ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ

ಶಾಲೆಯ ಕೆಫೆಟೇರಿಯಾದಲ್ಲಿ ಮಗನೊಂದಿಗೆ ಊಟ ಮಾಡಲು ಹೋದ ಪೋಷಕರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಪೋಷಕರನ್ನು ಸಭೆಗೆಂದು ಆಹ್ವಾನಿಸಿದ್ದರು, ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಮಗನ ಜತೆ ಊಟ ಮಾಡಬೇಕೆಂದು ಪೋಷಕರು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದರು ಅದನ್ನು ಅತಿಕ್ರಮ ಪ್ರವೇಶ ಎಂದು ಹೇಳಿ ಪೋಷಕರನ್ನು ಪೊಲೀಸರು ಬಂಧಿಸಿ ಕರೆದೊಯ್ದಿರುವ ವಿಚಿತ್ರ ಘಟನೆ ಇದಾಗಿದೆ.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ
Image Credit source: NDTV
Follow us
|

Updated on: Feb 09, 2024 | 8:56 AM

ಸಾಮಾನ್ಯವಾಗಿ ಪೋಷಕರು ಶಾಲೆ(School)ಗಳಿಗೆ ಪೇರೆಂಟ್ಸ್-ಟೀಚರ್ ಮೀಟಿಂಗ್​ಗಳಿಗೆ ಹೋಗುತ್ತಾರೆ, ಆಗ ಮಕ್ಕಳೊಂದಿಗೆ ಕುಳಿತು ಊಟ ಮಾಡುವುದು ಸಾಮಾನ್ಯ. ಆದರೆ ಅಮೆರಿಕದ ಶಾಲೆಯಲ್ಲಿ ಮಗನ ಜತೆಗೆ ಊಟ ಮಾಡಲು ಕೆಫೆಟೇರಿಯಾಗೆ ಹೋಗಿದ್ದ ಪೋಷಕರನ್ನು ಬಂಧಿಸಿರುವ ಘಟನೆ ನಡೆದಿದೆ.

ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ, ಕ್ಯಾಲಿಫೋರ್ನಿಯಾ ಏರಿಯಾ ಸ್ಕೂಲ್ ಡಿಸ್ಟ್ರಿಕ್ಟ್​ನಲ್ಲಿ ಈ ಘಟನೆ ವರದಿಯಾಗಿದೆ. ಅಂದು ಶಾಲೆಯಲ್ಲಿ ಪೋಷಕರಿಗೆ ಸಭೆ ಇತ್ತು, ಮಧ್ಯಾಹ್ನ ಸ್ವಲ್ಪ ಬಿಡುವಿತ್ತು ಪೋಷಕರು ಹೇಗೂ ಶಾಲೆಗೆ ಬಂದಿದ್ದೀವಲ್ಲ ಮಗನ ಜತೆಗೆ ಊಟ ಮಾಡೋಣವೆಂದು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಾರೆ ಬಳಿಕ ಆ ಪೋಷಕರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಅಲ್ಲಿ ಪೋಷಕರಿಗೆ ಕೆಫೆಟೇರಿಯಾಗೆ ತೆರಳಲು ಅವಕಾಶವಿರುವುದಿಲ್ಲ, ಶಾಲಾ ಪ್ರಾಂಶುಪಾಲರು ಹಾಗೂ ಪೊಲೀಸರು ಅವರನ್ನು ಶಾಲೆಯ ಹೊರಗೆ ಕರೆದೊಯ್ದು ಕೈದಿಗಳಂತೆ ಕೋಳ ಹಾಕಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ಈ ಶಾಲೆಯಲ್ಲಿರುವುದು ಓರ್ವ ವಿದ್ಯಾರ್ಥಿ, ಓರ್ವ ಶಿಕ್ಷಕಿ ಮಾತ್ರ ಹಾಗಾದ್ರೆ ಆ ಗ್ರಾಮದಲ್ಲಿ ಮಕ್ಕಳೇ ಇಲ್ಲವೇ?

ಪೋಷಕರ ಮೇಲೆ ಯಾವ ಆರೋಪವಿದೆ ಎಂದು ಅವರು ಹೇಳಿಲ್ಲ, ಘಟನೆಯನ್ನು ಭದ್ರತೆ ಉಲ್ಲಂಘನೆ ಎಂದು ಕರೆದಿದ್ದಾರೆ. ಪೋಷಕರು ಹಾಗೆ ಶಾಲೆಯ ಎಲ್ಲೆಂದರಲ್ಲಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಇಂಟರ್​ನೆಟ್ ಬಳಕೆದಾರರು ಇದನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.

ಈ ಪ್ರಾಂಶುಪಾಲರನ್ನು ವಜಾ ಮಾಡಬೇಕು, ಮಗುವಿನೊಂದಿಗೆ ಊಟ ಮಾಡುವುದು ತಪ್ಪೇ, ಈ ಶಾಲೆಯಲ್ಲಿ ಅದೆಂಥಾ ನಿಯಮ ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೊಬ್ಬರು ನನ್ನ ಸಹೋದರಿ ಹೈಸ್ಕೂಲ್​ನಲ್ಲಿ ಓದುತ್ತಿದ್ದಾಳೆ, ಆದರೆ ಎಂದಿಗೂ ನನಗೆ ಇಂಥಹ ಅನುಭವವಾಗಿಲ್ಲ, ಈ ನಿಯಮ ಯಾವ ಶಾಲೆಗಳಲ್ಲೂ ಇಲ್ಲ ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು