AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಾಜ್ ಷರೀಫ್ ವಿರುದ್ಧ ನಿಂತಿತ್ತು ಪಾಕ್ ಸೇನೆ, ನ್ಯಾಯಾಂಗ; ಸೋರಿಕೆಯಾದ ಆಡಿಯೊ ಕ್ಲಿಪ್​​ನಲ್ಲಿ ಮಾಹಿತಿ ಬಯಲು

ಪತ್ರಕರ್ತ ಅಹ್ಮದ್ ನೂರಾನಿ ಅವರು ಹಂಚಿಕೊಂಡಿರುವ ಆಡಿಯೊ ಕ್ಲಿಪ್, ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ ಮತ್ತು ಸೇನೆಯ ಕುರಿತು "ಸಂಸ್ಥೆ" ಎಂದು ಉಲ್ಲೇಖಿಸಲಾದ ಅವರ ಅಧೀನ ಅಧಿಕಾರಿಯ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ.

ನವಾಜ್ ಷರೀಫ್ ವಿರುದ್ಧ ನಿಂತಿತ್ತು ಪಾಕ್ ಸೇನೆ, ನ್ಯಾಯಾಂಗ; ಸೋರಿಕೆಯಾದ ಆಡಿಯೊ ಕ್ಲಿಪ್​​ನಲ್ಲಿ ಮಾಹಿತಿ ಬಯಲು
ನವಾಜ್ ಶರೀಫ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 22, 2021 | 4:18 PM

Share

ಕರಾಚಿ: ಪಾಕಿಸ್ತಾನದಲ್ಲಿ (Pakistan) ಸೋರಿಕೆಯಾದ ಆಡಿಯೊ ಕ್ಲಿಪ್ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರನ್ನು 2018 ರ ಚುನಾವಣೆಗೆ ಮುನ್ನ ಕಾನೂನು ತೊಂದರೆಗಳಲ್ಲಿ ಮತ್ತು ರಾಜಕೀಯ ಕ್ರಮದಿಂದ ದೂರವಿಡುವಲ್ಲಿ ದೇಶದ ಸಶಕ್ತ ಸೇನೆಯ ಪಾತ್ರವನ್ನು ದೃಢಪಡಿಸಿದೆ. ಪತ್ರಕರ್ತ ಅಹ್ಮದ್ ನೂರಾನಿ (Ahmed Noorani) ಅವರು ಹಂಚಿಕೊಂಡಿರುವ ಆಡಿಯೊ ಕ್ಲಿಪ್, ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ (Saqib Nisar) ಮತ್ತು ಸೇನೆಯ ಕುರಿತು “ಸಂಸ್ಥೆ” ಎಂದು ಉಲ್ಲೇಖಿಸಲಾದ ಅವರ ಅಧೀನ ಅಧಿಕಾರಿಯ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ. ಷರೀಫ್ ಅವರ ಹೆಸರನ್ನು “ಮಿಯಾನ್ ಸಾಹಿಬ್” ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ,ಅಮೆರಿಕದ ಸಂಸ್ಥೆಯೊಂದು ಆಡಿಯೊ ಎಡಿಟ್ ಮಾಡಿಲ್ಲ ಎಂದು ಹೇಳಿದೆ.

ಆಡಿಯೊ  ಕ್ಲಿಪ್‌ನಲ್ಲಿರುವ ಸಂಭಾಷಣೆಯನ್ನು ನ್ಯೂಸ್ 18 ಪ್ರಕಟಿಸಿದ್ದು ಅದು ಹೀಗಿದೆ ನ್ಯಾಯಮೂರ್ತಿ ನಿಸಾರ್: ನಾನು ಅದರ ಬಗ್ಗೆ ನೇರವಾಗಿ ಹೇಳುತ್ತೇನೆ. ಮಿಯಾನ್ ಸಾಹಿಬ್‌ಗೆ ದಂಡ ವಿಧಿಸಬೇಕೆಂದು ಬಯಸುವ ಸಂಸ್ಥೆ ಇದೆ. ನಾವು ಮಿಯಾನ್ ಸಾಹಿಬ್ ಅವರನ್ನು ಕೆಳಗಿಳಿಸಬೇಕೆಂದು ಅವರು ಬಯಸುತ್ತಾರೆ, ಅವರ ಮಗಳು (ಮರಿಯಮ್) ಗೂ ಶಿಕ್ಷೆಯಾಗಬೇಕು. ಎರಡನೇ ಧ್ವನಿ: ನನ್ನ ಅಭಿಪ್ರಾಯದಲ್ಲಿ ಮರಿಯಮ್ ಶಿಕ್ಷೆಗೆ ಅರ್ಹಳಲ್ಲ … ನ್ಯಾಯಮೂರ್ತಿ ನಿಸಾರ್: ನೀವು ಹೇಳಿದ್ದು ಸರಿ. ನಾನು ನನ್ನ ಸ್ನೇಹಿತರೊಂದಿಗೂ ಮಾತನಾಡಿದೆ, ಆದರೆ ಅವರು ಒಪ್ಪಲಿಲ್ಲ. ಆದ್ದರಿಂದ ಅದು ಇರಲಿ … ಕೆಲವು ದಿನಗಳ ನಂತರ ನೀಡಿದ ತೀರ್ಪು ಷರೀಫ್ ಅವರನ್ನು ಚುನಾವಣೆಗೆ ಅನರ್ಹರೆಂದು ಘೋಷಿಸಿತು. ಈ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಗೆದ್ದಿತು.

ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಷರೀಫ್ ಅವರ ನಿಕಟ ಮೂಲವೊಂದು ಸಮರ್ಥನೆಯನ್ನು ಸಮರ್ಥಿಸಿಕೊಂಡಿದೆ. “ಈ ಪಿತೂರಿ ಪಬ್ಲಿಕ್ ಡೊಮೇನ್‌ನಲ್ಲಿದೆ. ಇದು ದೇಶದ ಸೇನೆ ಮತ್ತು ನ್ಯಾಯಾಂಗದ ಮೇಲೆ ಗಂಭೀರ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುತ್ತದೆ. ಮಿಯಾನ್ ಸಾಹಿಬ್ ತಪ್ಪು ಮಾಡದಿದ್ದರೂ ತಪ್ಪಿಗಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅವರು ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳಿಗಾಗಿ ಎಲ್ಲವನ್ನೂ ಮಾಡುತ್ತಿದರು ” ಎಂದು ಮೂಲಗಳು ತಿಳಿಸಿವೆ.

ಗಿಲ್ಗಿಟ್-ಬಾಲ್ಟಿಸ್ತಾನ್ ಮುಖ್ಯ ನ್ಯಾಯಮೂರ್ತಿ ರಾಣಾ ಎಂ ಶಮೀಮ್ ಕೂಡ ನವಾಜ್ ಷರೀಫ್ ಪ್ರಕರಣದಲ್ಲಿ ಸಾಕಿಬ್ ನಿಸಾರ್ ನ್ಯಾಯಾಂಗ ಮಿತಿಯನ್ನು ಮೀರಿದ್ದಾರೆ ಎಂದು ಆರೋಪಿಸಿದ್ದರು. 2018 ರ ಚುನಾವಣೆಗೆ ಮುನ್ನ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರಿಯಮ್ ನವಾಜ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ನಿಸಾರ್ ಅವರು ಹೈಕೋರ್ಟ್ ನ್ಯಾಯಾಧೀಶರಿಗೆ ಆದೇಶ ನೀಡಿದ್ದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ಅಫಿಡವಿಟ್‌ನಲ್ಲಿ ಶಮೀಮ್ ಘೋಷಿಸಿದರು. ಷರೀಫ್ ಅವರ ನಿಕಟ ಮೂಲಗಳು ಕೂಡಾ ಸೇನೆಯ ಪಾತ್ರವನ್ನು ಊಹಿಸಿದ್ದವು.

ನ್ಯೂಸ್ 18 ಈ ತಿಂಗಳ ಆರಂಭದಲ್ಲಿ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳಲು ಅವಕಾಶ ಹೊಂದಿರಬಹುದು ಮತ್ತು ಬಹುಶಃ ಸಕ್ರಿಯ ರಾಜಕೀಯದಲ್ಲಿ ತೊಡಗಬಹುದು ಎಂದು ವರದಿ ಮಾಡಿತ್ತು. ಅದೇ ವೇಳೆ ಇಮ್ರಾನ್ ಖಾನ್ ಮತ್ತು ಸೇನೆಯ ನಡುವೆ ಅಧಿಕಾರದ ಜಗಳ ಆರಂಭವಾಗಿದೆ ಎಂದು ವರದಿಯಾಗಿದೆ.

ಅವೆನ್‌ಫೀಲ್ಡ್ ಪ್ರಾಪರ್ಟೀಸ್ ಮತ್ತು ಅಲ್-ಅಜೀಜಿಯಾ ಸ್ಟೀಲ್ ಮಿಲ್ಸ್ ಎಂಬ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಷರೀಫ್ ಅವರನ್ನು ಡಿಸೆಂಬರ್ 2019 ರಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ತನ್ನ ವಿರುದ್ಧದ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಜರಾಗಲು ವಿಫಲವಾದ ನಂತರ ಘೋಷಿತ ಅಪರಾಧಿ ಎಂದು ಘೋಷಿಸಿತು. 2018 ರಲ್ಲಿ ಪಾಕಿಸ್ತಾನದ ನ್ಯಾಯಾಲಯವು ಷರೀಫ್ ಅವರಿಗೆ ತಿಳಿದಿರುವ ಆದಾಯದ ಮೂಲಗಳನ್ನು ಮೀರಿ ಆಸ್ತಿಯನ್ನು ಹೊಂದಿದ್ದಕ್ಕಾಗಿ 10 ವರ್ಷಗಳ ಜೈಲು ಶಿಕ್ಷೆ ಮತ್ತು ಅವೆನ್‌ಫೀಲ್ಡ್ ಪ್ರಕರಣದ ತನಿಖೆಗೆ ಸಹಕರಿಸದಿದ್ದಕ್ಕಾಗಿ ಒಂದು ವರ್ಷ ಶಿಕ್ಷೆ ವಿಧಿಸಿತ್ತು.

ಅದೇ ವರ್ಷದಲ್ಲಿ ಅಕ್ರಮ ಹೂಡಿಕೆಗಳು ಪತ್ತೆಯಾದ ಅಲ್-ಅಜೀಜಿಯಾ ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ನಡೆಯಬೇಕಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ನಂತರ ನವಾಜ್ ಷರೀಫ್ ನವೆಂಬರ್ 2019 ರಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಕ್ರಿಸ್‌ಮಸ್ ಮೆರವಣಿಗೆ ಮಧ್ಯೆ ನುಗ್ಗಿದ ಎಸ್​​ಯುವಿ; 5 ಸಾವು, 40 ಮಂದಿಗೆ ಗಾಯ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ