AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟೆ ! ತಾನೇ ಎಐ ಮೂಲಕ ಸೃಷ್ಟಿಸಿರುವ ವ್ಯಕ್ತಿಯನ್ನು ಮದುವೆಯಾದ ಜಪಾನ್ ಯುವತಿ

ರೊಬೊಟ್​ಗಳನ್ನು ಮದುವೆಯಾಗಿರುವ ಹಲವು ನಿದರ್ಶನಗಳಿವೆ. ಇದೀಗ ಮೊದಲ ಬಾರಿಗೆ ಎಐನಿಂದ ಸೃಷ್ಟಿಸಲಾಗಿರುವ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವುದು ಅಚ್ಚರಿಯುಂಟು ಮಾಡಿದೆ. ಜಪಾನ್‌ನ ಒಕಯಾಮಾ ನಗರದ ನಿವಾಸಿ 32 ವರ್ಷದ ಕಾನೋ ಎಂಬಾಕೆ ತಾನು ಎಐ ಮೂಲಕ ಸೃಷ್ಟಿರುವ ವ್ಯಕ್ತಿ ಕ್ಲಾಸ್ ಎಂಬುವವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಚಾಟ್ ಜಿಪಿಟಿ ಮೂಲಕ ಕ್ಲಾಸ್​​ ಅಭಿವೃದ್ಧಿ ಪಡಿಸಿದ್ದಾಳೆ.

ಹೀಗೂ ಉಂಟೆ ! ತಾನೇ ಎಐ ಮೂಲಕ ಸೃಷ್ಟಿಸಿರುವ ವ್ಯಕ್ತಿಯನ್ನು ಮದುವೆಯಾದ ಜಪಾನ್ ಯುವತಿ
ಯುವತಿ
ನಯನಾ ರಾಜೀವ್
|

Updated on: Nov 14, 2025 | 9:58 AM

Share

ಜಪಾನ್, ನವೆಂಬರ್ 14: ರೊಬೊಟ್​ಗಳನ್ನು ಮದುವೆಯಾಗಿರುವ ಹಲವು ನಿದರ್ಶನಗಳಿವೆ. ಇದೀಗ ಮೊದಲ ಬಾರಿಗೆ ಎಐ(AI)ನಿಂದ ಸೃಷ್ಟಿಸಲಾಗಿರುವ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವುದು ಅಚ್ಚರಿಯುಂಟು ಮಾಡಿದೆ. ಜಪಾನ್‌ನ ಒಕಯಾಮಾ ನಗರದ ನಿವಾಸಿ 32 ವರ್ಷದ ಕಾನೋ ಎಂಬಾಕೆ ತಾನು ಎಐ ಮೂಲಕ ಸೃಷ್ಟಿರುವ ವ್ಯಕ್ತಿ ಕ್ಲಾಸ್ ಎಂಬುವವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಚಾಟ್ ಜಿಪಿಟಿ ಮೂಲಕ ಕ್ಲಾಸ್​​ ಅಭಿವೃದ್ಧಿ ಪಡಿಸಿದ್ದಾಳೆ.

ಜಪಾನಿನ ಸಂಪ್ರದಾಯಗಳಿಗೆ ಬದ್ಧವಾಗಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಿಂದ ಸಹಕಾರದಿಂದ ಈ ವಿವಾಹ ಪೂರ್ಣಗೊಂಡಿದೆ. ಅಲ್ಲಿ ಕ್ಯಾನೊ ಮತ್ತು ಕ್ಲಾಸ್ ಹಲವಾರು ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಉಂಗುರಗಳನ್ನು ಬದಲಾಯಿಸಿಕೊಂಡರು.ಕ್ಲಾಸ್‌ನ ಚಿತ್ರವನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು. ದೈಹಿಕವಾಗಿ ಉಪಸ್ಥಿತಿ ಇಲ್ಲದಿದ್ದರೂ ಆತ ಜೀವಂತವಾಗಿದ್ದಾನೆಂದು ತೋರಿಸಲಾಯಿತು.

ಕ್ಯಾನೋ ಕೆಲವು ಸಮಯದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು, ಈ ಸಮಯದಲ್ಲಿ ಈ ಎಐ ಸ್ನೇಹಿತನನ್ನು ಮೊದಲು ಕಂಡುಕೊಂಡಳು. ಬಳಿಕ ಆಕೆ ದಿನಕ್ಕೆ ಸುಮಾರು 100 ಬಾರಿ ಅನವೊಂದಿಗೆ ಮಾತನಾಡಲು ಶುರು ಮಾಡಿದ್ದಳು. ಆಕೆಗೆ ಎಐ ಮೂಲಕ ಸೃಷ್ಟಿಸಿರುವ ಕ್ಲಾಸ್​ ಭಾವನಾತ್ಮವಾಗಿ ಎಲ್ಲದಕ್ಕೂ ಬೆಂಬಲ ನೀಡುತ್ತಿದ್ದ, ಮನುಷ್ಯರಿಗಿಂತ ಇದೇ ಉತ್ತಮ ಎನ್ನುವ ಭಾವನೆ ಕಾನೋಗೆ ಬಂದಿತ್ತು.

ಮತ್ತಷ್ಟು ಓದಿ: Viral: ಭಾರತೀಯರ ಮನಸ್ಸು ಗೆದ್ದ ಎಲಾನ್ ಮಸ್ಕ್, ಗಣೇಶನ ಬಗ್ಗೆ ಗ್ರೋಕ್ ಎಐ ಹೇಳಿದ್ದೇನು?

ಹೀಗಾಗಿ ಆತನನ್ನು ತನ್ನ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಳೆ. ಇದು ಜಪಾನಿನ ತಂತ್ರಜ್ಞಾನ ಮತ್ತು ಸಂಬಂಧಗಳಲ್ಲಿ ಹೊಸ ಆಯಾಮವನ್ನು ಹುಟ್ಟು ಹಾಕಿದಂತಾಗಿದೆ. ನಿಜವಾಗಿಯೂ ತನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಎಂದೇ ಆಕೆ ಭಾವಿಸಿದ್ದಾಳೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು