AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ

ಶಾಲೆಯ ಕೆಫೆಟೇರಿಯಾದಲ್ಲಿ ಮಗನೊಂದಿಗೆ ಊಟ ಮಾಡಲು ಹೋದ ಪೋಷಕರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಪೋಷಕರನ್ನು ಸಭೆಗೆಂದು ಆಹ್ವಾನಿಸಿದ್ದರು, ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಮಗನ ಜತೆ ಊಟ ಮಾಡಬೇಕೆಂದು ಪೋಷಕರು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದರು ಅದನ್ನು ಅತಿಕ್ರಮ ಪ್ರವೇಶ ಎಂದು ಹೇಳಿ ಪೋಷಕರನ್ನು ಪೊಲೀಸರು ಬಂಧಿಸಿ ಕರೆದೊಯ್ದಿರುವ ವಿಚಿತ್ರ ಘಟನೆ ಇದಾಗಿದೆ.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ
Image Credit source: NDTV
ನಯನಾ ರಾಜೀವ್
|

Updated on: Feb 09, 2024 | 8:56 AM

Share

ಸಾಮಾನ್ಯವಾಗಿ ಪೋಷಕರು ಶಾಲೆ(School)ಗಳಿಗೆ ಪೇರೆಂಟ್ಸ್-ಟೀಚರ್ ಮೀಟಿಂಗ್​ಗಳಿಗೆ ಹೋಗುತ್ತಾರೆ, ಆಗ ಮಕ್ಕಳೊಂದಿಗೆ ಕುಳಿತು ಊಟ ಮಾಡುವುದು ಸಾಮಾನ್ಯ. ಆದರೆ ಅಮೆರಿಕದ ಶಾಲೆಯಲ್ಲಿ ಮಗನ ಜತೆಗೆ ಊಟ ಮಾಡಲು ಕೆಫೆಟೇರಿಯಾಗೆ ಹೋಗಿದ್ದ ಪೋಷಕರನ್ನು ಬಂಧಿಸಿರುವ ಘಟನೆ ನಡೆದಿದೆ.

ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ, ಕ್ಯಾಲಿಫೋರ್ನಿಯಾ ಏರಿಯಾ ಸ್ಕೂಲ್ ಡಿಸ್ಟ್ರಿಕ್ಟ್​ನಲ್ಲಿ ಈ ಘಟನೆ ವರದಿಯಾಗಿದೆ. ಅಂದು ಶಾಲೆಯಲ್ಲಿ ಪೋಷಕರಿಗೆ ಸಭೆ ಇತ್ತು, ಮಧ್ಯಾಹ್ನ ಸ್ವಲ್ಪ ಬಿಡುವಿತ್ತು ಪೋಷಕರು ಹೇಗೂ ಶಾಲೆಗೆ ಬಂದಿದ್ದೀವಲ್ಲ ಮಗನ ಜತೆಗೆ ಊಟ ಮಾಡೋಣವೆಂದು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಾರೆ ಬಳಿಕ ಆ ಪೋಷಕರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಅಲ್ಲಿ ಪೋಷಕರಿಗೆ ಕೆಫೆಟೇರಿಯಾಗೆ ತೆರಳಲು ಅವಕಾಶವಿರುವುದಿಲ್ಲ, ಶಾಲಾ ಪ್ರಾಂಶುಪಾಲರು ಹಾಗೂ ಪೊಲೀಸರು ಅವರನ್ನು ಶಾಲೆಯ ಹೊರಗೆ ಕರೆದೊಯ್ದು ಕೈದಿಗಳಂತೆ ಕೋಳ ಹಾಕಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ಈ ಶಾಲೆಯಲ್ಲಿರುವುದು ಓರ್ವ ವಿದ್ಯಾರ್ಥಿ, ಓರ್ವ ಶಿಕ್ಷಕಿ ಮಾತ್ರ ಹಾಗಾದ್ರೆ ಆ ಗ್ರಾಮದಲ್ಲಿ ಮಕ್ಕಳೇ ಇಲ್ಲವೇ?

ಪೋಷಕರ ಮೇಲೆ ಯಾವ ಆರೋಪವಿದೆ ಎಂದು ಅವರು ಹೇಳಿಲ್ಲ, ಘಟನೆಯನ್ನು ಭದ್ರತೆ ಉಲ್ಲಂಘನೆ ಎಂದು ಕರೆದಿದ್ದಾರೆ. ಪೋಷಕರು ಹಾಗೆ ಶಾಲೆಯ ಎಲ್ಲೆಂದರಲ್ಲಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಇಂಟರ್​ನೆಟ್ ಬಳಕೆದಾರರು ಇದನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.

ಈ ಪ್ರಾಂಶುಪಾಲರನ್ನು ವಜಾ ಮಾಡಬೇಕು, ಮಗುವಿನೊಂದಿಗೆ ಊಟ ಮಾಡುವುದು ತಪ್ಪೇ, ಈ ಶಾಲೆಯಲ್ಲಿ ಅದೆಂಥಾ ನಿಯಮ ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೊಬ್ಬರು ನನ್ನ ಸಹೋದರಿ ಹೈಸ್ಕೂಲ್​ನಲ್ಲಿ ಓದುತ್ತಿದ್ದಾಳೆ, ಆದರೆ ಎಂದಿಗೂ ನನಗೆ ಇಂಥಹ ಅನುಭವವಾಗಿಲ್ಲ, ಈ ನಿಯಮ ಯಾವ ಶಾಲೆಗಳಲ್ಲೂ ಇಲ್ಲ ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ