AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ

ಶಾಲೆಯ ಕೆಫೆಟೇರಿಯಾದಲ್ಲಿ ಮಗನೊಂದಿಗೆ ಊಟ ಮಾಡಲು ಹೋದ ಪೋಷಕರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಪೋಷಕರನ್ನು ಸಭೆಗೆಂದು ಆಹ್ವಾನಿಸಿದ್ದರು, ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಮಗನ ಜತೆ ಊಟ ಮಾಡಬೇಕೆಂದು ಪೋಷಕರು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದರು ಅದನ್ನು ಅತಿಕ್ರಮ ಪ್ರವೇಶ ಎಂದು ಹೇಳಿ ಪೋಷಕರನ್ನು ಪೊಲೀಸರು ಬಂಧಿಸಿ ಕರೆದೊಯ್ದಿರುವ ವಿಚಿತ್ರ ಘಟನೆ ಇದಾಗಿದೆ.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ
Image Credit source: NDTV
ನಯನಾ ರಾಜೀವ್
|

Updated on: Feb 09, 2024 | 8:56 AM

Share

ಸಾಮಾನ್ಯವಾಗಿ ಪೋಷಕರು ಶಾಲೆ(School)ಗಳಿಗೆ ಪೇರೆಂಟ್ಸ್-ಟೀಚರ್ ಮೀಟಿಂಗ್​ಗಳಿಗೆ ಹೋಗುತ್ತಾರೆ, ಆಗ ಮಕ್ಕಳೊಂದಿಗೆ ಕುಳಿತು ಊಟ ಮಾಡುವುದು ಸಾಮಾನ್ಯ. ಆದರೆ ಅಮೆರಿಕದ ಶಾಲೆಯಲ್ಲಿ ಮಗನ ಜತೆಗೆ ಊಟ ಮಾಡಲು ಕೆಫೆಟೇರಿಯಾಗೆ ಹೋಗಿದ್ದ ಪೋಷಕರನ್ನು ಬಂಧಿಸಿರುವ ಘಟನೆ ನಡೆದಿದೆ.

ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ, ಕ್ಯಾಲಿಫೋರ್ನಿಯಾ ಏರಿಯಾ ಸ್ಕೂಲ್ ಡಿಸ್ಟ್ರಿಕ್ಟ್​ನಲ್ಲಿ ಈ ಘಟನೆ ವರದಿಯಾಗಿದೆ. ಅಂದು ಶಾಲೆಯಲ್ಲಿ ಪೋಷಕರಿಗೆ ಸಭೆ ಇತ್ತು, ಮಧ್ಯಾಹ್ನ ಸ್ವಲ್ಪ ಬಿಡುವಿತ್ತು ಪೋಷಕರು ಹೇಗೂ ಶಾಲೆಗೆ ಬಂದಿದ್ದೀವಲ್ಲ ಮಗನ ಜತೆಗೆ ಊಟ ಮಾಡೋಣವೆಂದು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಾರೆ ಬಳಿಕ ಆ ಪೋಷಕರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಅಲ್ಲಿ ಪೋಷಕರಿಗೆ ಕೆಫೆಟೇರಿಯಾಗೆ ತೆರಳಲು ಅವಕಾಶವಿರುವುದಿಲ್ಲ, ಶಾಲಾ ಪ್ರಾಂಶುಪಾಲರು ಹಾಗೂ ಪೊಲೀಸರು ಅವರನ್ನು ಶಾಲೆಯ ಹೊರಗೆ ಕರೆದೊಯ್ದು ಕೈದಿಗಳಂತೆ ಕೋಳ ಹಾಕಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ಈ ಶಾಲೆಯಲ್ಲಿರುವುದು ಓರ್ವ ವಿದ್ಯಾರ್ಥಿ, ಓರ್ವ ಶಿಕ್ಷಕಿ ಮಾತ್ರ ಹಾಗಾದ್ರೆ ಆ ಗ್ರಾಮದಲ್ಲಿ ಮಕ್ಕಳೇ ಇಲ್ಲವೇ?

ಪೋಷಕರ ಮೇಲೆ ಯಾವ ಆರೋಪವಿದೆ ಎಂದು ಅವರು ಹೇಳಿಲ್ಲ, ಘಟನೆಯನ್ನು ಭದ್ರತೆ ಉಲ್ಲಂಘನೆ ಎಂದು ಕರೆದಿದ್ದಾರೆ. ಪೋಷಕರು ಹಾಗೆ ಶಾಲೆಯ ಎಲ್ಲೆಂದರಲ್ಲಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಇಂಟರ್​ನೆಟ್ ಬಳಕೆದಾರರು ಇದನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.

ಈ ಪ್ರಾಂಶುಪಾಲರನ್ನು ವಜಾ ಮಾಡಬೇಕು, ಮಗುವಿನೊಂದಿಗೆ ಊಟ ಮಾಡುವುದು ತಪ್ಪೇ, ಈ ಶಾಲೆಯಲ್ಲಿ ಅದೆಂಥಾ ನಿಯಮ ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೊಬ್ಬರು ನನ್ನ ಸಹೋದರಿ ಹೈಸ್ಕೂಲ್​ನಲ್ಲಿ ಓದುತ್ತಿದ್ದಾಳೆ, ಆದರೆ ಎಂದಿಗೂ ನನಗೆ ಇಂಥಹ ಅನುಭವವಾಗಿಲ್ಲ, ಈ ನಿಯಮ ಯಾವ ಶಾಲೆಗಳಲ್ಲೂ ಇಲ್ಲ ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ