Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು.

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Mar 23, 2021 | 6:01 PM

ಜಗತ್ತಿನಾದ್ಯಂತ ಕೆಲವು ಕಂಪನಿಗಳು ಇವೆ. ಆ ಕಂಪನಿಗಳು ದೊಡ್ಡ ಮಟ್ಟದ ಹೆಸರು ಮಾಡಿರುವ ಜತೆಗೆ ತಮ್ಮ ಉದ್ಯೋಗಿಗಳಿಗೂ ಅಷ್ಟೇ ಸೌಕರ್ಯವನ್ನು ಕೊಡುತ್ತವೆ. ಅಂಥ ಕಂಪನಿಗಳಲ್ಲೊಂದಾದ Murphy-Goode Winery (ಮರ್ಫಿ ಗುಡ್​ ವೈನರಿ)ಯಲ್ಲೀಗ ವೆಕೆನ್ಸಿ ಖಾಲಿಯಿದೆ. ಈ ಹುದ್ದೆಗೆ ನೇಮಕ ಆಗುವವರು ನಿಜಕ್ಕೂ ಅದೃಷ್ಟವಂತರೇ ಎಂದು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಈ ಕಂಪನಿ ಉದ್ಯೋಗಿಗೆ ಆಫರ್​ ಮಾಡಿದ್ದು ತಿಂಗಳಿಗೆ ಬರೋಬ್ಬರಿ 7ಲಕ್ಷದ 24ಸಾವಿರ ರೂ. ಸಂಬಳ. ಅದರೊಟ್ಟಿಗೆ ಮತ್ತೆ ಕೆಲವು ಸೌಕರ್ಯಗಳನ್ನೂ ನೀಡುವುದಾಗಿ ಹೇಳಿಕೊಂಡಿದೆ.

ಈ ಕಂಪನಿ ಇರುವುದು ಕ್ಯಾಲಿಫೋರ್ನಿಯಾದ ಸೊನೊಮಾದಲ್ಲಿ. ಈಗ ಕರೆ ನೀಡಿರುವುದು ಒಂದು ವರ್ಷದ ಅವಧಿಯ ಪೋಸ್ಟ್​ಗೆ. ಈ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೋ ಅವರಿಗೆ ಭರ್ಜರಿ ಸ್ಯಾಲರಿ ಜತೆ ಉಚಿತ-ಊಟದ ವ್ಯವಸ್ಥೆಯನ್ನು ಕಂಪನಿಯೇ ಮಾಡಲಿದೆ. ವೈನ್​ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ಯಾರಾದರೂ ಪ್ರಯತ್ನ ಮಾಡಬಹುದು. ನೇಮಕವಾದ ಮೊದಲ 90 ದಿನಗಳು, ಜ್ಯೂನಿಯರ್​ ವೈನ್ ತಯಾರಕ, Murphy-Goode ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರ ಪುತ್ರನಾದ ಡೇವ್​ ರೆಡಿ ಅವರೊಟ್ಟಿಗೆ ಕೆಲಸ ಮಾಡಬೇಕು. ಇದು ಒಂದು ತರಬೇತಿಯಂತೆ ಇರುತ್ತದೆ.

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು. ಸಂವಹನದಲ್ಲಿ ಸ್ಟ್ರಾಂಗ್​ ಇರಬೇಕು. 21ವರ್ಷ ಆಗಿಬೇಕು. ಇನ್ನು ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮಾಹಿತಿಗಳನ್ನೂ ಒಳಗೊಂಡ ವಿಡಿಯೋವೊಂದನ್ನು ಕಂಪನಿಗೆ ಕಳಿಸಬೇಕು. ನಂತರ ಕಂಪನಿ ಅಭ್ಯರ್ಥಿಯ ಬಗ್ಗೆ ತನಿಖೆ ನಡೆಸಿ, ಸೂಕ್ತರನ್ನು ನೇಮಕ ಮಾಡಿಕೊಳ್ಳುತ್ತದೆ. ನಿಮಗೇನಾದರೂ ಇಂಟರೆಸ್ಟ್​ ಇದ್ದರೆ ಜೂನ್​ 30ರೊಳಗೆ ಅಪ್ಲೈ ಮಾಡಿ. ಒಂದೇ ವರ್ಷದ ಜಾಬ್​ ಆದ್ರೂ ಕೈ ತುಂಬ ದುಡಿಯಬಹುದು ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ…!

ದೇವರ ದರ್ಶನಕ್ಕೂ ಮುಂಚೇ ನಾವು ನಂಬಿರೋ ದೇವರ ದರ್ಶನ ಆಯ್ತು ಎಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್