AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು.

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 23, 2021 | 6:01 PM

Share

ಜಗತ್ತಿನಾದ್ಯಂತ ಕೆಲವು ಕಂಪನಿಗಳು ಇವೆ. ಆ ಕಂಪನಿಗಳು ದೊಡ್ಡ ಮಟ್ಟದ ಹೆಸರು ಮಾಡಿರುವ ಜತೆಗೆ ತಮ್ಮ ಉದ್ಯೋಗಿಗಳಿಗೂ ಅಷ್ಟೇ ಸೌಕರ್ಯವನ್ನು ಕೊಡುತ್ತವೆ. ಅಂಥ ಕಂಪನಿಗಳಲ್ಲೊಂದಾದ Murphy-Goode Winery (ಮರ್ಫಿ ಗುಡ್​ ವೈನರಿ)ಯಲ್ಲೀಗ ವೆಕೆನ್ಸಿ ಖಾಲಿಯಿದೆ. ಈ ಹುದ್ದೆಗೆ ನೇಮಕ ಆಗುವವರು ನಿಜಕ್ಕೂ ಅದೃಷ್ಟವಂತರೇ ಎಂದು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಈ ಕಂಪನಿ ಉದ್ಯೋಗಿಗೆ ಆಫರ್​ ಮಾಡಿದ್ದು ತಿಂಗಳಿಗೆ ಬರೋಬ್ಬರಿ 7ಲಕ್ಷದ 24ಸಾವಿರ ರೂ. ಸಂಬಳ. ಅದರೊಟ್ಟಿಗೆ ಮತ್ತೆ ಕೆಲವು ಸೌಕರ್ಯಗಳನ್ನೂ ನೀಡುವುದಾಗಿ ಹೇಳಿಕೊಂಡಿದೆ.

ಈ ಕಂಪನಿ ಇರುವುದು ಕ್ಯಾಲಿಫೋರ್ನಿಯಾದ ಸೊನೊಮಾದಲ್ಲಿ. ಈಗ ಕರೆ ನೀಡಿರುವುದು ಒಂದು ವರ್ಷದ ಅವಧಿಯ ಪೋಸ್ಟ್​ಗೆ. ಈ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೋ ಅವರಿಗೆ ಭರ್ಜರಿ ಸ್ಯಾಲರಿ ಜತೆ ಉಚಿತ-ಊಟದ ವ್ಯವಸ್ಥೆಯನ್ನು ಕಂಪನಿಯೇ ಮಾಡಲಿದೆ. ವೈನ್​ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ಯಾರಾದರೂ ಪ್ರಯತ್ನ ಮಾಡಬಹುದು. ನೇಮಕವಾದ ಮೊದಲ 90 ದಿನಗಳು, ಜ್ಯೂನಿಯರ್​ ವೈನ್ ತಯಾರಕ, Murphy-Goode ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರ ಪುತ್ರನಾದ ಡೇವ್​ ರೆಡಿ ಅವರೊಟ್ಟಿಗೆ ಕೆಲಸ ಮಾಡಬೇಕು. ಇದು ಒಂದು ತರಬೇತಿಯಂತೆ ಇರುತ್ತದೆ.

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು. ಸಂವಹನದಲ್ಲಿ ಸ್ಟ್ರಾಂಗ್​ ಇರಬೇಕು. 21ವರ್ಷ ಆಗಿಬೇಕು. ಇನ್ನು ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮಾಹಿತಿಗಳನ್ನೂ ಒಳಗೊಂಡ ವಿಡಿಯೋವೊಂದನ್ನು ಕಂಪನಿಗೆ ಕಳಿಸಬೇಕು. ನಂತರ ಕಂಪನಿ ಅಭ್ಯರ್ಥಿಯ ಬಗ್ಗೆ ತನಿಖೆ ನಡೆಸಿ, ಸೂಕ್ತರನ್ನು ನೇಮಕ ಮಾಡಿಕೊಳ್ಳುತ್ತದೆ. ನಿಮಗೇನಾದರೂ ಇಂಟರೆಸ್ಟ್​ ಇದ್ದರೆ ಜೂನ್​ 30ರೊಳಗೆ ಅಪ್ಲೈ ಮಾಡಿ. ಒಂದೇ ವರ್ಷದ ಜಾಬ್​ ಆದ್ರೂ ಕೈ ತುಂಬ ದುಡಿಯಬಹುದು ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ…!

ದೇವರ ದರ್ಶನಕ್ಕೂ ಮುಂಚೇ ನಾವು ನಂಬಿರೋ ದೇವರ ದರ್ಶನ ಆಯ್ತು ಎಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು

Follow Us
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!