AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಆಯ್ಕೆಯಾಗುವುದು ಅನುಮಾನ

Xi Jinping: ಜಿ 7 ಒಕ್ಕೂಟ ಕಳೆದ ವಾರ ಕ್ಸಿ ಅವರಿಗೆ ಕರೆ ಮಾಡಿ ತೈವಾನ್‌ನ ಮೇಲಿನ ಕ್ರಮಗಳು, ಸೈಬರ್‌ ಸ್ಪೇಸ್​ನಲ್ಲಿನ ಆಕ್ರಮಣಗಳು, ಮಾನವ ಹಕ್ಕುಗಳ ಉಲ್ಲಂಘನೆ, ಪರಿಸರಕ್ಕೆ ಮಾರಕ ಎನ್ನಲಾಗುವ ಬೆಲ್ಟ್ ಆಂಡ್ ರೋಡ್ ಯೋಜನೆ ಬಗ್ಗೆ ಮಾತುಕತೆ ನಡೆಸಿದೆ.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಆಯ್ಕೆಯಾಗುವುದು ಅನುಮಾನ
ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 12, 2021 | 3:48 PM

Share

ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಠಿಣ ನೀತಿಗಳು ಬೀಜಿಂಗ್‌ನ ಮೃದು ಶಕ್ತಿಯನ್ನು ಹಾಳು ಮಾಡುತ್ತಿರುವುದರಿಂದ, ಕ್ಸಿ ಮೂರನೇ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಜಿ 7 ಒಕ್ಕೂಟ ಕಳೆದ ವಾರ ಕ್ಸಿ ಅವರಿಗೆ ಕರೆ ಮಾಡಿ ತೈವಾನ್‌ನ ಮೇಲಿನ ಕ್ರಮಗಳು, ಸೈಬರ್‌ ಸ್ಪೇಸ್​ನಲ್ಲಿನ ಆಕ್ರಮಣಗಳು, ಮಾನವ ಹಕ್ಕುಗಳ ಉಲ್ಲಂಘನೆ, ಪರಿಸರಕ್ಕೆ ಮಾರಕ ಎನ್ನಲಾಗುವ ಬೆಲ್ಟ್ ಆಂಡ್ ರೋಡ್ ಯೋಜನೆ ಬಗ್ಗೆ ಮಾತುಕತೆ ನಡೆಸಿದೆ. ಅದೇ ವಾರ, ಹಾಂಗ್ ಕಾಂಗ್ ಕಾರ್ಯಕರ್ತ ಜೋಶುವಾ ವಾಂಗ್ ಅವರು 2019 ರ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕಗ್ಕಾಗಿ ಹೆಚ್ಚುವರಿ 10 ತಿಂಗಳ ಜೈಲು ಶಿಕ್ಷೆಯನ್ನು ಪಡೆದರು ಎಂದು ನಿಕ್ಕೈ ಏಷ್ಯಾದ ವಿಲಿಯಂ ಪೆಸೆಕ್ ವರದಿ ಮಾಡಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮೊರಿಸನ್​ರನ್ನು ಶೀತಲ ಸಮರದ ಮನಸ್ಥಿತಿ ಮತ್ತು ಸೈದ್ಧಾಂತಿಕ ತಾರತಮ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದ ಚೀನಾ ಕ್ಯಾನ್ಬೆರಾದೊಂದಿಗೆ ಸಚಿವಾಲಯದ ಆರ್ಥಿಕ ಸಂವಾದವನ್ನು ಸ್ಥಗಿತಗೊಳಿಸಿದೆ.

ಮೊರಿಸನ್ ಅವರ ಪ್ರಶ್ನೆಗಳ ಬಗ್ಗೆ ಚೀನಾದ ಆಂತರಿಕ ವಲಯವು ಸಿಡಿದೆದ್ದಿದೆ. ಕೊವಿಡ್ -19 ಹೊತ್ತಲ್ಲಿ ಜಿ7ನಲ್ಲಿ ಸ್ಥಾನಕ್ಕಾಗಿ ಬೇಡಿಕೆಯೊಡ್ಡುವುದು ಬೇಜವಾಬ್ದಾರಿತನ ಎಂದು  ಪ್ರತಿಯೊಬ್ಬರೂ ಕೇಳಬೇಕಾಗಿದೆ ಎಂದು ಪೆಸೆಕ್ ಬರೆದಿದ್ದಾರೆ.

ದಕ್ಷಿಣ ಏಷ್ಯಾದ ಬಹುಪಾಲು ಜನರು ಕ್ಸಿಯವರರ ಸಿಡುಕಿನ ಮುಖ ನೋಡಲು ಇಷ್ಟಪಡುವುದಿಲ್ಲ . ಅಮೆರಿಕ ವಿನ್ಯಾಸಗೊಳಿಸಿದ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಅಥವಾ THAAD, ಕ್ಷಿಪಣಿ-ರಕ್ಷಣಾ ವ್ಯವಸ್ಥೆಯನ್ನು ದಕ್ಷಿಣ ಕೊರಿಯಾ ಸ್ವಾಗತಿಸಿದ ನಂತರ, ಸಿಯೋಲ್ ಗೆ ಚೀನಾದ ಪ್ರವಾಸೋದ್ಯಮ ಹರಿವು ಕಣ್ಮರೆಯಾಯಿತು.

ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವ್ಯಾಪಾರ ಯುದ್ಧಗಳ ಮಧ್ಯೆ ಅಮೆರಿಕದ ವೆಚ್ಚದಲ್ಲಿ ಬೀಜಿಂಗ್‌ನ ಮೃದು ಶಕ್ತಿಯನ್ನು ಬೆಳೆಸಲು ಕ್ಸಿ ಅವರಿಗೆ ಒಮ್ಮೆ ಅವಕಾಶವಿತ್ತು. ಆದಾಗ್ಯೂ, ಅವರು ಅದನ್ನು ಕಡೆಗಣಿಸಿದ್ದು ಅಂತರರಾಷ್ಟ್ರೀಯ ಚುನಾವಣೆಗಳಲ್ಲಿ ಚೀನಾದ ಅಂತರರಾಷ್ಟ್ರೀಯ ಚಿತ್ರಣವು 2018 ರಿಂದ ಅಸ್ತಿತ್ವ ಕಳೆದುಕೊಂಡಿದೆ.

ಕೊವಿಡ್ -19 ಜಗತ್ತನ್ನು ಧ್ವಂಸಗೊಳಿಸುತ್ತಿದ್ದಂತೆ, ಹಾಂಗ್ ಕಾಂಗ್, ತೈವಾನ್ ಮತ್ತು ಭಾರತದೊಂದಿಗೆ ಗಾಲ್ವಾನ್ ಗಡಿ , ಕೆನಡಾ ಮತ್ತು ಹೆಚ್ಚಿನವುಗಳೊಂದಿಗೆ ಘರ್ಷಣೆ ಮೊದಲಾದವುಗಳು ಕ್ಸಿಯನ್ನು ಸಾಕಷ್ಟು ಆಪಾದನೆಗೊಳಪಡಿಸಿದೆ.

ಏತನ್ಮಧ್ಯೆ, ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್ ಚೀನಾ ವಿರುದ್ಧ ಕ್ವಾಡ್ರಿಲ್ಯಾಟರಲ್ ಭದ್ರತಾ ಸಂವಾದವನ್ನು ತಿರುಗಿಸುತ್ತಿದ್ದಾರೆ. ಇದಕ್ಕೆ ಚೀನಾ ಪ್ರಕಿರೋಧ ವ್ಯಕ್ತ ಪಡಿಸಿದೆ.

ಚೀನಾದ ಅಧ್ಯಕ್ಷರು ಜಗತ್ತು ಏನು ಯೋಚಿಸುತ್ತಾರೋ ಅದನ್ನು ಲೆಕ್ಕಿಸುವುದಿಲ್ಲ ಎಂಬ ಸಾಮಾನ್ಯ ಅಭಿಪ್ರಾಯದ ಹೊರತಾಗಿಯೂ, ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯವು ತಪ್ಪು ದಿಕ್ಕಿನಲ್ಲಿ ಓಡುತ್ತಿದೆ. ಕ್ಸಿ ಸ್ವತಃ ಗೂಗಲ್ ಮತ್ತು ಫೇಸ್‌ಬುಕ್‌ಗೆ ಹೆದರುತ್ತಿದ್ದಾರೆ ಎಂದು ನಿಕ್ಕೈ ಏಷ್ಯಾದ ಪೆಸೆಕ್ ಬರೆದಿದ್ದಾರೆ.

ಈ ಕ್ರಮಗಳು ಅಭದ್ರತೆ ಮತ್ತು ಬುದ್ಧಿವಂತಿಕೆಯ ಕೊರತೆಯನ್ನು ಸಂಕೇತಿಸುತ್ತದೆ. ಈ ಸಮಯದಲ್ಲಿ ಒಂದು ಪ್ರಮುಖ ಶಕ್ತಿಯು ದುರುಪಯೋಗಪಡಿಸಿಕೊಳ್ಳಬೇಕು.ಯಆದ್ದರಿಂದ ಕ್ಸಿ ಅವರ ಮತ್ತೊಂದು ಅವಧಿಯಲ್ಲಿ ಮುಂದುವರಿಯುತ್ತಾರೆ ಎಂಬುದು ಅನುಮಾನ ಅಂತಾರೆ ಪೆಸೆಕ್.

ಇದನ್ನೂ ಓದಿ: ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ!

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು