ವಜಾ ಆದೇಶದ ಬೆನ್ನಲ್ಲೇ ಕಂಪನಿಯ ಲ್ಯಾಪ್​​ಟಾಪ್​​ಗೆ ಪ್ರವೇಶ ನಿಷೇಧಿಸಲಾಯಿತು: ಟ್ವಿಟರ್​​ನ ಮಾಜಿ ಉದ್ಯೋಗಿ

ಟ್ವಿಟರ್‌ನಲ್ಲಿನ ಅನೇಕ ಉದ್ಯೋಗಿಗಳು ತಮ್ಮ ವಜಾ ಬಗ್ಗೆ ಬರೆದುಕೊಂಡಿದ್ದಾರೆ. ಇದೇ ರೀತಿ ತಮ್ಮ ವಜಾ ಬಗ್ಗೆ ರಾಚೆಲ್ ಬೊನ್ ಎಂಬವರು ಟ್ವೀಟ್ ಮಾಡಿದ್ದಾರೆ.

ವಜಾ ಆದೇಶದ ಬೆನ್ನಲ್ಲೇ ಕಂಪನಿಯ ಲ್ಯಾಪ್​​ಟಾಪ್​​ಗೆ ಪ್ರವೇಶ ನಿಷೇಧಿಸಲಾಯಿತು: ಟ್ವಿಟರ್​​ನ ಮಾಜಿ ಉದ್ಯೋಗಿ
Twitter
Follow us
| Updated By: ರಶ್ಮಿ ಕಲ್ಲಕಟ್ಟ

Updated on:Nov 04, 2022 | 11:52 PM

ಟ್ವಿಟರ್‌ನ (Twitter) ಹೊಸ ಮಾಲೀಕರು ಮತ್ತು ಸಿಇಒ ಎಲೋನ್ ಮಸ್ಕ್(Elon Musk) ಅವರು ಕಂಪನಿಯಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದ್ದಾರೆ. ಮಸ್ಕ್ ಅವರು ಕಳೆದ ವಾರ ಕಂಪನಿಯಲ್ಲಿ ಮಾಜಿ ಸಿಇಒ ಪರಾಗ್ ಅಗರವಾಲ್ ಸೇರಿದಂತೆ ಇತರ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸುವ ಮೂಲಕ ತಮ್ಮ ವಜಾಗೊಳಿಸುವಿಕೆಯನ್ನು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ವೆರಿಫೈಡ್ ಖಾತೆಗೆ ತಿಂಗಳಿಗೆ $8 ಶುಲ್ಕ ವಿಧಿಸುವ ಯೋಜನೆಯನ್ನು ಪ್ರಕಟಿಸಿದರು. ಟ್ವಿಟರ್‌ನಲ್ಲಿನ ಅನೇಕ ಉದ್ಯೋಗಿಗಳು ತಮ್ಮ ವಜಾ ಬಗ್ಗೆ ಬರೆದುಕೊಂಡಿದ್ದಾರೆ. ಇದೇ ರೀತಿ ತಮ್ಮ ವಜಾ ಬಗ್ಗೆ ರಾಚೆಲ್ ಬೊನ್ ಎಂಬವರು ಟ್ವೀಟ್ ಮಾಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಟ್ವಿಟರ್ ಉದ್ಯೋಗಿ, ರಾಚೆಲ್ ಬಾನ್ ಅವರು ಕಚೇರಿ ತಮ್ಮ ಕೆಲಸದ ಲ್ಯಾಪ್‌ಟಾಪ್‌ಗೆ ಪ್ರವೇಶ ನಿರಾಕರಿಸಿದೆ. ಎಲೋನ್ ಮಸ್ಕ್ ಅವರು ಶುಕ್ರವಾರ ಇಮೇಲ್ ಮೂಲಕ ವಜಾಗೊಳಿಸುವ ಸೂಚನೆಗಳನ್ನು ಕಳುಹಿಸಲಾಗುವುದು ಎಂದು ಘೋಷಿಸಿದ ಒಂದು ಗಂಟೆಯಲ್ಲಿ ಈ ಕಾರ್ಯ ನಡೆದಿದೆ. ಗರ್ಭಿಣಿಯಾಗಿರುವ ಈಕೆ ತನ್ನ ಒಂಬತ್ತು ತಿಂಗಳ ಮಗುವನ್ನು ಹಿಡಿದುಕೊಂಡಿರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ.

“ಕಳೆದ ಗುರುವಾರ ಎಸ್‌ಎಫ್ ಕಚೇರಿಯಲ್ಲಿ, ಟ್ವಿಟರ್ ಕೊನೆಯ ದಿನ ಟ್ವಿಟರ್ ಆಗಿತ್ತು. 8 ತಿಂಗಳ ಗರ್ಭಿಣಿ ಮತ್ತು 9 ತಿಂಗಳ ಮಗು. ಲ್ಯಾಪ್‌ಟಾಪ್ ಪ್ರವೇಶ ಈಗ ನಿರಾಕರಿಸಲಾಗಿದೆ #LoveWhereYouWorked” ಎಂದು ಅವರು ಬರೆದಿದ್ದಾರೆ.

ರಾಚೆಲ್ ಬಾನ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಂಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಟ್ವಿಟರ್‌ನಿಂದ ನೇಮಕಗೊಂಡರು.  ಗಾರ್ಡಿಯನ್ ಪ್ರಕಾರ, ವಜಾ ಮಾಡುವ ಮುನ್ನ ಯುಎಸ್ ಫೆಡರಲ್ ಕಾನೂನಿನಡಿಯಲ್ಲಿ ಸಾಕಷ್ಟು ಸೂಚನೆ ನೀಡಲಾಗಿಲ್ಲ ಎಂದು ಮಾಜಿ ಉದ್ಯೋಗಿಗಳು ಆರೋಪಿಸಿದ್ದು ಟ್ವಿಟರ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಗುರುವಾರ ಅವರು ತಮ್ಮ ಕೆಲಸದ ಖಾತೆಗಳಿಂದ ಲಾಕ್​​ ಔಟ್ ಆಗಿರುವಾಗ ಅವರನ್ನು ವಜಾ ಮಾಡಲಾಗಿದೆ ಎಂದು ಉದ್ಯೋಗಿಗಳು ಹೇಳಿದ್ದಾರೆ.

ಏತನ್ಮಧ್ಯೆ, ಟ್ವಿಟರ್ ಶುಕ್ರವಾರ ಭಾರತದಲ್ಲಿ ಸಾಮೂಹಿಕ ವಜಾಗಳನ್ನು ಘೋಷಿಸಿತು. ಉದ್ಯೋಗ ಕಡಿತವು ಇಂಜಿನಿಯರ್‌ಗಳು ಮತ್ತು ಸಂಪೂರ್ಣ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗ ಸೇರಿದಂತೆ ಎಲ್ಲಾ ವರ್ಟಿಕಲ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ಎನ್​​ಡಿಟಿವಿಗೆ ತಿಳಿಸಿವೆ.

Published On - 11:44 pm, Fri, 4 November 22

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​