ತನ್ನ ಭಯೋತ್ಪಾದಕ ಮಾಗಜಿನ್ ಖುರಾಸನ್​ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದ ಐಸಿಸ್

ಐಸಿಸ್ ಭಯೋತ್ಪಾದಕ ಸಂಘಟನೆಯು ತನ್ನ ನಿಯತಕಾಲಿಕೆ ವಾಯ್ಸ್​ ಆಫ್ ಖುರಾಸನ್​ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ತನ್ನ ನಿಯತಕಾಲಿಕೆ 'ವಾಯ್ಸ್ ಆಫ್ ಖೊರಾಸನ್ 32 ನೇ ಆವೃತ್ತಿಯಲ್ಲಿ ಹಿಂದೂಗಳು ಮತ್ತು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ದೇಶದಲ್ಲಿ ಹತ್ಯಾಕಾಂಡ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ವಾಯ್ಸ್ ಆಫ್ ಖುರಾಸನ್‌ನ 32 ನೇ ಸಂಚಿಕೆ ಹಲವಾರು ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್ ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಯಿತು. ವಾಯ್ಸ್ ಆಫ್ ಖುರಾಸನ್ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಆನ್‌ಲೈನ್ ನಿಯತಕಾಲಿಕವಾಗಿದೆ.

ತನ್ನ ಭಯೋತ್ಪಾದಕ ಮಾಗಜಿನ್ ಖುರಾಸನ್​ನಲ್ಲಿ  ಭಾರತಕ್ಕೆ ಬೆದರಿಕೆ ಹಾಕಿದ ಐಸಿಸ್
ಖುರಾಸನ್

Updated on: Feb 02, 2024 | 8:03 AM

ಐಸಿಸ್(ISIS) ಭಯೋತ್ಪಾದಕ ಸಂಘಟನೆಯು ತನ್ನ ನಿಯತಕಾಲಿಕೆ ವಾಯ್ಸ್​ ಆಫ್ ಖುರಾಸನ್​ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ತನ್ನ ನಿಯತಕಾಲಿಕೆ ‘ವಾಯ್ಸ್ ಆಫ್ ಖೊರಾಸನ್ 32 ನೇ ಆವೃತ್ತಿಯಲ್ಲಿ ಹಿಂದೂಗಳು ಮತ್ತು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ದೇಶದಲ್ಲಿ ಹತ್ಯಾಕಾಂಡ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ವಾಯ್ಸ್ ಆಫ್ ಖುರಾಸನ್‌ನ 32 ನೇ ಸಂಚಿಕೆ ಹಲವಾರು ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್ ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಯಿತು. ವಾಯ್ಸ್ ಆಫ್ ಖುರಾಸನ್ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಆನ್‌ಲೈನ್ ನಿಯತಕಾಲಿಕವಾಗಿದೆ.

ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ, ಗುಜರಾತ್ ಗಲಭೆ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಸೇಡು ತೀರಿಸಿಕೊಳ್ಳಲು ನಾವು ಬರುತ್ತೇವೆ ಎಂದು ಹೇಳಿದ್ದಾರೆ. ಭಾರತದ ವಿರುದ್ಧ ಇಂತಹ ಗೊಡ್ಡು ಬೆದರಿಕೆಗಳು ಬಂದಿರುವುದು ಇದೇನು ಮೊದಲಲ್ಲ, ಈ ಮೊದಲು ಕೂಡ ಸೇನೆಯು ಇಂತಹ ಹಲವು ಭಯೋತ್ಪಾದಕರನ್ನು ಸದೆಬಡಿದಿದೆ. ಐಸಿಸ್​ನ ಈ ಪೊಳ್ಳು ಬೆದರಿಕೆಗಳು ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.

ಭಯೋತ್ಪಾದನೆಯ ವಿರುದ್ಧದ ಕ್ರಮದಿಂದ ಭಯೋತ್ಪಾದಕರು ಇರಾಕ್, ಸಿರಿಯಾದಿಂದ ಕಾಲ್ಕಿತ್ತರು. ಅಫ್ಘಾನಿಸ್ತಾನದಲ್ಲಿ ತನ್ನ ಅಸ್ತಿತ್ವವನ್ನು ಇನ್ನೂ ಹೊಂದಿದೆ. ಐಸಿಸ್ ಮಾಡ್ಯೂಲ್​ಗೆ ಸಂಬಂಧಿಸಿದ ಉಗ್ರರು ಭಾರತದಲ್ಲೂ ಸಿಕ್ಕಿಬಿದ್ದಿದ್ದಾರೆ.

ಮತ್ತಷ್ಟು ಓದಿ: ಐಎಸ್​ಐಎಸ್​ ಸಂಘಟನೆಗೆ ಬೆಂಬಲ ನೀಡ್ತಿದ್ದ ಉಗ್ರನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ನವೆಂಬರ್ 2023 ರಲ್ಲಿ, ಶ್ರೀನಗರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಲ್ಲಿ ಹಿಂದೂ ವಿದ್ಯಾರ್ಥಿಯೊಬ್ಬರು ಹಮಾಸ್ ನಾಯಕನ ಮಗ ಪ್ರವಾದಿ ಮುಹಮ್ಮದ್ ಅವರನ್ನು ಟೀಕಿಸುವ ವೀಡಿಯೊವನ್ನು ಹಂಚಿಕೊಂಡ ನಂತರ ಧರ್ಮನಿಂದೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು.

ಹಿಂದೂ ಎನ್‌ಐಟಿ ವಿದ್ಯಾರ್ಥಿಯು ಮೊಸಾಬ್ ಹಸನ್ ಯೂಸೆಫ್ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ವಿಮರ್ಶಾತ್ಮಕ ಕಾಮೆಂಟ್‌ಗಳನ್ನು ಮಾಡುವ ವೀಡಿಯೊವನ್ನು ಈಗಾಗಲೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:03 am, Fri, 2 February 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us