Sign In

By signing in or creating an account, you agree with Associated Broadcasting Company's Terms & Conditions and Privacy Policy.

Alaska Earthquake: ಅಲಾಸ್ಕಾದಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು

ಯುಎಸ್​ನ ಅಲಾಸ್ಕಾದಲ್ಲಿ ಪದೇಪದೇ ಭೂಕಂಪನ ಆಗುತ್ತಿರುತ್ತದೆ. ಜುಲೈನಲ್ಲಿ 8.2ರಷ್ಟು ತೀವ್ರತೆಯಲ್ಲಿ ಪ್ರಬಲ ಭೂಕಂಪ ಆಗಿತ್ತು. ಪೆರಿವಿಲ್ಲೆಯಿಂದ ಆಗ್ನೇಯಕ್ಕೆ 91 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದ್ದು, ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು.

Alaska Earthquake: ಅಲಾಸ್ಕಾದಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು
ಭೂಕಂಪದ ಚಿತ್ರ
Follow us
TV9 Web
| Updated By: Lakshmi Hegde

Updated on:Dec 22, 2021 | 8:20 AM

ಅಮೆರಿಕದ ಅಲಾಸ್ಕಾದಲ್ಲಿ ಮಂಗಳವಾರ ಮಧ್ಯಾಹ್ನ 1.42ರ ಹೊತ್ತಿಗೆ ಪ್ರಬಲ ಭೂಕಂಪ (Alaska Earthquake) ಸಂಭಿವಿಸಿದೆ. ಇದರ ತೀವ್ರತೆ ರಿಕ್ಟರ್​ ಮಾಪಕದಲ್ಲಿ 6.3ರಷ್ಟು ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಈ ಬಾರಿ ಭೂಮೇಲ್ಮೈ ಆಳದಿಂದ 125 ಕಿಮೀ ಆಳದಲ್ಲಿ ಸಂಭವಿಸಿದೆ. ಸದ್ಯ ಯಾವುದೇ ರೀತಿಯ ಸುನಾಮೆ ಎಚ್ಚರಿಕೆ ಇಲ್ಲ ಎಂದು ಹೇಳಲಾಗಿದೆ.  

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರದ ಪ್ರಕಾರ ಇಲ್ಲಿ 5.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.  ಅಂಕಾರೇಜ್​​ನ ನೈಋತ್ಯಕ್ಕೆ ಸುಮಾರು 138 ಮೈಲುಗಳಷ್ಟು ದೂರವಿರುವ ಇಲಿಯಾಮ್ನಾ ಜ್ವಾಲಾಮುಖಿ ಸಮೀಪವೇ ಭೂಕಂಪ ಉಂಟಾಗಿದೆ ಎಂದು ಯುಎಸ್​​ಜಿಎಸ್​ ತಿಳಿಸಿದೆ.  ಅಲಾಸ್ಕಾದ ಕೆನೈ ಪೆನಿನ್ಸುಲಾದಿಂದ ಕುಕ್​ ಇನ್ಲೆಟ್ನಾದಾದ್ಯಂತ ಭೂಮಿ ಕಂಪನವಾಗಿದೆ. ಇಲ್ಲಿಂದ ದೂರವಿರುವ ಫೇರ್ಬ್ಯಾಂಕ್ಸ್​, ಕೊಡಿಯಾಕ್​ ಮತ್ತು ವಾಡ್ಲೆಜ್​​ನಲ್ಲೂ ಭೂಮಿ ನಡುಗಿದ ವರದಿಯಾಗಿದೆ.   ಆದರೆ ಎಲ್ಲಿಯೂ ಯಾವುದೇ ಆಸ್ತಿಪಾಸ್ತಿ, ಮನೆಗಳಿಗೆ ಹಾನಿಯಾಗಿಲ್ಲ. ಪ್ರಾಣ ಹಾನಿಯೂ ಆಗಿಲ್ಲ ಎಂದು ವರದಿಯಾಗಿದೆ.

ಯುಎಸ್​ನ ಅಲಾಸ್ಕಾದಲ್ಲಿ ಪದೇಪದೇ ಭೂಕಂಪನ ಆಗುತ್ತಿರುತ್ತದೆ. ಜುಲೈನಲ್ಲಿ 8.2ರಷ್ಟು ತೀವ್ರತೆಯಲ್ಲಿ ಪ್ರಬಲ ಭೂಕಂಪ ಆಗಿತ್ತು. ಪೆರಿವಿಲ್ಲೆಯಿಂದ ಆಗ್ನೇಯಕ್ಕೆ 91 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದ್ದು, ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು. ಆಗ ರಸ್ತೆಗಳೆಲ್ಲ ಭರ್ಜರಿ ಸೀಳುಬಿಟ್ಟಿದ್ದವು. ಅಪಾರ ಪ್ರಮಾಣದ ಹಾನಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿಯೇ ಜೂನ್​​ನಲ್ಲಿ ಆದ ಭೂಕಂಪದ ತೀವ್ರತೆ ಅತ್ಯಂತ ಹೆಚ್ಚು ಎಂದು ವಿಶ್ಲೇಸಿಸಲಾಗಿದೆ. ಅದರ ಹೊರತಾಗಿ 2020ರ ಅಕ್ಟೋಬರ್​ನಲ್ಲೂ ಕೂಡ ಅಲಾಸ್ಕಾದ ಸ್ಯಾಡ್ ಪಾಯಿಂಟ್​ ಎಂಬಲ್ಲಿ 7.5 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಇದರ ತೀವ್ರತೆಗೆ ಸಾಗರದಲ್ಲಿ ಸುನಾಮಿ ಮಾದರಿಯ ಅಲೆಗಳು ಎದ್ದಿದ್ದವು. ಹಾಗೇ, 2020ರ ಜುಲೈನಲ್ಲೂ ಕೂಡ ಪೆನಿನ್ಸುಲಾದಲ್ಲಿ 7.8 ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಒಟ್ಟಾರೆ ಈ ಪ್ರದೇಶದಲ್ಲಿ ಆಗಾಗ ಭೂಕಂಪನ ಸಂಭವಿಸುವುದು ಸಾಮಾನ್ಯವೆಂಬಂತಾಗಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; ಹುದ್ದೆ, ವೇತನ ಮೊದಲಾದ ಮಾಹಿತಿ ಇಲ್ಲಿದೆ

Published On - 8:19 am, Wed, 22 December 21

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್