AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷದಲ್ಲಿ 800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ : ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಯ್ತು ನಿಜಾಂಶ

ಪ್ಯಾಕ್​ ಮಾಡಿದ ಹಾಲಿನ ಪೆಟ್ಟಿಗೆಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತಿದ್ದನು. ಈ ವೇಳೆ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಎಂದು ವರದಿಯಾಗಿದೆ.

10 ವರ್ಷದಲ್ಲಿ 800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ : ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಯ್ತು ನಿಜಾಂಶ
ರಾಂಡಾಲ್​
TV9 Web
| Edited By: |

Updated on:Jan 13, 2022 | 11:25 AM

Share

ಕ್ಯಾಲಿಪೋರ್ನಿಯಾ: ವಿಜ್ಞಾನ ಎಂತಹ ಸತ್ಯವನ್ನೂ ಹೊರತೆಗೆಯುತ್ತದೆ. ಇದೀಗ ದಕ್ಷಿಣ ಕ್ಯಾಲಿಪೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆ ಎನ್ನುವ ಸತ್ಯವೊಂದು ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಗಿದೆ. ಈ ಕುರಿತು ಡೈಲಿ ಮೇಲ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. 1950 ರಿಂದ 1960ರ ಅವಧಿಯಲ್ಲಿ ರಾಂಡಾಲ್​ ಎನ್ನುವ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದನು. ಆಗಿನ ಸಂದರ್ಭದಲ್ಲಿ ಪ್ಯಾಕ್​ ಮಾಡಿದ ಹಾಲಿನ ಪೆಟ್ಟಿಗೆಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತಿದ್ದನು. ಈ ವೇಳೆ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಎಂದು ವರದಿಯಾಗಿದೆ.

ಹಾಲು ಮಾರಾಟ ಮಾಡಲು ಹೋದ ವೇಳೆ ರಾಂಡಾಲ್​ ಗೃಹಿಣಿಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದನು. ನೋಡಲು ಆಕರ್ಷಕವಾಗಿದ್ದ ರಾಂಡಾಲ್​ನಲ್ಲಿ ಮಹಿಳೆಯರು ಒಲಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಮಹಿಳೆಯರು ಸಿಹಿ ತಿಂಡಿಗಳನ್ನು ಆತನಿಗೆ ನೀಡುತ್ತಿದ್ದರು ಎನ್ನಲಾಗಿದ್ದು, ಹಲವು ಸೈನಿಕರ ಪತ್ನಿಯರ ಜೀವನದಲ್ಲಿ ರಾಂಡಾಲ್​ ಸ್ಥಿರ ವ್ಯಕ್ತಿಯಾಗಿದ್ದ ಎನ್ನಲಾಗಿದೆ.  ಆ ಕಾಲದಲ್ಲಿ ಯಾವುದೇ ರೀತಿಯ ತಂತ್ರಜ್ಞಾನದ ಬಳಕೆ ಇಲ್ಲದ ಕಾರಣ ಅಕ್ರಮ ಸಂಬಂಧಗಳು ಹೊರಜಗತ್ತಿಗೆ ತಿಳಿಯುತ್ತಿರಲಿಲ್ಲ.

ಆದರೆ ಇದು ಹೊಸದೊಂದು ಸಮಸ್ಯೆಯನ್ನು ಹುಟ್ಟುಹಾಕಿತ್ತು. ಮಹಿಳೆಯರಿಗೆ ಜನಿಸಿದ ಮಕ್ಕಳು ಬೇರೆ ಬೇರೆ ರೀತಿಯ ಮೈಬಣ್ಣ, ವಿಭಿನ್ನ ರೀತಿಯ ಕೂದಲಿನ ಹೋಲಿಕೆಯನ್ನು ಹೊಂದಿದ್ದರು. ಇದರಿಂದ ಸ್ಯಾನ್​ ಡಿಗಿಯೋ ಪ್ರದೇಶದಲ್ಲಿ ಡಿಎನ್​ಎ ಟೆಸ್ಟ್​ ವಿವಾದವನ್ನೇ ಸೃಷ್ಟಿಸಿತ್ತು. ಟೆಸ್ಟ್​ನಲ್ಲಿ ಎಲ್ಲಾ ಮಕ್ಕಳು ಅವರ ತಂದೆಯ ರಕ್ತ ಸಂಬಂಧವನ್ನು ಹೊಂದಿಲ್ಲ ಎನ್ನುವುದು ದೃಢಪಟ್ಟಿತ್ತು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈ ವೇಳೆ  ವಿಜ್ಞಾನಿಗಳು ರಾಂಡಾಲ್​ ಅವರ ಡಿಎನ್​ಎ ಪರೀಕ್ಷೆ ಮಾಡಿದಾಗ ನಂಬಲಾಗದ ಸತ್ಯ ಹೊರಬಿದ್ದಿತ್ತು. ನೂರಾರು ಪರೀಕ್ಷೆಗಳ ನಂತರ 800ಕ್ಕೂ ಹೆಚ್ಚು ಮಕ್ಕಳ ಡಿಎನ್​ಎ ರಾಂಡಾಲ್​ ಡಿಎನ್​ಎಗೆ ಮ್ಯಾಚ್​ ಆಗುತ್ತಿತ್ತು. ಇದನ್ನು ನೋಡಿ ವಿಜ್ಞಾನಿಗಳೇ ಶಾಕ್​ ಆಗಿದ್ದಾರೆ.

ಈ ಬಗ್ಗೆ 97ರ ಹರೆಯದ ರಾಂಡಾಲ್​ ನನಗೆ ಹೆಂಡತಿ ಮಕ್ಕಳಿಲ್ಲದ ಒಂಟಿ ಜೀವ ಎಂದುಕೊಂಡಿದ್ದೆ. ಎಂಮತಹ ಆಶೀರ್ವಾದ ಸಿಕ್ಕಿದೆ. ನನಗೆ ತೃಪ್ತಿಯಾಗಿದೆ. ಎಲ್ಲ ಮಕ್ಕಳನ್ನು ಭೇಟಿಯಾಗಲು ಕಾಯುತ್ತಿದ್ದೇನೆ ಎಂದಿದ್ದಾರೆ ಎಂದು ಡೈಲಿ ಮೇಲ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:

ನೆಲಬಾಂಬ್​ಗಳನ್ನು ಪತ್ತೆ ಮಾಡುತ್ತಿದ್ದ ಗೋಲ್ಡ್​ ಮೆಡಲಿಸ್ಟ್​ ಇಲಿ ‘ಮಾಗ್ವಾ’ ಇನ್ನು ನೆನಪು ಮಾತ್ರ

Published On - 11:22 am, Thu, 13 January 22

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ