ಯೋಗಿಗೆ ಆಫರ್​ ಮಾಡಿದ್ದು ತಿಂಗಳಿಗೆ ಬರೋಬ್ಬರಿ 7ಲಕ್ಷದ 24ಸಾವಿರ ರೂ. ಸಂಬಳ. ಅದರೊಟ್ಟಿಗೆ ಮತ್ತೆ ಕೆಲವು ಸೌಕರ್ಯಗಳನ್ನೂ ನೀಡುವುದಾಗಿ ಹೇಳಿಕೊಂಡಿದೆ.

ಈ ಕಂಪನಿ ಇರುವುದು ಕ್ಯಾಲಿಫೋರ್ನಿಯಾದ ಸೊನೊಮಾದಲ್ಲಿ. ಈಗ ಕರೆ ನೀಡಿರುವುದು ಒಂದು ವರ್ಷದ ಅವಧಿಯ ಪೋಸ್ಟ್​ಗೆ. ಈ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೋ ಅವರಿಗೆ ಭರ್ಜರಿ ಸ್ಯಾಲರಿ ಜತೆ ಉಚಿತ-ಊಟದ ವ್ಯವಸ್ಥೆಯನ್ನು ಕಂಪನಿಯೇ ಮಾಡಲಿದೆ. ವೈನ್​ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ಯಾರಾದರೂ ಪ್ರಯತ್ನ ಮಾಡಬಹುದು. ನೇಮಕವಾದ ಮೊದಲ 90 ದಿನಗಳು, ಜ್ಯೂನಿಯರ್​ ವೈನ್ ತಯಾರಕ, Murphy-Goode ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರ ಪುತ್ರನಾದ ಡೇವ್​ ರೆಡಿ ಅವರೊಟ್ಟಿಗೆ ಕೆಲಸ ಮಾಡಬೇಕು. ಇದು ಒಂದು ತರಬೇತಿಯಂತೆ ಇರುತ್ತದೆ.

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು. ಸಂವಹನದಲ್ಲಿ ಸ್ಟ್ರಾಂಗ್​ ಇರಬೇಕು. 21ವರ್ಷ ಆಗಿಬೇಕು. ಇನ್ನು ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮಾಹಿತಿಗಳನ್ನೂ ಒಳಗೊಂಡ ವಿಡಿಯೋವೊಂದನ್ನು ಕಂಪನಿಗೆ ಕಳಿಸಬೇಕು. ನಂತರ ಕಂಪನಿ ಅಭ್ಯರ್ಥಿಯ ಬಗ್ಗೆ ತನಿಖೆ ನಡೆಸಿ, ಸೂಕ್ತರನ್ನು ನೇಮಕ ಮಾಡಿಕೊಳ್ಳುತ್ತದೆ. ನಿಮಗೇನಾದರೂ ಇಂಟರೆಸ್ಟ್​ ಇದ್ದರೆ ಜೂನ್​ 30ರೊಳಗೆ ಅಪ್ಲೈ ಮಾಡಿ. ಒಂದೇ ವರ್ಷದ ಜಾಬ್​ ಆದ್ರೂ ಕೈ ತುಂಬ ದುಡಿಯಬಹುದು ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ…!

ದೇವರ ದರ್ಶನಕ್ಕೂ ಮುಂಚೇ ನಾವು ನಂಬಿರೋ ದೇವರ ದರ್ಶನ ಆಯ್ತು ಎಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ