Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​-19 ಲಸಿಕೆ ಕಳಿಸಿದ ಭಾರತ ಸರ್ಕಾರಕ್ಕೆ ಶುಕ್ರಿಯಾ ಎಂದ ಭೂತಾನ್​ನ ಪುಟ್ಟ ಬಾಲಕಿಗೆ ಮನಸೋತ ನೆಟ್ಟಿಗರು; ಎರಡೂ ದೇಶಗಳ ಸ್ನೇಹಕ್ಕೊಂದು ಸಾಕ್ಷಿ

ನಮ್ಮ ದೇಶ ಭೂತಾನ್​ಗೆ ದೊಡ್ಡ ಪ್ರಮಾಣದಲ್ಲಿ ಕೊವಿಡ್ 19 ಲಸಿಕೆ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆಗಳು. ಭಾರತವನ್ನು ನೆರೆರಾಷ್ಟ್ರವನ್ನಾಗಿ ಪಡೆದ ನಾವು ಭೂತಾನೀಯರು ತುಂಬ ಪುಣ್ಯವಂತರು ಎಂದು ಬಾಲಕಿ ವಿಡಿಯೋದಲ್ಲಿ ಹೇಳಿದ್ದಾಳೆ.

ಕೊವಿಡ್​-19 ಲಸಿಕೆ ಕಳಿಸಿದ ಭಾರತ ಸರ್ಕಾರಕ್ಕೆ ಶುಕ್ರಿಯಾ ಎಂದ ಭೂತಾನ್​ನ ಪುಟ್ಟ ಬಾಲಕಿಗೆ ಮನಸೋತ ನೆಟ್ಟಿಗರು; ಎರಡೂ ದೇಶಗಳ ಸ್ನೇಹಕ್ಕೊಂದು ಸಾಕ್ಷಿ
ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಭೂತಾನ್​ನ ಬಾಲಕಿ
Follow us
Lakshmi Hegde
|

Updated on: Mar 30, 2021 | 1:52 PM

ಥಿಂಪು: ಕೊವಿಡ್​-19 ಲಸಿಕೆಯನ್ನು ಭೂತಾನ್​​ಗೆ ಕಳಿಸಿದ ಭಾರತ ಸರ್ಕಾರಕ್ಕೆ ಅಲ್ಲಿನ ಪುಟ್ಟ ಹುಡುಗಿಯೊಬ್ಬಳು ಕೃತಜ್ಞತೆ ಸಲ್ಲಿಸಿದ ರೀತಿಯನ್ನು ಭಾರತೀಯರು ತುಂಬು ಮನಸಿನಿಂದ ಶ್ಲಾಘಿಸಿದ್ದಾರೆ. ಈ ವಿಡಿಯೋ ಇದೀಗ ಭಾರತ-ಭೂತಾನ್​ ನಡುವಿನ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿದೆ. ಕೊರೊನಾ ಲಸಿಕೆ ಕೊಟ್ಟು ಉಪಕರಿಸಿದ ಭಾರತಕ್ಕೆ ಶುಕ್ರಿಯಾ ಎಂದು ಬಾಲಕಿ ಹೇಳುತ್ತಿರುವ ವಿಡಿಯೋ ಇಂಟರ್​​ನೆಟ್​​ನಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಈ ಪುಟ್ಟು ಹುಡುಗಿ ಹಿಂದಿ ಹಾಗೂ ಇಂಗ್ಲಿಷ್​ ಎರಡಲ್ಲೂ ಮಾತನಾಡಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾಳೆ.

ಭಾರತದಲ್ಲಿ 2 ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಹಾಗೇ ಭಾರತದಿಂದ ಸೀರಂ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾದ ಕೊವಿಶೀಲ್ಡ್​ ಲಸಿಕೆಯನ್ನು ಪಡೆದ ಮೊದಲ ದೇಶ ಭೂತಾನ್​. ಭಾರತ ಸರ್ಕಾರ ಭೂತಾನ್​ಗೆ ಲಸಿಕೆಯನ್ನು ರಫ್ತು ಮಾಡಿದ ಬಳಿಕ ಬಾಲಕಿ ಈ 47 ಸೆಕೆಂಡ್​ಗಳ ವಿಡಿಯೋ ಮಾಡಿ ಕೃತಜ್ಞತೆ ಸಲ್ಲಿಸಿದ್ದಾಳೆ. ವಿಡಿಯೋವನ್ನು ಭೂತಾನ್​​​ನ ಭಾರತದ ರಾಯಭಾರಿ ರುಚಿರಾ ಕಾಂಬೊಜ್ ಮೊದಲು ಪೋಸ್ಟ್ ಮಾಡಿದ್ದು, ನಂತರ ತುಂಬ ಜನರು ಶೇರ್ ಮಾಡಿಕೊಂಡಿದ್ದಾರೆ. ಬಾಲಕಿ ಭೂತಾನ್​​ನ ಬಾಲ ಕಲಾವಿದೆ ಖೆನ್ರಾಬ್ ಯೀಡ್ಜಿನ್ ಸೈಲ್ಡೆನ್. ಇವಳು ಮುದ್ದುಮುದ್ದಾಗಿ, ಮುಗ್ಧವಾಗಿ ಶುಕ್ರಿಯಾ ಭಾರತ್​ ಎಂದಿದ್ದಾಳೆ.

ನಮ್ಮ ದೇಶ ಭೂತಾನ್​ಗೆ ದೊಡ್ಡ ಪ್ರಮಾಣದಲ್ಲಿ ಕೊವಿಡ್ 19 ಲಸಿಕೆ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆಗಳು. ಭಾರತವನ್ನು ನೆರೆರಾಷ್ಟ್ರವನ್ನಾಗಿ ಪಡೆದ ನಾವು ಭೂತಾನೀಯರು ತುಂಬ ಪುಣ್ಯವಂತರು ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ಅದನ್ನು ನೋಡಿದ ಭಾರತದ ನೆಟ್ಟಿಗರು, ಖೆನ್ರಾಬ್, ನೀನು ಸಲ್ಲಿಸಿದ ಕೃತಜ್ಞತೆ ನಮ್ಮ ಹೃದಯವನ್ನು ಸ್ಪರ್ಶಿಸಿತು ಎಂದಿದ್ದಾರೆ. ಇದರೊಂದಿಗೆ Vaccine Maitri (ವ್ಯಾಕ್ಸಿನ್ ಮೈತ್ರಿ), India Bhutan Friendship (ಭಾರತ-ಭೂತಾನ್​ ಸ್ನೇಹ) ಹ್ಯಾಷ್​ಟ್ಯಾಗ್​ಗಳು ಟ್ರೆಂಡ್ ಆಗುತ್ತಿವೆ.

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ