AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಲಸೆಗಾರರ ಬಗ್ಗೆ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್‌ಮನ್ ಹೇಳಿಕೆಗೆ ಭಾರತ ಪ್ರತಿಕ್ರಿಯೆ

ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಕುರಿತು ವೀಸಾ-ಸಂಬಂಧಿತ "ಮೀಸಲಾತಿ" ಯನ್ನು ಹೊಂದಿರುವ ಬಗ್ಗೆ ಬ್ರೇವರ್‌ಮನ್ ಅವರ ವಿವಾದಾತ್ಮಕ ಹೇಳಿಕೆ ಉಲ್ಲೇಖಿಸಿದ ಹೈಕಮಿಷನ್, ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಸಲಾಗುತ್ತಿದೆ

ವಲಸೆಗಾರರ ಬಗ್ಗೆ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್‌ಮನ್ ಹೇಳಿಕೆಗೆ ಭಾರತ ಪ್ರತಿಕ್ರಿಯೆ
ಸುಯೆಲ್ಲಾ ಬ್ರೇವರ್‌ಮನ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Oct 07, 2022 | 4:41 PM

Share

ಲಂಡನ್: ಮೈಗ್ರೇಷನ್ ಆಂಡ್ ಮೊಬಿಲಿಟಿ ಪಾರ್ಟ್ನರ್ಶಿಪ್ (MMP) “ಉತ್ತಮವಾಗಿ ಕೆಲಸ ಮಾಡಲಿಲ್ಲ” ಎಂಬ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್‌ಮನ್ ಅವರ ಹೇಳಿಕೆಗೆ ಭಾರತ ಪ್ರತಿಕ್ರಯಿಸಿದ್ದು ಒಪ್ಪಂದದ ಅಡಿಯಲ್ಲಿ ಭಾರತವು ಎಲ್ಲಾ ಪ್ರಕರಣಗಳ ಮೇಲೆ ಕ್ರಮವನ್ನು ಪ್ರಾರಂಭಿಸಿದೆ ಎಂದಿದೆ. ‘ದಿ ಸ್ಪೆಕ್ಟೇಟರ್’ ನಲ್ಲಿ ಬ್ರೇವರ್‌ಮನ್ ನೀಡಿದ ಸಂದರ್ಶನದಲ್ಲಿ ಅವರು ಬ್ರಿಟನ್ ನಲ್ಲಿ ತಮ್ಮ ವೀಸಾಗಳನ್ನು ಮೀರಿದ “ಜನರ ದೊಡ್ಡ ಗುಂಪು” ಎಂದು ಭಾರತೀಯರನ್ನು ಬ್ರಾಂಡ್ ಮಾಡಿದ್ದರು. ಈ ಬಗ್ಗೆ ಪಿಟಿಐ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾರತೀಯ ಹೈಕಮಿಷನ್, ಕಳೆದ ವರ್ಷ ಸಹಿ ಮಾಡಲಾದ MMP ಅಡಿಯಲ್ಲಿ ಯುಕೆ ಸರ್ಕಾರವು ಕೈಗೊಂಡ ಕೆಲವು ಬದ್ಧತೆಗಳ ಮೇಲೆ ಭಾರತವು ಸ್ಪಷ್ಟ ಪ್ರಗತಿಗಾಗಿ ಕಾಯುತ್ತಿದೆ ಎಂದಿದೆ.

“ವಲಸೆ ಮತ್ತು ಚಲನಶೀಲತೆಯ ಅಡಿಯಲ್ಲಿ ನಮ್ಮ ವ್ಯಾಪಕ ಚರ್ಚೆಗಳ ಭಾಗವಾಗಿ, ಯುಕೆಯಲ್ಲಿ ತಮ್ಮ ವೀಸಾ ಅವಧಿಯನ್ನು ಮೀರಿದ ಭಾರತೀಯ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ಭಾರತ ಸರ್ಕಾರವು ಯುಕೆ ಸರ್ಕಾರದೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ ಎಂದು ಭಾರತದ ಹೈ ಕಮಿಷನ್ ಹೇಳಿಕೆ ಗುರುವಾರ ತಿಳಿಸಿದೆ. ಗೃಹ ಕಚೇರಿಯೊಂದಿಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ, ಹೈಕಮಿಷನ್‌ಗೆ ಉಲ್ಲೇಖಿಸಲಾದ ಎಲ್ಲಾ ಪ್ರಕರಣಗಳ ಮೇಲೆ ಕ್ರಮವನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ, ವಲಸೆ ಮತ್ತು ಮೊಬಿಲಿಟಿ ಪ್ರೋಟೋಕಾಲ್‌ನ ಭಾಗವಾಗಿ ಕೆಲವು ಬದ್ಧತೆಗಳನ್ನು ಪೂರೈಸಲು ಕಾಯುತ್ತಿದ್ದೇವೆ ಎಂದು ಹೈಕಮಿಷನ್ ಹೇಳಿದೆ.

ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಕುರಿತು ವೀಸಾ-ಸಂಬಂಧಿತ “ಮೀಸಲಾತಿ” ಯನ್ನು ಹೊಂದಿರುವ ಬಗ್ಗೆ ಬ್ರೇವರ್‌ಮನ್ ಅವರ ವಿವಾದಾತ್ಮಕ  ಹೇಳಿಕೆ ಉಲ್ಲೇಖಿಸಿದ ಹೈಕಮಿಷನ್, ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಸಲಾಗುತ್ತಿದೆ, ಯಾವುದೇ ಭವಿಷ್ಯದ ವ್ಯವಸ್ಥೆಗಳು ಪರಸ್ಪರ ಪ್ರಯೋಜನಕಾರಿ ಎಂದಿದೆ.

ಕಳೆದ ತಿಂಗಳು ಗೃಹ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಭಾರತೀಯ ಮೂಲದ ಸಚಿವರಾದ ಬ್ರೇವರ್‌ಮನ್ ತಾನು ಭಾರತದೊಂದಿಗೆ ಎಫ್‌ಟಿಎ ಬಗ್ಗೆ “ಕಳವಳವನ್ನು” ಹೊಂದಿದ್ದಾರೆ ಎಂದು ಹೇಳಿದ್ದಾರೆ. “ಭಾರತದೊಂದಿಗೆ ಮುಕ್ತ ಗಡಿ ವಲಸೆ ನೀತಿಯನ್ನು ಹೊಂದಿರುವ ಬಗ್ಗೆ ನನಗೆ ಕಳವಳವಿದೆ. ಏಕೆಂದರೆ ಜನರು ಬ್ರೆಕ್ಸಿಟ್‌ನೊಂದಿಗೆ ಮತ ಚಲಾಯಿಸಿದ್ದಾರೆಂದು ನಾನು ಭಾವಿಸುವುದಿಲ್ಲ ಎಂದು ಬ್ರೇವರ್‌ಮನ್ ಬ್ರಿಟಿಷ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ