ಹೆಗ್ಗಣಗಳ ಮೇಲೆ ಪ್ರಯೋಗಿಸಿ, ಕೊರೊನಾ ವ್ಯಾಕ್ಸಿನ್​ ಕಂಡುಹಿಡಿದ ಇಸ್ರೇಲ್!

ಟೆಲ್​ ಅವೀವ್: ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ಆದ್ರೆ ಬಲಿಷ್ಠ ರಾಷ್ಟ್ರವಾದ ಇಸ್ರೇಲ್​ ಮಹತ್ವದ ಸಾಧನೆ ಮಾಡಿದೆ. ಕೊವಿಡ್ 19 ವೈರಸ್​ಗೆ ಆಂಟಿಬಾಡಿ ಕಂಡುಹಿಡಿಯುವ ಹಾದಿಯಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದೆ. ಈ ಕುರಿತು ಮಹತ್ವದ ಸುಳಿವು ನೀಡಿರುವ ಇಸ್ರೇಲ್​ನ ರಕ್ಷಣಾ ಸಚಿವ ನಫ್ತಾಲಿ ಬೆನೆಟ್, ಕೊರೊನಾ ವೈರಸ್​ ಮಟ್ಟ ಹಾಕಲು ವ್ಯಾಕ್ಸಿನ್​ ಸಿದ್ಧಪಡಿಸುವಲ್ಲಿ ನಮ್ಮ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ (IIBR) ಮಹತ್ವದ ಸಾಧನೆ ಮಾಡಲಾಗಿದೆ. IIBR ಲ್ಯಾಬ್​ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್​ಅನ್ನು ಸದ್ಯದಲ್ಲೇ ಕೊರೊನಾ […]

ಹೆಗ್ಗಣಗಳ ಮೇಲೆ ಪ್ರಯೋಗಿಸಿ, ಕೊರೊನಾ ವ್ಯಾಕ್ಸಿನ್​ ಕಂಡುಹಿಡಿದ ಇಸ್ರೇಲ್!
ಸಾಧು ಶ್ರೀನಾಥ್​

Updated on: May 05, 2020 | 2:04 PM

ಟೆಲ್​ ಅವೀವ್: ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ಆದ್ರೆ ಬಲಿಷ್ಠ ರಾಷ್ಟ್ರವಾದ ಇಸ್ರೇಲ್​ ಮಹತ್ವದ ಸಾಧನೆ ಮಾಡಿದೆ. ಕೊವಿಡ್ 19 ವೈರಸ್​ಗೆ ಆಂಟಿಬಾಡಿ ಕಂಡುಹಿಡಿಯುವ ಹಾದಿಯಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದೆ.

ಈ ಕುರಿತು ಮಹತ್ವದ ಸುಳಿವು ನೀಡಿರುವ ಇಸ್ರೇಲ್​ನ ರಕ್ಷಣಾ ಸಚಿವ ನಫ್ತಾಲಿ ಬೆನೆಟ್, ಕೊರೊನಾ ವೈರಸ್​ ಮಟ್ಟ ಹಾಕಲು ವ್ಯಾಕ್ಸಿನ್​ ಸಿದ್ಧಪಡಿಸುವಲ್ಲಿ ನಮ್ಮ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ (IIBR) ಮಹತ್ವದ ಸಾಧನೆ ಮಾಡಲಾಗಿದೆ. IIBR ಲ್ಯಾಬ್​ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್​ಅನ್ನು ಸದ್ಯದಲ್ಲೇ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಮೇಲೆ ಪ್ರಯೋಗಿಸಲಾಗುವುದು. ಅದರಲ್ಲಿಯೂ ಯಶಸ್ಸು ಸಾಧಿಸಿದ ಬಳಿಕ ಅದನ್ನು ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸುವ ಬಗ್ಗೆ ರಕ್ಷಣಾ ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ನಫ್ತಾಲಿ ಬೆನೆಟ್ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ವ್ಯಾಕ್ಸಿನ್​ ಸಿದ್ಧಪಡಿಸುವ ಮೂಲಕ ಹೊಸಹೊಸ ಸಂಶೋಧನೆಗಳಿಗೆ ಹಪಹಪಿಸುವ ಯಹೂದಿಗಳು ಮತ್ತೊಮ್ಮೆ ಜಗತ್ತಿಗೆ ತಮ್ಮ ಶಕ್ತಿಯನ್ನು ತೋರಿಸಲಿದ್ದಾರೆ ಎಂದು ಅವರು ಹೆಮ್ಮೆಪಟ್ಟಿದ್ದಾರೆ. ಅಂದಹಾಗೆ, IIBR ಸಂಶೋಧಕರು ಮೊದಲು ಹೆಗ್ಗಣಗಳ ಮೇಲೆ ಕೊರೊನಾ ವ್ಯಾಕ್ಸಿನ್​ ಅನ್ನ ಪ್ರಯೋಗಿಸಿ, ಯಶಸ್ಸು ಕಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us