AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾವು, ನಾಗರಹಾವಿಗೆ ಬೌದ್ಧ ಸನ್ಯಾಸಿ ಆಶ್ರಯ

ಇಲ್ಲೋರ್ವರು ಹೆಬ್ಬಾವಿನ ಜೊತೆ ಸ್ನೇಹ ಬೆಳಿಸಿಕೊಂಡು ಅವುಗಳಿಗೂ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಇವರ ಹೆಸರು ವಿಲಥಾ. ಮಯನ್ಮಾರ್​ನ ಯಾಂಗೊನ್​ ಹೊರವಲಯದಲ್ಲಿ ಸೀಕ್ತಾ ತುಖಾ ಟೆಟೊ ಎಂಬ ಮಠವನ್ನು ಹೊಂದಿದ್ದಾರೆ.

ಹೆಬ್ಬಾವು, ನಾಗರಹಾವಿಗೆ ಬೌದ್ಧ ಸನ್ಯಾಸಿ ಆಶ್ರಯ
ಹೆಬ್ಬಾವು ರಕ್ಷಿಸುತ್ತಿರುವ ಬೌದ್ಧ ಸನ್ಯಾಸಿ
shruti hegde
| Updated By: guruganesh bhat|

Updated on:Dec 04, 2020 | 7:14 PM

Share

ಅಬ್ಬಬ್ಬಾ, ಹಾವು ಎಂದರೆ ಯಾರಿಗೆ ಭಯ ಇಲ್ಲ ಹೇಳಿ? ಹಾವು ಕಂಡರೆ ಜನರು ಮಾರುದ್ದ ಓಡುತ್ತಾರೆ. ಆದರೆ ಇಲ್ಲೋರ್ವರು ಹೆಬ್ಬಾವಿನ ಜೊತೆ ಸ್ನೇಹ ಬೆಳಿಸಿಕೊಂಡು ಅವುಗಳಿಗೂ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಕುತೂಹಲ ಮೂಡಿಸುತ್ತಿದೆ ಅಲ್ವೇ.. ನೋಡೋಣ ಬನ್ನಿ ಇವರ ಫುಲ್ ಹಿಸ್ಟರಿ..

ಯಾರು ಇವರು? ಇವರು 69 ವರ್ಷದ ಬೌದ್ಧ ಸನ್ಯಾಸಿ. ಇವರ ಹೆಸರು ವಿಲಥಾ. ಮಯನ್ಮಾರ್​ನ ಯಾಂಗೊನ್​ ಹೊರವಲಯದಲ್ಲಿ ಸೀಕ್ತಾ ತುಖಾ ಟೆಟೊ ಹೆಸರಿನ ಮಠವನ್ನು ಹೊಂದಿದ್ದಾರೆ.

ಹಾವುಗಳಿಗೆ ಆಶ್ರಯವೆಲ್ಲಿ? ಸೀಕ್ತಾ ತುಖಾ ಟೆಟೊ ಮಠದಲ್ಲಿ ಹೆಬ್ಬಾವು ಮತ್ತು ನಾಗರಹಾವುಗಳಿಗೆ ಆಶ್ರಯ ನೀಡುತ್ತಿದ್ದಾರೆ. ಅವುಗಳಿಗೆ ಆಹಾರ ಜೊತೆ ಆರೈಕೆ ಮಾಡುತ್ತಾರೆ. ಮಠವೀಗ ಯಾಂಗೊನ್ ಹೊರವಲಯದಲ್ಲಿರುವ ಅಭಯಾರಣ್ಯವಾಗಿ ಮಾರ್ಪಟ್ಟಿದೆ. ಐದು ವರ್ಷಗಳಿಂದ ಹಾವುಗಳಿಗೆ ಆಶ್ರಯ ನೀಡುವ ಕಾಯಕ ಆರಂಭವಾಗಿದೆ. ನಿವಾಸಿಗಳು ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳ ಸದಸ್ಯರು ತಾವು ಸೆರೆಹಿಡಿದ ಹಾವುಗಳನ್ನು ಸನ್ಯಾಸಿಗೆ ತಂದು ಕೊಡುತ್ತಿದ್ದಾರೆ.

ಮಯನ್ಮಾರ್​ ಜನರು ಹಾವುಗಳನ್ನು ಕೊಲ್ಲುವುದು ಅಥವಾ ಮಾರಾಟ ಮಾಡುವುದರಲ್ಲಿ ತೊಡಗುತ್ತಾರೆ. ಅದರ ಬದಲು ಜನರು ನನಗೆ ಹಾವುಗಳನ್ನು ನೀಡುವುದರಿಂದ ಅವುಗಳನ್ನು ರಕ್ಷಿಸುತ್ತೇನೆ. ನನ್ನ ಮಕ್ಕಳು ಕಾವಿ ವಸ್ತ್ರದಲ್ಲಿ ಹಾವುಗಳ ಮೈ ಸವರಿ ಆರೈಕೆ ಮಾಡುತ್ತಾರೆ. ಪರಿಸರವನ್ನು ರಕ್ಷಿಸುವ ಉದ್ದೇಶ ನನ್ನದು ಎನ್ನುತ್ತಾರೆ ವಿಲಥಾ.

Published On - 7:03 pm, Fri, 4 December 20

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ