AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡೆನ್ ಪರ ಎಫ್​ಬಿಐ ಶಾಮೀಲು: ಡೊನಾಲ್ಡ್​ ಟ್ರಂಪ್ ಹೊಸ ಆರೋಪ

ವಿಸ್ಕಾನ್ಸಿನ್ ರಾಜ್ಯದಲ್ಲಿ ಮತಗಳ ಮರುಎಣಿಕೆ ನಡೆಯಬೇಕೆಂದು ಆಗ್ರಹಿಸಿ ಅಭಿಯಾನ ನಡೆಸಲು ಡೊನಾಲ್ಡ್​ ಟ್ರಂಪ್ ಸುಮಾರು 30 ಲಕ್ಷ ಡಾಲರ್​ ಖರ್ಚು ಮಾಡಿದ್ದರು.

ಬಿಡೆನ್ ಪರ ಎಫ್​ಬಿಐ ಶಾಮೀಲು: ಡೊನಾಲ್ಡ್​ ಟ್ರಂಪ್ ಹೊಸ ಆರೋಪ
ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್
preethi shettigar
| Edited By: |

Updated on:Nov 30, 2020 | 7:36 PM

Share

ವಾಷಿಂಗ್​ಟನ್: ಅಮೆರಿಕದ ಸರ್ವೋಚ್ಛ ತನಿಖಾ ಸಂಸ್ಥೆ ಎಫ್​ಬಿಐ ಮತ್ತು ಅಮೆರಿಕದಲ್ಲಿ ವ್ಯಾಪಕ ಜನಮನ್ನಣೆ ಪಡೆದಿರುವ ನ್ಯಾಯಾಂಗ ಇಲಾಖೆಗಳು ‘ಜೊ ಬಿಡೆನ್ ಪರ ಶಾಮೀಲಾಗಿ ಫಲಿತಾಂಶ ತಿರುಚಿವೆ’ ಎಂದು ನಿರ್ಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆರೋಪಿಸಿದರು.

ಬಹು ಚರ್ಚಿತ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಫಾಕ್ಸ್​ ನ್ಯೂಸ್​ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಡೊನಾಲ್ಡ್​ ಟ್ರಂಪ್, ಈ ಫಲಿತಾಂಶವನ್ನು ಜನರು ಹೇಗೆ ಒಪ್ಪಿಕೊಂಡರು ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಬರಾಕ್ ಒಬಾಮಾಗಿಂತಲೂ ಬಿಡೆನ್ ಅದು ಹೇಗೆ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಆಕ್ಷೇಪಿಸಿದರು.

ಮರುಎಣಿಕೆಯಲ್ಲೂ ಬಿಡೆನ್ ಮುಂದು

ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ಚಲಾವಣೆಯದ ಮತಗಳ ಮರುಎಣಿಕೆಯಲ್ಲಿ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಹೆಚ್ಚುವರಿಯಾಗಿ 87 ಮತಗಳನ್ನು ಗಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಪ್ರಮುಖ ರಾಜ್ಯದಲ್ಲಿ ಅವರು 20,000 ಮತಗಳ ಅಂತರದಿಂದ ಎದುರಾಳಿಯನ್ನು ಮಣಿಸಿದ್ದಾರೆ.

ವಿಸ್ಕಾನ್ಸಿನ್ ರಾಜ್ಯದಲ್ಲಿ ಮತಗಳ ಮರುಎಣಿಕೆ ನಡೆಯಬೇಕೆಂದು ಆಗ್ರಹಿಸಿ ಅಭಿಯಾನ ನಡೆಸಲು ಡೊನಾಲ್ಡ್​ ಟ್ರಂಪ್ ಸುಮಾರು 30 ಲಕ್ಷ ಡಾಲರ್​ ಖರ್ಚು ಮಾಡಿದ್ದರು. ಮತಗಳ ಮರುಎಣಿಕೆಯು ಜೋ ಬಿಡೆನ್ ಅವರ ಮುನ್ನಡೆಯನ್ನೇ ಸಾರಿ ಹೇಳಿದ್ದು, ಟ್ರಂಪ್​ ಮುಖಭಂಗ ಅನುಭವಿಸುವಂತಾಗಿದೆ.

ವಿಸ್ಕಾನ್ಸಿನ್​ನ ದೊಡ್ಡ ಮತ್ತು ಬಹುತೇಕ ಡೆಮಾಕ್ರಟಿಕ್ ಅಭ್ಯರ್ಥಿಗಳ ಪರವಾಗಿಯೇ ಇರುತ್ತಿದ್ದ ಮಿಲ್ವಾಕೀ ಮತ್ತು ಡೇನ್ ಕೌಂಟಿಗಳಲ್ಲಿ ಬಿಡೆನ್​ಗೆ ಹೆಚ್ಚುವರಿಯಾಗಿ ಒಟ್ಟು 87 ಮತಗಳು ಸಿಕ್ಕಿವೆ.

ಇದನ್ನೂ ಓದಿ: ಟ್ರಂಪ್​ಗೆ 2024ರಲ್ಲೂ ಸ್ಪರ್ಧಿಸುವ ಆಸೆಯಿದೆ.. ಆದ್ರೆ ಸಾಧ್ಯವಾಗೋಲ್ಲ! ಯಾಕೆ ಗೊತ್ತಾ?: ಮೇರಿ ಟ್ರಂಪ್

Published On - 7:33 pm, Mon, 30 November 20

Follow Us
preethi shettigar
preethi shettigar
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​