AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಕೋವಿಡ್ ಆಸ್ಪತ್ರೆಯವರೇ ನನ್ನನ್ನು ಕೊಲ್ಲಲು ಯತ್ನಿಸಿದ್ರು!

ಕೊರೊನಾ ಸೋಂಕಿತರು ಆಸ್ಪತ್ರೆಗೆ ಸೇರಿದ್ರೂ, ಅವರ ಸ್ಥಿತಿ ಎಷ್ಟು ನರಕದಂತಿರುತ್ತೆ ಅನ್ನೋದನ್ನ ಭಾರತದಲ್ಲಿ ನೋಡಿದ್ವಿ. ಆದ್ರೆ, ನ್ಯೂಯಾರ್ಕ್​ನ ಆಸ್ಪತ್ರೆಯೊಂದರಲ್ಲಿ 31 ವರ್ಷದ ಕಿಮ್ ವಿಕ್ಟರಿ ಆಸ್ಪತ್ರೆಯವರೇ ತನ್ನನ್ನ ಕೊಲ್ಲಲು ಯತ್ನಿಸಿದ್ರು ಅಂತಾ ಹೇಳಿದ್ದಾರೆ. ಜಪಾನ್​ನ ಲ್ಯಾಬ್ ವೊಂದರಲ್ಲಿ ಸೋಂಕಿತೆಯನ್ನ ಇರಿಸಲಾಗಿತ್ತಂತೆ. ಬಳಿಕ ಬೆಕ್ಕುಗಳನ್ನ ಲ್ಯಾಬ್​ಗೆ ಬಿಟ್ಟು ಚಿತ್ರಹಿಂಸೆ ಕೊಡಲಾಗಿತ್ತಂತೆ. ಐಸಿಯು ನಲ್ಲಿ ವೆಂಟಿಲೇಟರ್ ತೆಗೆದು, ನೆಲದ ಮೇಲೆ ಮಲಗಿಸಲಾಗಿತ್ತು ಅಂತಾ ಅಳಲು ತೋಡಿಕೊಂಡಿದ್ದಾರೆ. ಕೊರೊನಾ ‘ಭೂತ’ ಕೊರೊನಾ ವೈರಸ್​ನ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣಗೊಂಡಿದೆ. ಸೋಂಕಿತರ ಸಂಖ್ಯೆ 1,04,09,239 […]

Top News: ಕೋವಿಡ್ ಆಸ್ಪತ್ರೆಯವರೇ ನನ್ನನ್ನು ಕೊಲ್ಲಲು ಯತ್ನಿಸಿದ್ರು!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Jun 30, 2020 | 2:40 PM

ಕೊರೊನಾ ಸೋಂಕಿತರು ಆಸ್ಪತ್ರೆಗೆ ಸೇರಿದ್ರೂ, ಅವರ ಸ್ಥಿತಿ ಎಷ್ಟು ನರಕದಂತಿರುತ್ತೆ ಅನ್ನೋದನ್ನ ಭಾರತದಲ್ಲಿ ನೋಡಿದ್ವಿ. ಆದ್ರೆ, ನ್ಯೂಯಾರ್ಕ್​ನ ಆಸ್ಪತ್ರೆಯೊಂದರಲ್ಲಿ 31 ವರ್ಷದ ಕಿಮ್ ವಿಕ್ಟರಿ ಆಸ್ಪತ್ರೆಯವರೇ ತನ್ನನ್ನ ಕೊಲ್ಲಲು ಯತ್ನಿಸಿದ್ರು ಅಂತಾ ಹೇಳಿದ್ದಾರೆ. ಜಪಾನ್​ನ ಲ್ಯಾಬ್ ವೊಂದರಲ್ಲಿ ಸೋಂಕಿತೆಯನ್ನ ಇರಿಸಲಾಗಿತ್ತಂತೆ. ಬಳಿಕ ಬೆಕ್ಕುಗಳನ್ನ ಲ್ಯಾಬ್​ಗೆ ಬಿಟ್ಟು ಚಿತ್ರಹಿಂಸೆ ಕೊಡಲಾಗಿತ್ತಂತೆ. ಐಸಿಯು ನಲ್ಲಿ ವೆಂಟಿಲೇಟರ್ ತೆಗೆದು, ನೆಲದ ಮೇಲೆ ಮಲಗಿಸಲಾಗಿತ್ತು ಅಂತಾ ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ‘ಭೂತ’ ಕೊರೊನಾ ವೈರಸ್​ನ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣಗೊಂಡಿದೆ. ಸೋಂಕಿತರ ಸಂಖ್ಯೆ 1,04,09,239 ಕ್ಕೆ ಏರಿಕೆಯಾಗಿದೆ. ಹೊಸದಾಗಿ 1 ಲಕ್ಷ 60 ಸಾವಿರದ 468 ಜನರಿಗೆ ಸೋಂಕು ತಗುಲಿದೆ. ಸೋಂಕಿನಿಂದಾಗಿ, ಕೊರೊನಾಗೆ ಒಟ್ಟು 5 ಲಕ್ಷ 8 ಸಾವಿರ 84 ಜನರು ಬಲಿಯಾಗಿದ್ದಾರೆ. ವಿಶ್ವದಲ್ಲಿ 24 ಗಂಟೆ ಅವಧಿಯಲ್ಲಿ 3,402 ಜನರು ಕ್ರೂರಿ ವೈರಸ್​ಗೆ ಬಲಿಯಾಗಿದ್ದಾರೆ. 56 ಲಕ್ಷ 48 ಸಾವಿರದ 584 ಸೋಂಕಿತರು ಗುಣಮುಖರಾಗಿದ್ದು, 57,508 ಜನರ ಸ್ಥಿತಿ ಗಂಭೀರವಾಗಿದೆ.

ಮೆಕ್ಸಿಕೋ ರೀ ಓಪನ್ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್​ ರಣಕೇಕೆ ಹಾಕ್ತಿತ್ತು. 2,20,657 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವೈರಸ್​ನಿಂದಾಗಿ 27,121 ಜನರು ಬಲಿಯಾಗಿದ್ದಾರೆ. ಹೀಗಾಗಿ, ಲಾಕ್​ಡೌನ್ ವಿಧಿಸಲಾಗಿತ್ತು. ಸೋಂಕಿತರ ಸಂಖ್ಯೆ ಕಡಿಮೆಯಾದ ಬೆನ್ನಲ್ಲೇ, ಮೆಕ್ಸಿಕೋ ನಗರದಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ಅಂಗಡಿ ಮುಂಗಟ್ಟುಗಳು ಸೇರಿದಂತೆ, ಕಚೇರಿಗಳನ್ನ ತೆರೆಯಲಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬಂದಿದೆ.

18 ದೇಶಗಳಿಗೆ ಜಪಾನ್​ ನಿರ್ಬಂಧ ಕೊರೊನಾ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಲಕ್ಷ ಲಕ್ಷ ಜನರನ್ನ ಸೋಂಕಿತರನ್ನಾಗಿಸಿದೆ. ಆದ್ರೆ, ಜಪಾನ್​ನಲ್ಲಿ ಅಷ್ಟೇನು ಪ್ರಭಾವ ಬೀರಿಲ್ಲ. ಕೇವಲ 18,476 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, 972 ಜನ ಸೋಂಕಿತರು ವೈರಸ್​ನಿಂದಾಗಿ ಮೃತಪಟ್ಟಿದ್ದಾರೆ. ಸದ್ಯ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಮುನ್ನೆಚ್ಚರಿಕೆಯಿಂದಾಗಿ 18 ದೇಶಗಳ ಪ್ರವಾಸಿಗರಿಗೆ ಜಪಾನ್ ನಿರ್ಬಂಧ ವಿಧಿಸಿದೆ. ನಾಳೆಯಿಂದ 1 ತಿಂಗಳ ವರೆಗೂ ಎಂಟ್ರಿ ಇರಲ್ಲ.

‘HIV ಮದ್ದು ಕೊರೊನಾ ಗುಣಪಡಿಸಲ್ಲ’ ಕೊರೊನಾ ಸೋಂಕಿಗೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಆದ್ರೂ, ಸದ್ಯ ಮಲೇರಿಯಾ ಔಷಧಿ ಮತ್ತು ಹೆಚ್​ಐವಿ ರೋಗಿಗಳಿಗೆ ನೀಡುವ ಔಷಧಿಯನ್ನ ನೀಡಲಾಗ್ತಿದೆ. ಆದ್ರೆ, ಬ್ರಿಟೀಷ್ ವಿಜ್ಞಾನಿಗಳ ಪ್ರಕಾರ, ಹೆಚ್​ಐವಿ ಮದ್ದು ಕೊರೊನಾ ರೋಗವನ್ನ ಗುಣಪಡಿಸಲ್ಲ. ಸುಮಾರು 3,376 ಜನರ ಮೇಲೆ ನಡೆಸಿದ ಪ್ರಯೋಗದಲ್ಲಿ ಲೊಪಿನ್​ವಿರ್ ಮತ್ತು ರಿಟೊನ್​ವಿರ್ ಔಷಧಿ ಕೊರೊನಾ ಸೋಂಕಿತರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಅಂತಾ ಹೇಳಿದೆ.

‘ಭವಿಷ್ಯ ಕೆಟ್ಟದಾಗಿರಲಿದೆ’ ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವದ ಭವಿಷ್ಯವೇ ಮಂಕಾಗಿ ಹೋಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ. ಉದ್ಯೋಗ ಇಲ್ಲದೇ, ವೇತನ ಇಲ್ಲದೇ ಜನ ಬದುಕು ದುಸ್ತರವಾಗ್ತಿದೆ. ಇದ್ರ ಬೆನ್ನಲ್ಲೇ, ಕೊರೊನಾ ರೋಗದಿಂದ ಜನರ ಮುಂದಿನ ಭವಿಷ್ಯ ಕೆಟ್ಟದಾಗಿರಲಿದೆ ಅಂತಾ ಡಬ್ಲೂಎಚ್‌ಒ ಮುಖ್ಯಸ್ಥ ಟೆಡ್ರೊಸ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಕೊರೊನಾ ವೈರಸ್​ನ ಸಾಂಕ್ರಾಮಿಕ ರೋಗದ ಭೀಕರತೆ ಇನ್ನೂ ಬರಬೇಕಿದೆ. ಜನರಲ್ಲಿ ಭಯ ಹೋಗಲಾಡಿಸಿ ಹೋರಾಟಕ್ಕೆ ಸಜ್ಜುಗೊಳಿಸಬೇಕಿದೆ ಅಂತಾ ಟೆಡ್ರೊಸ್ ವಾರ್ನ್ ಮಾಡಿದ್ದಾರೆ.

‘ಮಾಸ್ಕ್ ಧರಿಸೋದು ಟ್ರಂಪ್ ಆಯ್ಕೆ’ ಅಮೆರಿಕದಲ್ಲಿ ಕೊರೊನಾ ವೈರಸ್​ನ ಅಟ್ಟಹಾಸ ಎಷ್ಟಿದೆ ಅನ್ನೋದಕ್ಕೆ ಸೋಂಕಿತರ ಸಂಖ್ಯೆ 26,81,811ಕ್ಕೆ ಏರಿಕೆಯಾಗಿರೋದೇ ಸಾಕ್ಷಿ. ಸೋಂಕಿನಿಂದಾಗಿ 1,28.783 ಜನರು ಬಲಿಯಾಗಿದ್ದಾರೆ. ಆದ್ರೆ, ಇಷ್ಟಾದರೂ ಸಹ ಅಧ್ಯಕ್ಷ ಟ್ರಂಪ್ ಮಾತ್ರ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಈ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ವೈಟ್ ಹೌಸ್ ವಕ್ತಾರೆ ಕೇಯ್ಲೈ ಮೆಕನಾನಿ ಸ್ಪಷ್ಟನೆ ನೀಡಿದ್ದು, ಮಾಸ್ಕ್ ಧರಿಸೋದು ಬಿಡೋದು ಟ್ರಂಪ್​ಗೆ ಬಿಟ್ಟ ಆಯ್ಕೆ. ಜನತೆ ಕೂಡ ಮಾಸ್ಕ್ ಧರಿಸೋದು ವೈಯಕ್ತಿಕ ವಿಚಾರ ಅಂತಾ ಹೇಳಿದ್ದಾರೆ.

ಲಿಬಿಯಾದಲ್ಲಿ ನರಕಯಾತನೆ! ಸ್ವಾಗತಿಸಲು ಸ್ನೇಹಿತರಿಲ್ಲ.. ಶುಭ ಕೋರಲು ಕುಟುಂಬಸ್ಥರಿಲ್ಲ.. ಲಾಗೋಸ್ ಏರ್​ಪೋರ್ಟ್​ನಲ್ಲಿ ವಲಸೆ ಕಾರ್ಮಿಕರ ಸ್ಥಿತಿ ನಿಜಕ್ಕೂ ನರಕಯಾತನೆ ಆಗಿದೆ. ಹೌದು, ಲಾಗೋಸ್ ಏರ್​ಪೋರ್ಟ್​ನಲ್ಲಿ ಕಾರ್ಗೋ ಟರ್ಮಿನಲ್​ನಲ್ಲಿ ಬಂದಿಳಿದು 160 ವಲಸೆ ಕಾರ್ಮಿಕರು ವಾಪಸ್ ತವರಿಗೆ ಮರಳಿದ್ದು, ಅಲ್ಲಿನ ಸ್ಥಿತಿ ನೆನೆದು ಕಣ್ಣಿರಿಟ್ಟಿದ್ದಾರೆ. ಕೊರೊನಾ ಸೋಂಕಿನ ಮಧ್ಯೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲವಂತೆ.

ಚಿಲಿಯಲ್ಲಿ ಶವ ಪೆಟ್ಟಿಗೆಗಳ ಕೊರತೆ! ಚಿಲಿ ದೇಶದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 2,71,982ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,500 ದಾಟಿದೆ. ಇದ್ರ ಮಧ್ಯೆ ಸೋಂಕಿನಿಂದ ಮೃತಪಟ್ಟವರನ್ನ ಸ್ಮಶಾನಕ್ಕೆ ಸಾಗಿಸಲು ಶವ ಪೆಟ್ಟಿಗೆಗಳ ಕೊರತೆ ಎದುರಾಗಿದೆ. ಸದ್ಯ ಇದ್ದ ಬದ್ದ ಶವ ಪೆಟ್ಟಿಗೆಗಳೆಲ್ಲವೂ ಖಾಲಿಯಾಗಿದೆಯಂತೆ.

ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ