AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವಿನಿಂದ ಕಚ್ಚಿಸಿಕೊಂಡರೆ ಹೆಚ್ಚು ನೋವಾಗುವುದೇ ಇಲ್ಲವಂತೆ!

ಪ್ರಾಣಿ ಪ್ರೇಮಿ ಡೇವಿಡ್ ಪ್ರಕಾರ ಹಾವು ದುರ್ಬಲ ದವಡೆ ಮತ್ತು ಕಡಿಮೆ ಒತ್ತಡದ ಕಚ್ಚುವಿಕೆಯಿಂದ ಕೂಡಿದ್ದು, ಹತ್ತರಲ್ಲಿ ಒಂದರಷ್ಟು ಮಾತ್ರ ಹಾವಿನ ಕಚ್ಚುವಿಕೆಯ ಅಪಾಯ ಇರುತ್ತದೆ. ಹಾವುಗಳೇ ನನ್ನ ಪ್ರೇರಣೆ ಅವುಗಳು ನಿಜವಾಗಿಯೂ ಅಪಾಯಕಾರಿಯಲ್ಲ. ಈ ಬಗ್ಗೆ ಜನರಿಗೂ ಕೂಡ ಹೆಚ್ಚು ಆಸಕ್ತಿ ಮತ್ತು ಉತ್ಸಾಹ ಇದೆ ಎಂದು ಡೇವಿಡ್ ಎಂದು ಹೇಳಿದ್ದಾನೆ.

ಹಾವಿನಿಂದ ಕಚ್ಚಿಸಿಕೊಂಡರೆ ಹೆಚ್ಚು ನೋವಾಗುವುದೇ ಇಲ್ಲವಂತೆ!
ಹಾವಿನೊಂದಿಗೆ ಡೇವಿಡ್
preethi shettigar
|

Updated on:Dec 05, 2020 | 12:29 PM

Share

ಆಸ್ಟ್ರೇಲಿಯಾ: ಸರೀಸೃಪಗಳು ಅಂದ್ರೆ  ಯಾರಿಗೇ ಆಗಲಿ ಭಯ ಇದ್ದೇ ಇರುತ್ತದೆ, ಆದ್ರೆ ಈಗ ಇವುಗಳನ್ನು ಹಿಡಿದು ಕಚ್ಚಿಸಿಕೊಂಡು ಅದರ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನರಲ್ಲಿ ಸಂಚಲನ ಮೂಡಿಸುವುದು ಒಂದು ಟ್ರೆಂಡ್ ಆಗಿದೆ.

ಧೈರ್ಯಶಾಲಿ ಹರ್ಪಿಟಾಲಜಿಸ್ಟ್ ಹಾವು ಕಚ್ಚುವುದರಿಂದ ನೋವಾಗುವುದಿಲ್ಲ ಮತ್ತು ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇನೆ ಎಂದು ತನಗೆ ಹಾವು ಕಚ್ಚಿದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದು, ಸದ್ಯ ಇದು ಭಾರಿ ಸದ್ದು ಮಾಡಿದೆ.

ವೀಡಿಯೊ ಮೂಲಕ ಮಾಹಿತಿ:

21ರ ಹರೆಯದ ಡೇವಿಡ್ ಓರಿನ್ ಹಂಫ್ಲೆಟ್ ಬರ್ಮೀನ್​ ವೀಡಿಯೊ ಒಂದರಲ್ಲಿ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ನೀರಿಗೆ ಹಾರಿರುವುದನ್ನು ತೋರಿಸುತ್ತಾನೆ. ಮತ್ತೊಂದು ವೀಡಿಯೊದಲ್ಲಿ ಫ್ಲೋರಿಡಾದ ಗೇನ್ಸ್​ವಿಲ್ಲೆಯ ಡೆಲಿವರಿ ಡ್ರೈವರ್ ಗಲ್ಫ್ ಸಾಲ್ಟ್ಮಾರ್ಷ್​ ಹಾವು ಆತನ ತುಟಿಯನ್ನು ಕಚ್ಚಿ ರಕ್ತಸಿಕ್ತಗೊಳಿಸಿರುವ ದೃಶ್ಯಗಳನ್ನು ಸೆರೆ ಹಿಡಿದು, ಹಾವು ಕಚ್ಚುವಿಕೆಯಿಂದ ಎಷ್ಟು ನೋವಾಗುತ್ತದೆ ಎಂದು ತನ್ನ ವೀಡಿಯೊಗಳ ಮೂಲಕ ತೋರಿಸಿದ್ದಾನೆ.

ಹಾವು ಅಪಾಯಕಾರಿಯೇ?

ಡೇವಿಡ್ ಹಾವು ಕಚ್ಚುವುದರಿಂದ ಎಷ್ಟು ನೋವಾಗುತ್ತದೆ ಎಂದು ರೇಟಿಂಗ್ ಕೂಡ ಮಾಡಿದ್ದು, ಅದರ ಆಧಾರದ ಮೇಲೆ ಸರೀಸೃಪಗಳು ಅಷ್ಟೊಂದು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾನೆ. ಹಾವು ಕಚ್ಚಿದ ನಂತರದಲ್ಲಿ ಡೇವಿಡ್ ಈ ಪ್ರಾಣಿಯು ದೊಡ್ಡ ಕೆಲಸ ಮಾಡಿದೆ ಎಂದು ಹೇಳಿದ್ದು, ಬಹಶಃ ಅದರ ತೀವ್ರತೆಯನ್ನು ನೋಡಿದಾಗ ಆತನಿಗೆ ಹೊಲಿಗೆಯ ಅವಶ್ಯಕತೆ ಇದೆ ಎಂಬುವುದು ತಿಳಿದು ಬಂದಿದೆ.

ಹಾವುಗಳೇ ಪ್ರೇರಣೆ:

ಪ್ರಾಣಿ ಪ್ರೇಮಿ ಡೇವಿಡ್ ಪ್ರಕಾರ ಹಾವು ದುರ್ಬಲ ದವಡೆ ಮತ್ತು ಕಡಿಮೆ ಒತ್ತಡದ ಕಚ್ಚುವಿಕೆಯಿಂದ ಕೂಡಿದ್ದು, ಹತ್ತರಲ್ಲಿ ಒಂದರಷ್ಟು ಮಾತ್ರ ಹಾವಿನ ಕಚ್ಚುವಿಕೆಯ ಅಪಾಯ ಇರುತ್ತದೆ. ಹಾವುಗಳೇ ನನ್ನ ಪ್ರೇರಣೆ ಅವುಗಳು ನಿಜವಾಗಿಯೂ ಅಪಾಯಕಾರಿಯಲ್ಲ. ಈ ಬಗ್ಗೆ ಜನರಿಗೂ ಕೂಡ ಹೆಚ್ಚು ಆಸಕ್ತಿ ಮತ್ತು ಉತ್ಸಾಹ ಇದೆ ಎಂದು ಡೇವಿಡ್ ಎಂದು ಹೇಳಿದ್ದಾನೆ.

ಡೇವಿಡ್ ತನ್ನನ್ನು ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞ ಸ್ಟೀವ್ ಇರ್ವಿನ್​ಗೆ ಹೋಲಿಸಿಕೊಂಡಿದ್ದು, ತಾನು ಮಾಡುವ ಪ್ರತಿಯೊಂದು ಹಾವು ಹಾಗೂ ಅವುಗಳು ಕಚ್ಚುವ ವೀಡಿಯೊವನ್ನು ಪ್ರೀತಿಸುತ್ತಾನೆ ಎಂದು ಹೇಳಿದನು. ಹಾವುಗಳ ಬಗ್ಗೆ ಜನರಲ್ಲಿ ಇರುವ ಆತಂಕವನ್ನು ದೂರ ಮಾಡುವುದೆ ನನ್ನ ಉದ್ದೇಶ. ಐದು ವರ್ಷಗಳಿಂದ ಈ ಕೆಲಸದಲ್ಲಿ ಇದ್ದು ಹಾವು ಹಿಡಿಯುವ ನನ್ನ ಕೌಶಲ್ಯವನ್ನು ಎಲ್ಲರೂ ಗೌರವಿಸಿದ್ದಾರೆ ಎಂದು ಡೇವಿಡ್ ಹೇಳಿದನು.

ದನದ ಕೊಟ್ಟಿಗೆ ಬಳಿ ನಾಗರಾಜ ಪ್ರತ್ಯಕ್ಷ, ಸ್ಥಳೀಯ ನಿವಾಸಿಗಳಲ್ಲಿ ಆತಂಕ

Published On - 12:12 pm, Sat, 5 December 20

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ