AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ತಾಲಿಬಾನಿಗಳಿಗೆ ಶರಣಾಗುವುದಿಲ್ಲ..ಅಂಥ ಪರಿಸ್ಥಿತಿ ಬಂದರೆ ನನ್ನ ತಲೆಗೆ ಎರಡು ಬಾರಿ ಗುಂಡು ಹೊಡಿ‘

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಶುರುವಾಗುತ್ತಿದ್ದಂತೆ ದೇಶದ ಪ್ರಮುಖ ನಾಯಕರೆಲ್ಲ ದೇಶ ತೊರೆದು ಹೋಗಿದ್ದಾರೆ. ಇಲ್ಲಿನ ಜನರಿಗೆ ಅವರ ಅಗತ್ಯ ಇತ್ತು ಎಂದು ಅಮರುಲ್ಲಾ ಸಾಲೇಹ್​ ಹೇಳಿದ್ದಾರೆ.

‘ನಾನು ತಾಲಿಬಾನಿಗಳಿಗೆ ಶರಣಾಗುವುದಿಲ್ಲ..ಅಂಥ ಪರಿಸ್ಥಿತಿ ಬಂದರೆ ನನ್ನ ತಲೆಗೆ ಎರಡು ಬಾರಿ ಗುಂಡು ಹೊಡಿ‘
ಅಮ್ರುಲ್ಲಾ ಸಾಲೇಹ್​
TV9 Web
| Updated By: Lakshmi Hegde|

Updated on: Sep 05, 2021 | 5:55 PM

Share

ತಮ್ಮನ್ನು ತಾವು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ, ಸದ್ಯ ಪಂಜಶಿರ್​ ಪ್ರಾಂತ್ಯದ ಹೋರಾಟಗಾರರೊಂದಿಗೆ ಸೇರಿರುವ ಅಮರುಲ್ಲಾ ಸಾಲೇಹ್, ಕಾಬೂಲ್​ ಹೇಗೆ ತಾಲಿಬಾನ್​ ಉಗ್ರರ ಕೈವಶವಾಯಿತು, ಅಂಥ ಕಷ್ಟಕರದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ನಾಯಕತ್ವ ಜನರನ್ನು ಹೇಗೆ ಕೈಬಿಟ್ಟಿತು ಎಂಬ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ. 48 ವರ್ಷದ ಅವರು, ತಾವು ತಾಲಿಬಾನಿಗಳಿಗೆ ಹೆದರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಶುರುವಾಗುತ್ತಿದ್ದಂತೆ ದೇಶದ ಪ್ರಮುಖ ನಾಯಕರೆಲ್ಲ ದೇಶ ತೊರೆದು ಹೋಗಿದ್ದಾರೆ. ಇಲ್ಲಿನ ಜನರಿಗೆ ಅವರ ಅಗತ್ಯ ಇತ್ತು. ಆ ಸಮಯದಲ್ಲೇ ಅವರನ್ನು ಬಿಟ್ಟು ಹೋಗಿದ್ದಾರೆ. ಹೀಗೆ ದೇಶ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾಗ ದೇಶದಿಂದ ಪಲಾಯನ ಮಾಡಿದವರು ಈ ಮಣ್ಣಿಗೆ ದ್ರೋಹ ಬಗೆದಿದ್ದಾರೆ ಎಂದು ಭಾವಿಸುತ್ತೇನೆ ಎಂದು ಸಾಲೇಹ್​ ಹೇಳಿದ್ದಾಗಿ ಯುಕೆ ಪತ್ರಿಕೆ ಡೇಲಿ ಮೇಲ್​ ವರದಿ ಮಾಡಿದೆ. ಹಾಗೇ, ಕಳೆದ ತಿಂಗಳು ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು, ಕಾಬೂಲ್​ಗೆ ಕಾಲಿಟ್ಟ ತಾಲಿಬಾನಿಗಳನ್ನು ಅಫ್ಘಾನಿಸ್ತಾನದ ಆಡಳಿತ ಎದುರಿಸುವುದು ಬಿಟ್ಟು, ಪಲಾಯನ ಮಾಡಿದ್ದನ್ನು ಕೂ ಡ ಅವರು ವಿವರಿಸಿದ್ದಾರೆ.

‘ಕಾಬೂಲ್​ ತಾಲಿಬಾನಿಗಳ ವಶ ಆಗುವುದಕ್ಕೂ ಮುನ್ನಾದಿನ ರಾತ್ರಿ ಪೊಲೀಸ್​ ಮುಖ್ಯಸ್ಥರು ನನಗೆ ಕರೆ ಮಾಡಿ, ಜೈಲಿನಲ್ಲಿ ದಂಗೆ ಎದ್ದಿದೆ. ತಾಲಿಬಾನಿ ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ನಾನು ಅಲ್ಲೇ ಒಂದು  ಆ್ಯಂಟಿ-ತಾಲಿಬಾನಿ ಕೈದಿ ಪಡೆಯನ್ನು ರಚಿಸಿ, ಅವರ ಬಳಿ ಪ್ರತಿದಂಗೆ ಏಳುವಂತೆ ಹೇಳಿದೆ.  ನಂತರ ಜೈಲಿನಲ್ಲಿ ಗಲಾಟೆ ನಿಯಂತ್ರಣಕ್ಕೆ ಬಂತು’ ಎಂದು ಅವರು ಹೇಳಿದ್ದಾರೆ. ಹಾಗೇ, ಎಲ್ಲ ನಾಯಕರೂ ಓಡಿಹೋದರೂ ನಾನು ದಾರಿ ಹುಡುಕುತ್ತಿದ್ದರೆ. ಇದೀಗ ಪಂಜಶಿರ್​ ಕಮಾಂಡರ್ ಆಗಿರುವ ಅಹ್ಮದ್​ ಮಸೂರ್​ ತಂದೆ ನನಗೆ ಮಾರ್ಗದರ್ಶಕರಾಗಿದ್ದವರು. ಅವರು ಪ್ರತಿರೋಧಿಸುತ್ತಿರುವ ವಿಷಯ ಗೊತ್ತಾಗಿ, ನಾನು ಮಸೂರ್​ಗೆ ಕರೆ ಮಾಡಿದೆ ಎಂದು ತಿಳಿಸಿದ್ದಾರೆ.

ನನ್ನ ತಲೆಗೆ ಶೂಟ್​ ಮಾಡು ! ‘ನಾನು ಕಾಬೂಲ್​​ನ್ನು ತೊರೆದು ಹೋಗುವಾಗ ನನ್ನ ಮನೆಗೆ ಹೋದೆ. ಅಲ್ಲಿದ್ದ ನನ್ನ ಪತ್ನಿ ಮತ್ತು ಮಗಳ ಫೋಟೋಗಳನ್ನೆಲ್ಲ ನಾಶ ಮಾಡಿದೆ. ನನ್ನ ಕಂಪ್ಯೂಟರ್​, ಅಗತ್ಯ ಡಿವೈಸ್​ಗಳನ್ನೆಲ್ಲ ತೆಗೆದುಕೊಂಡು ಹೊರಟೆ. ಹೊರಡುವುದಕ್ಕೂ ಮುನ್ನ, ನನ್ನ ಬಾಡಿಗಾರ್ಡ್ ಬಳಿ, ನಾವೀಗ ಪಂಜಶಿರ್​ಗೆ ಹೋಗುತ್ತಿದ್ದೇವೆ. ಆದರೆ ಅಲ್ಲೆಲ್ಲ ತಾಲಿಬಾನ್​ ಉಗ್ರರು ಇದ್ದಾರೆ. ದಾರಿಯುದ್ದಕ್ಕೂ ನಾವು ಹೋರಾಡಬೇಕಿದೆ. ಒಟ್ಟಾಗಿ ಹೋರಾಡೋಣ. ಹಾಗೊಮ್ಮೆ ನಾನು ಗಾಯಗೊಂಡರೆ ನೀನು ನನ್ನ ತಲೆಗೆ ಇನ್ನೆರಡು ಗುಂಡು ಹೊಡೆದು ಕೊಂದು ಬಿಡು..ತಾಲಿಬಾನಿಗಳಿಗೆ ಮಾತ್ರ ನಾನು ಶರಣಾಗುವುದಿವೆಂದು ಹೇಳಿದ್ದೆ’ ಎಂದು ಸಾಲೇಹ್​ ಹೇಳಿದ್ದಾಗಿ ಡೇಲಿ ಮೇಲ್​ನಲ್ಲಿ ಉಲ್ಲೇಖವಾಗಿದೆ.  ಈ ಹಿಂದಿನ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿರುವ ಸಾಲೇಹ್​, ಈಗಲೂ ಸಹ ಪಂಜಶಿರ್​ನಲ್ಲಿಯೇ ಇದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ