AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ವೈಮಾನಿಕ ದಾಳಿಯ ನೆರವಿನಿಂದ ತಾಲಿಬಾನ್​​ನ್ನು ಹಿಮ್ಮೆಟ್ಟಿಸಿದ ಅಫ್ಘಾನ್ ಭದ್ರತಾ ಪಡೆ

ಸುನ್ನಿ ಪಶ್ತುನ್ ದಂಗೆಕೋರರ ಗುಂಪಿನ ವಿರುದ್ಧದ ಕ್ರಮವು ದೇಶದ ಪ್ರಮುಖ ಹೆದ್ದಾರಿಗಳನ್ನು ಸುರಕ್ಷಿತವಾಗಿರಿಸುವುದನ್ನು ಒಳಗೊಂಡಿದೆ. ಭದ್ರತಾ ಪಡೆಗಳ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅಫ್ಘಾನಿಸ್ತಾನ ಸರ್ಕಾರ ಮೇಮನಾ-ಅಕಿನಾ, ಹೈರಾಟನ್-ಕಾಬೂಲ್-ತೋರ್ಖಾಮ್, ಸ್ಪಿನ್ ಬೋಲ್ಡಾಕ್-ಕಂದಹಾರ್ ನಗರ-ಲಷ್ಕರ್ಗಾ ಮತ್ತು ಇಸ್ಲಾಂ ಖಲಾ-ಹೆರಾತ್ ಹೆದ್ದಾರಿಗಳ ಭದ್ರತೆಯನ್ನು ಹೆಚ್ಚಿಸಿದೆ.

ಅಮೆರಿಕದ ವೈಮಾನಿಕ ದಾಳಿಯ ನೆರವಿನಿಂದ ತಾಲಿಬಾನ್​​ನ್ನು ಹಿಮ್ಮೆಟ್ಟಿಸಿದ ಅಫ್ಘಾನ್ ಭದ್ರತಾ ಪಡೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 30, 2021 | 6:00 PM

Share

ಕಂದಹಾರ್: ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಮತ್ತು ಅಮೆರಿಕದ ವೈಮಾನಿಕ ದಾಳಿಯಿಂದಾಗಿ, ಅಫ್ಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಭದ್ರತಾ ಪಡೆಗಳು (ANDSF) ತಾಲಿಬಾನ್​​ನ್ನು ಹಿಮ್ಮೆಟಿಸಿವೆ.  ಇತ್ತೀಚಿನ ವರದಿಗಳ ಪ್ರಕಾರ ಘಜ್ನಿ, ತಖಾರ್, ಕಂದಹಾರ್, ಬಾಗ್ಲಾನ್.ಹೆಲ್ಮಾಂಡ್ ಸೇರಿದಂತೆ 20 ಪ್ರಾಂತ್ಯಗಳಲ್ಲಿ ತೀವ್ರ ಹೋರಾಟವನ್ನು ನಡೆಯುತ್ತಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಹೋರಾಟಗಾರರೊಂದಿಗೆ ತಾಲಿಬಾನ್ ಭಾರೀ ಸಾವುನೋವುಗಳನ್ನು ಅನುಭವಿಸಿದೆ. ಸುನ್ನಿ ಪಶ್ತುನ್ ದಂಗೆಕೋರರ ಗುಂಪಿನ ವಿರುದ್ಧದ ಕ್ರಮವು ದೇಶದ ಪ್ರಮುಖ ಹೆದ್ದಾರಿಗಳನ್ನು ಸುರಕ್ಷಿತವಾಗಿರಿಸುವುದನ್ನು ಒಳಗೊಂಡಿದೆ. ಭದ್ರತಾ ಪಡೆಗಳ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅಫ್ಘಾನಿಸ್ತಾನ ಸರ್ಕಾರ ಮೇಮನಾ-ಅಕಿನಾ, ಹೈರಾಟನ್-ಕಾಬೂಲ್-ತೋರ್ಖಾಮ್, ಸ್ಪಿನ್ ಬೋಲ್ಡಾಕ್-ಕಂದಹಾರ್ ನಗರ-ಲಷ್ಕರ್ಗಾ ಮತ್ತು ಇಸ್ಲಾಂ ಖಲಾ-ಹೆರಾತ್ ಹೆದ್ದಾರಿಗಳ ಭದ್ರತೆಯನ್ನು ಹೆಚ್ಚಿಸಿದೆ.

ಅಫ್ಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಭದ್ರತಾ ಪಡೆಗಳು ಹೆದ್ದಾರಿಯುದ್ದಕ್ಕೂ ಹಲವಾರು ಗ್ರಾಮಗಳನ್ನು ತೆರವುಗೊಳಿಸಿತು ಮತ್ತು ಅಫ್ಘಾನಿಸ್ತಾನದ ಇಂಟೆಲಿಜೆನ್ಸ್ ವರದಿಗಳ ಪ್ರಕಾರ ಕನಿಷ್ಠ ಒಂಬತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಅಥವಾ IED ಗಳನ್ನು ನಿಷ್ಕ್ರಿಯಗೊಳಿಸಿತು. ಅವರು ಭಾರತ ನಿರ್ಮಿಸಿದ ಮತ್ತು ಹೆರಾತ್‌ನಲ್ಲಿನ ಸಲ್ಮಾ ಅಣೆಕಟ್ಟಿನ ಮೇಲಿನ ದಾಳಿಯನ್ನು ವಿಫಲಗೊಳಿಸಿದರು, ಇದರಲ್ಲಿ ಹಲವಾರು ತಾಲಿಬಾನ್ ಹೋರಾಟಗಾರರು ಕೊಲ್ಲಲ್ಪಟ್ಟರು ಮತ್ತು ಇತರ ಐದು ಮಂದಿ ಗಾಯಗೊಂಡರು.

ಕಾಬೂಲ್ ಮತ್ತು ಮಜರ್-ಇ-ಷರೀಫ್, ಜಲಾಲಾಬಾದ್, ಕಂದಹಾರ್ ನಗರ ಮತ್ತು ಹೆರಾತ್ ಸೇರಿದಂತೆ ಇತರ ಪ್ರಮುಖ ನಗರಗಳ ಭದ್ರತಾ ರಕ್ಷಣೆಯನ್ನು ಹೆಚ್ಚಿಸಲಾಗಿದೆ.

ಸ್ಥಳೀಯ ನಾಯಕರು ತಾಲಿಬಾನ್ ವಿರುದ್ಧ ಶಸ್ತ್ರಾಸ್ತ್ರ ಎತ್ತುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. ದೈಕುಂಡಿ ಮೂಲದ ಶಿಯಾ ಧರ್ಮಗುರು ಅಯತುಲ್ಲಾ ವಹೀಜಾದಾ, ಜನರನ್ನು ಪ್ರೇರೇಪಿಸಲು ಫತ್ವಾವನ್ನು ಕೂಡ ಹೊರಡಿಸಿದ್ದಾರೆ.

ಅಮೆರಿಕ ಪಡೆಗಳು, ಅವರು ಅಫ್ಘಾನಿಸ್ತಾನದಲ್ಲಿರುವ ತನಕ ಎಡಿಎಸ್ಎಫ್ ತಾಲಿಬಾನ್ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತಿದೆ. ಹಲವಾರು ವೈಮಾನಿಕ ದಾಳಿಗಳು- ಮಾನವರಹಿತ ಮತ್ತು ಮಾನವರಹಿತ ದಾಳಿಗಳಿಂದ ಪ್ರಮುಖ ತಾಲಿಬಾನ್ ನಾಯಕರನ್ನು ಕೊಂದಿದೆ. ಶಿಬರ್ಘಾನ್‌ನಲ್ಲಿ ಅತಿ ಹೆಚ್ಚು (81) ಮಂದಿ ಹತ್ಯೆಗೀಡಾಗಿದ್ದಾರೆ. ಅಮೆರಿಕದ ಪಡೆಗಳು ಕಂದಹಾರ್ ಮತ್ತು ಹೆಲ್ಮಂಡ್ ನಲ್ಲಿ ವಾಯುದಾಳಿ ನಡೆಸಿವೆ.

ಅಮೆರಿಕ ವಾಯುದಾಳಿಯನ್ನು ಖಂಡಿಸಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ “ಪರಿಣಾಮಗಳ” ಬಗ್ಗೆ ಎಚ್ಚರಿಸಿದ್ದಾರೆ.

ಅಫ್ಘಾನ್ ಭದ್ರತಾ ಪಡೆಗಳು ಪಾಕಿಸ್ತಾನದ ಸೇನಾ ಅಧಿಕಾರಿಗಳನ್ನು ಸಹ ಕೊಂದಿವೆ. ಪಾಕಿಸ್ತಾನವು ತಾಲಿಬಾನ್‌ಗಳನ್ನು ತಮ್ಮ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಬೆಂಬಲಿಸುತ್ತಿದೆ ಎಂಬ ಅಂಶವನ್ನು ಇದು ಸೂಚಿಸುತ್ತದೆ. ಅಪ್ಘಾನ್ ಸೇನೆಯ 209 ಕಾರ್ಪ್ಸ್ ಪ್ರಕಾರ, ಜಾವೇದ್ ಎಂಬ ಪಾಕಿಸ್ತಾನದ ಸೇನಾ ಅಧಿಕಾರಿಯನ್ನು ಗುಪ್ತಚರ ಸಂಸ್ಥೆ ಅಧಿಕಾರಿಗಳು ಹತ್ಯೆ ಮಾಡಿದ್ದಾರೆ. ಲೋಗರ್, ಪಾಕ್ತಿಯಾ ಮತ್ತು ಪಾಕ್ತಿಕಾ ಪ್ರಾಂತ್ಯಗಳಲ್ಲಿ ಜಾವೇದ್ ತಾಲಿಬಾನ್ ಅನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಪಾಕಿಸ್ತಾನದ ದಕ್ಷಿಣ ವಜೀರಿಸ್ತಾನದಲ್ಲಿ (ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ) ಮಂಗಳವಾರ ಅಫ್ಘಾನ್ ನಾಗರಿಕರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಮತ್ತು ಪಾಕಿಸ್ತಾನದ ಕಡೆಯಿಂದ ಅಫ್ಘಾನಿಸ್ತಾನದ ವಿರುದ್ಧದ ಅಘೋಷಿತ ಯುದ್ಧವನ್ನು ವಿರೋಧಿಸಲು ಪ್ರತಿಭಟನಾ ಮೆರವಣಿಗೆ ನಡೆಯಿತು, ಇದರಲ್ಲಿ ಹಲವಾರು ಅಮಾಯಕರು ಸಾವನ್ನಪ್ಪಿದ್ದಾರೆ. ಮೆರವಣಿಗೆಯನ್ನು ಪಶ್ತುನ್ ತಹಾಫುಜ್ ಮೂವ್‌ಮೆಂಟ್ (ಪಿಟಿಎಂ) ಆಯೋಜಿಸಿದೆ, ಇದರ ಮುಖ್ಯಸ್ಥ ಮಂಜೂರ್ ಪಶ್ತೀನ್ ಅಫ್ಘಾನಿಸ್ತಾನದ ಯುದ್ಧವು ಇಡೀ ಪ್ರದೇಶವನ್ನು ಬಡತನಕ್ಕೆಒಳಪಡಿಸಿದೆ ಎಂದು ಹೇಳಿದರು.

ಏತನ್ಮಧ್ಯೆ, ಅಮೆರಿಕ ಸೆಂಟ್ರಲ್ ಕಮಾಂಡ್ (CENTCOM) ನ ಕಮಾಂಡರ್ ಜನರಲ್ ಕೆನ್ನೆತ್ ಎಫ್ ಮೆಕೆಂಜಿ ಅವರು ಇತ್ತೀಚೆಗೆ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿಯನ್ನು ಭೇಟಿ ಮಾಡಿ ಭದ್ರತಾ ಪರಿಸ್ಥಿತಿ ಕುರಿತು ಚರ್ಚಿಸಿದರು. ಸಭೆಯ ನಂತರ, ಭಯೋತ್ಪಾದಕರ ವಿರುದ್ಧ ವೈಮಾನಿಕ ದಾಳಿ ಮುಂದುವರಿಸಲು ಅಮೆರಿಕ ಸಿದ್ಧವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  Taliban: ತಪ್ಪಿಸಿಕೊಳ್ಳಲು ನೋಡಿದ್ದಕ್ಕೆ ಕೊಂದೆವು; ಅಫ್ಘಾನಿಸ್ತಾನದ ಹಾಸ್ಯನಟನ ಹತ್ಯೆಗೆ ನಾವೇ ಕಾರಣ ಎಂದ ತಾಲಿಬಾನ್

(Afghanistan National Defence Security Forces begun the pushback against the Taliban )

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ