AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು. ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ. ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. […]

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ
KUSHAL V
| Edited By: |

Updated on:Jul 08, 2020 | 6:47 PM

Share

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು.

ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ.

ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಬರೋಬ್ಬರಿ, 9 ಸಾವಿರ ಜನರ ಮೇಲೆ ಸಿನೋವಾಕ್ ಅದರ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಂಟರೆಸ್ಟಿಂಗ್​ ವಿಷಯ ಅಂದರೆ, ಸಿನೋವಾಕ್ ಬಯೋಟೆಕ್ ಕಂಪನಿಯ ವ್ಯಾಕ್ಸಿನ್​ ಅಲ್ಲದೆ, ಆಕ್ಸ್‌ಫರ್ಡ್ (Oxford) ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಅಸ್ಟ್ರಾ ಜೆನೆಕಾ (Astra Zeneca) ಕಂಪನಿ ತಯಾರಿಸುತ್ತಿರುವ ಲಸಿಕೆಯ ಪ್ರಯೋಗವೂ 3ನೇ ಹಂತ ತಲುಪಿದೆ. ವಿಶ್ವದಲ್ಲಿ ಈ ಎರಡು ಲಸಿಕೆ ಮಾತ್ರ ಮೂರನೇ ಹಂತಕ್ಕೆ ಕಾಲಿಟ್ಟಿರೋದು.

ಇನ್ನುಳಿದ ಪ್ರಯೋಗಗಳೆಲ್ಲಾ ಮೊದಲು ಅಥವಾ ಎರಡನೇ ಹಂತದಲ್ಲಿವೆ. ಅದರಲ್ಲಿ ಸ್ವದೇಶಿ ನಿರ್ಮಿತ ಭಾರತ ಬಯೋಟೆಕ್ ಮತ್ತು ಐಸಿಎಂಆರ್​ನ ಕೋವ್ಯಾಕ್ಸಿನ್ ಸದ್ಯಕ್ಕೆ ಮೊದಲನೇ ಹಂತದಲ್ಲಿ ಇದೆ.

Published On - 2:14 pm, Wed, 8 July 20

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು