Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೋರಿಡಾದಲ್ಲಿ 12 ಅಂತಸ್ತಿನ ಕಟ್ಟಡ ಭಾಗಶಃ ಕುಸಿತ; 5 ಮಂದಿ ಸಾವು, 156ಕ್ಕೂ ಹೆಚ್ಚು ಮಂದಿ ನಾಪತ್ತೆ

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಸರ್ಫ್​ಸೈಡ್​​ನ ದುರಂತವನ್ನು ತುರ್ತುಪರಿಸ್ಥಿತಿಯೆಂದು ಘೋಷಣೆ ಮಾಡಿದ್ದು, ಅದರಡಿ ಸಿಗುವ ಪರಿಹಾರ ನೀಡಿದ್ದಾರೆ ಮತ್ತು ವಿಪತ್ತು ಪರಿಹಾರವನ್ನೂ ಪ್ರಕಟಿಸಿದ್ದಾರೆ ಎಂದು ಮೇಯರ್​ ತಿಳಿಸಿದ್ದಾರೆ.

ಫ್ಲೋರಿಡಾದಲ್ಲಿ 12 ಅಂತಸ್ತಿನ ಕಟ್ಟಡ ಭಾಗಶಃ ಕುಸಿತ; 5 ಮಂದಿ ಸಾವು, 156ಕ್ಕೂ ಹೆಚ್ಚು ಮಂದಿ ನಾಪತ್ತೆ
ಕಟ್ಟಡ ಕುಸಿತದ ದೃಶ್ಯ
Follow us
TV9 Web
| Updated By: Lakshmi Hegde

Updated on: Jun 27, 2021 | 8:12 AM

ಯುಎಸ್​​ನ ಫ್ಲೋರಿಡಾದ ಆಗ್ನೇಯ ಪ್ರಾಂತ್ಯದಲ್ಲಿರುವ ಮಿಯಾಮಿ ಡೇಡ್​ ಕೌಂಟಿಯಲ್ಲಿ ಗುರುವಾರ ಮುಂಜಾನೆ 12 ಅಂತಸ್ತಿನ ಕಟ್ಟಡವೊಂದು ಭಾಗಶಃ ಕುಸಿದುಬಿದ್ದು 5 ಮಂದಿ ಮೃತಪಟ್ಟಿದ್ದಾರೆ. 156ಕ್ಕೂ ಹೆಚ್ಚು ನಾಪತ್ತೆಯಾಗಿದ್ದಾರೆ. ಇವರನ್ನು ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ. ಈ ಸುದ್ದಿಯನ್ನು ಶುಕ್ರವಾರ ಫ್ಲೋರಿಡಾದ ಮಾಧ್ಯಮಗಳು ವರದಿ ಮಾಡಿವೆ. ಮಿಯಾಮಿ ಡೇಡ್​​ನ ಮೇಯರ್ ಡೇನಿಯಲ್ಲಾ ಲೆವಿನ್ ಕಾವಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿಯಿಂದ ಜನರನ್ನು ರಕ್ಷಿಸುವುದಕ್ಕೆ, ಮೃತದೇಹಗಳನ್ನು ಹೊರತೆಗೆಯುವುದಕ್ಕೆ ಮತ್ತು ನಂತರ ಅವರನ್ನು ಗುರುತಿಸುವುದಕ್ಕೆ ತುಂಬ ಕಷ್ಟಪಟ್ಟರು ಎಂದು ಹೇಳಿದ್ದಾರೆ.

ಯಾರು ಸತ್ತಿದ್ದು ಎಂದು ತಿಳಿಯಲು ಅವರ ಡಿಎನ್​ಎ ಪರೀಕ್ಷೆ ಕೂಡ ಮಾಡಬೇಕಾಯಿತು ಎಂದಿದ್ದಾರೆ. ಮಿಯಾಮಿ ಡೇಡ್​​​ನ ಸರ್ಫ್​ಸೈಡ್​ ಪಟ್ಟಣದಲ್ಲಿರುವ ಈ ಚಾಂಪ್ಲೇನ್​ ಟವರ್ಸ್​ನ್ನು 1981ರಲ್ಲಿ ಕಟ್ಟಲಾಗಿದ್ದು, ಅಮೆರಿಕ ಕಾಲಮಾನದ ಪ್ರಕಾರ ಮುಂಜಾನೆ 1.30ಕ್ಕೆ ಭಾಗಶಃ ಕುಸಿದುಬಿದ್ದಿದೆ. ಕಟ್ಟಡ ಕುಸಿತದಿಂದಾಗಿ ಸುತ್ತಲಿನ ಅಪಾರ್ಟ್​​ಮೆಂಟ್​​ಗಳು, ಮನೆಗಳಿಗೂ ತೀವ್ರ ಹಾನಿಯಾಗಿದೆ. ಕಟ್ಟಡ ಬೀಳುವಾಗ ಅದರಲ್ಲಿ ಬಹುಸಂಖ್ಯೆಯಲ್ಲಿ ಜನರು ಇರಲಿಲ್ಲ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಸರ್ಫ್​ಸೈಡ್​​ನ ದುರಂತವನ್ನು ತುರ್ತುಪರಿಸ್ಥಿತಿಯೆಂದು ಘೋಷಣೆ ಮಾಡಿದ್ದು, ಅದರಡಿ ಸಿಗುವ ಪರಿಹಾರ ನೀಡಿದ್ದಾರೆ ಮತ್ತು ವಿಪತ್ತು ಪರಿಹಾರವನ್ನೂ ಪ್ರಕಟಿಸಿದ್ದಾರೆ ಎಂದು ಮೇಯರ್​ ತಿಳಿಸಿದ್ದಾರೆ. ಕಾಣೆಯಾದವರಲ್ಲಿ ಕೊಲಂಬಿಯಾ, ಕ್ಯೂಬಾ, ಚಿಲಿ, ಪರಾಗ್ವೆ, ಪೋರ್ಟೊ ರಿಕೊ ಮತ್ತು ಅರ್ಜೆಂಟೀನಾ ಸೇರಿದಂತೆ ಲ್ಯಾಟಿನ್ ಅಮೆರಿಕದ 27 ಮಂದಿ ಕೂಡ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮನ್ಮುಲ್ನಲ್ಲಿ ಹಾಲಿಗೆ ನೀರು ಬೆರೆಸಿದ ಕೇಸ್ಗೆ ಮೆಗಾ ಟ್ವಿಸ್ಟ್.. ಹಗರಣ ಕೈಬಿಡುವಂತೆ ಒತ್ತಡ ಹಾಕಿದ್ರಾ H.D.ದೇವೇಗೌಡ?

ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ