AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಕ್ಕೆ ಮುಜುಗರ ತಂದ ಅಮೆರಿಕ; ಶೃಂಗಸಭೆಗೆ ತೈವಾನ್​​ಗೆ ಆಮಂತ್ರಣ ನೀಡಿ, ಚೀನಾವನ್ನು ನಿರ್ಲಕ್ಷಿಸಿದ ಬೈಡನ್​

ಚೀನಾ -ಅಮೆರಿಕ ವೈರತ್ವ ಜಗಜ್ಜಾಹೀರು. ಯುಎಸ್​ಗೆ ಚೀನಾ ಯಾವತ್ತಿದ್ದರೂ ಸೈದ್ಧಾಂತಿಕ ಶತ್ರು. ಹಾಗೇ ತೈವಾನ್​ ಮೇಲೆ ಕೂಡ ಚೀನಾದ ಕೆಂಗಣ್ಣಿದೆ.

ಚೀನಾಕ್ಕೆ ಮುಜುಗರ ತಂದ ಅಮೆರಿಕ; ಶೃಂಗಸಭೆಗೆ ತೈವಾನ್​​ಗೆ ಆಮಂತ್ರಣ ನೀಡಿ, ಚೀನಾವನ್ನು ನಿರ್ಲಕ್ಷಿಸಿದ ಬೈಡನ್​
ಅಮೆರಿಕ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Nov 24, 2021 | 8:13 AM

Share

ಡಿಸೆಂಬರ್​​ನಲ್ಲಿ ವರ್ಚ್ಯುವಲ್​ ಆಗಿ ನಡೆಯಲಿರುವ ಪ್ರಜಾಪ್ರಭುತ್ವ ರಾಷ್ಟ್ರಗಳ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ 110 ದೇಶಗಳನ್ನು ಆಹ್ವಾನಿಸಿದ್ದಾರೆ. ಅವರು ಆಮಂತ್ರಣ ನೀಡಿದ ದೇಶಗಳ ಹೆಸರನ್ನು ಅಮೆರಿಕದ ವಿದೇಶಾಂಗ ಇಲಾಖೆಯ ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗಿದೆ. ಬೈಡನ್​ ತಮ್ಮ ಪಾಶ್ಚಿಮಾತ್ರ ಮಿತ್ರರಾಷ್ಟ್ರಗಳಿಗೆ ಆಹ್ವಾನ ನೀಡುವ ಜತೆ, ಇರಾಕ್​, ಭಾರತ, ಪಾಕಿಸ್ತಾನಕ್ಕೂ ಆಹ್ವಾನವಿತ್ತಿದ್ದಾರೆ. ಆದರೆ ಇಲ್ಲಿ ಚೀನಾ ಹೆಸರಿಲ್ಲ. ಅಂದರೆ ಬೈಡನ್​ ಚೀನಾಕ್ಕೆ ಆಹ್ವಾನ ಕೊಟ್ಟಿಲ್ಲ. ಅದರಲ್ಲಿ ವಿಶೇಷವೆಂದರೆ ಚೀನಾದ ವೈರಿ ರಾಷ್ಟ್ರ ತೈವಾನ್​ಗೆ ಆಹ್ವಾನ ಹೋಗಿದೆ. ಹಾಗೇ ಟರ್ಕಿ ಕೂಡ ಈ ಪಟ್ಟಿಯಲ್ಲಿ ಇಲ್ಲ. 

ಚೀನಾ -ಅಮೆರಿಕ ವೈರತ್ವ ಜಗಜ್ಜಾಹೀರು. ಯುಎಸ್​ಗೆ ಚೀನಾ ಯಾವತ್ತಿದ್ದರೂ ಸೈದ್ಧಾಂತಿಕ ಶತ್ರು. ಹಾಗೇ ತೈವಾನ್​ ಮೇಲೆ ಕೂಡ ಚೀನಾದ ಕೆಂಗಣ್ಣಿದೆ. ತೈವಾನ್​ ಆಡಳಿತ ತನ್ನನ್ನು ತಾನು ಸ್ವತಂತ್ರ ಎಂದು ಹೇಳಿಕೊಂಡಿದ್ದರೂ ಚೀನಾ ಅದನ್ನು ಒಪ್ಪುತ್ತಿಲ್ಲ. ಅದು ತಮ್ಮದೇ ಒಂದು ಭಾಗ ಎಂದೇ ಹೇಳಿಕೊಂಡುಬರುತ್ತಿದೆ. ಈಗ ಅಮೆರಿಕ ತೈವಾನ್​​ಗೆ ಆಮಂತ್ರಣಕೊಟ್ಟಿದ್ದು ಚೀನಾದ ಸಿಟ್ಟಿಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

ಡಿಸೆಂಬರ್​ 9-10ರಂದು ನಡೆಯಲಿರುವ ವರ್ಚ್ಯುವಲ್​ ಶೃಂಗಸಭೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್​ ಮತ್ತು ಇರಾಕ್​ ಮಾತ್ರ ಪಾಲ್ಗೊಳ್ಳಲಿವೆ. ಇಲ್ಲಿ ಈಜಿಪ್ಟ್​, ಸೌದಿ ಅರೇಬಿಯಾ, ಜೋರ್ಡನ್​, ಕತಾರ್​, ಯುನೈಟೆಡ್​ ಅರಬ್​ ಎಮಿರೇಟ್ಸ್​ಗಳಿಗೆ ಯುಎಸ್ ಆಹ್ವಾನ ನೀಡಿಲ್ಲ.  ಬ್ರೆಜಿಲ್​ ಅಧ್ಯಕ್ಷ ಜೇರ್​ ಬೊಲ್ಸೊನಾರೋ ಅವರು ಸರ್ವಾಧಿಕಾರಿ, ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡನ್​ ಬೆಂಬಲಿಗರು ಎಂಬಂಥ ಟೀಕೆಗಳಿದ್ದರೂ ಅವರಿಗೂ ಶೃಂಗಸಭೆಗೆ ಆಹ್ವಾನ ನೀಡಲಾಗಿದೆ.  ಯುರೋಪ್​​ನಲ್ಲಿ ಪೋಲ್ಯಾಂಡ್​, ಆಫ್ರಿಕಾದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ನೈಜರ್ ದೇಶಗಳು ಪಟ್ಟಿಯಲ್ಲಿ ಸೇರಿವೆ.

ಡಿಸೆಂಬರ್​ನಲ್ಲಿ ಈ ಪ್ರಜಾಪ್ರಭುತ್ವ ಶೃಂಗಸಭೆ ನಡೆಯಲಿದೆ ಎಂದು ಆಗಸ್ಟ್​​ನಲ್ಲಿಯೇ ಘೋಷಿಸಲಾಗಿತ್ತು. ಈ ಶೃಂಗಸಭೆಯಲ್ಲಿ, ಸರ್ವಾಧಿಕಾರದ ವಿರುದ್ಧ ಪ್ರಜೆಗಳ ರಕ್ಷಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಮಾನವ ಹಕ್ಕುಗಳ ಗೌರವ ಉತ್ತೇಜಿಸುವ ವಿಚಾರಗಳಿಗೆ ಆದ್ಯತೆ ಇರಲಿದೆ ಎಂದು ಆಗಸ್ಟ್​ನಲ್ಲಿಯೇ ಘೋಷಿಸಲಾಗಿದೆ.

ಇದನ್ನೂ ಓದಿ: Gold Price Today: ಚಿನ್ನಾಭರಣ ಪ್ರಿಯರಿಗೆ ಸಂತೋಷದ ಸುದ್ದಿ​; ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್