AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ ಸಿಖ್‌ ಮಹಾರಾಜನ ಮೊಮ್ಮಗ, ಕ್ವಿನ್‌ ವಿಕ್ಟೋರಿಯಾಳ ಗಾಡ್‌ಸನ್‌ನ ಲಂಡನ್‌ ಮನೆ 150ಕೋಟಿಗೆ ಮಾರಾಟ

ಲಂಡನ್‌: ಲಾಹೋರ್‌ನ ಕೊನೆಯ ಸಿಖ್‌ ಮಹಾರಾಜ ದುಲೀಪ್‌ ಸಿಂಗ್‌ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಸಿಂಗ್‌ ಅವರ ಲಂಡನ್‌ನ ಮನೆ 150 ಕೋಟಿಗೆ ಮಾರಾಟವಾಗಿದೆ. ಹೌದು ಅವಿಭಜಿತ ಭಾರತದಲ್ಲಿ ಲಾಹೋರ್‌ನ ಸಿಖ್‌ ರಾಜಮನೆತನದ ಕೊನೆಯ ರಾಜನಾಗಿದ್ದ ಮಹಾರಾಜ ದುಲೀಪ್‌ ಸಿಂಗ್‌ ದೇಶದಿಂದ ಗಡಿಪಾರಾಗಿದ್ದಾಗ ಲಂಡನ್‌ನಲ್ಲಿ ನೆಲೆಸಿದ್ದರು. ಅವರ ನಂತರ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಅಲ್ಬರ್ಟ್‌ ಜೇ ಸಿಂಗ್‌ ಲಂಡನ್‌ನಲ್ಲಿ ನೆಲೆಸಿದ್ದ ಲಿಟಲ್‌‌ ಬೋಲ್ಟನ್ಸ್‌ ಮನೆ ಈಗ ಮಾರಾಟವಾಗಿದೆ. ಐದು ಬೆಡ್‌ರೂಮ್‌ಗಳ ಈ ಐಸಾರಾಮಿ ಮನೆಯಲ್ಲಿ ಸರ್‌ […]

ಕೊನೆಯ ಸಿಖ್‌ ಮಹಾರಾಜನ ಮೊಮ್ಮಗ, ಕ್ವಿನ್‌ ವಿಕ್ಟೋರಿಯಾಳ ಗಾಡ್‌ಸನ್‌ನ ಲಂಡನ್‌ ಮನೆ 150ಕೋಟಿಗೆ ಮಾರಾಟ
Guru
|

Updated on:Aug 24, 2020 | 7:11 PM

Share

ಲಂಡನ್‌: ಲಾಹೋರ್‌ನ ಕೊನೆಯ ಸಿಖ್‌ ಮಹಾರಾಜ ದುಲೀಪ್‌ ಸಿಂಗ್‌ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಸಿಂಗ್‌ ಅವರ ಲಂಡನ್‌ನ ಮನೆ 150 ಕೋಟಿಗೆ ಮಾರಾಟವಾಗಿದೆ.

ಹೌದು ಅವಿಭಜಿತ ಭಾರತದಲ್ಲಿ ಲಾಹೋರ್‌ನ ಸಿಖ್‌ ರಾಜಮನೆತನದ ಕೊನೆಯ ರಾಜನಾಗಿದ್ದ ಮಹಾರಾಜ ದುಲೀಪ್‌ ಸಿಂಗ್‌ ದೇಶದಿಂದ ಗಡಿಪಾರಾಗಿದ್ದಾಗ ಲಂಡನ್‌ನಲ್ಲಿ ನೆಲೆಸಿದ್ದರು. ಅವರ ನಂತರ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಅಲ್ಬರ್ಟ್‌ ಜೇ ಸಿಂಗ್‌ ಲಂಡನ್‌ನಲ್ಲಿ ನೆಲೆಸಿದ್ದ ಲಿಟಲ್‌‌ ಬೋಲ್ಟನ್ಸ್‌ ಮನೆ ಈಗ ಮಾರಾಟವಾಗಿದೆ.

ಐದು ಬೆಡ್‌ರೂಮ್‌ಗಳ ಈ ಐಸಾರಾಮಿ ಮನೆಯಲ್ಲಿ ಸರ್‌ ದುಲೀಪ್‌ ಸಿಂಗ್‌ ನಂತರ ಅವರ ಮಗ ವಿಕ್ಟರ್‌ ತಮ್ಮ ಬ್ರಿಟಿಷ್‌‌‌ ಪತ್ನಿ ಌನ್‌ ಕೋವೆಂಟ್ರಿ ಜತೆ ಇಲ್ಲಿಯೇ ನೆಲೆಸಿದ್ದರು. ಆದರೆ ಕಾಲಾನಂತರ ಅತಿಯಾದ ವೈಭವದ ಜೀವನ ನಡೆಸಿದ್ದ ಪ್ರಿನ್ಸ್‌ ದಿವಾಳಿಯಾಗಿದ್ದರು. ಆದ್ರೆ ಈಸ್ಟ್‌ ಇಂಡಿಯಾ ಕಂಪನಿಯಿಂದ ಬಳುವಳಿಯಾಗಿ ಬಂದಿದ್ದ ಈ ಮನೆಯನ್ನು ಹಾಗೇಯೇ ಉಳಿಸಿಕೊಳ್ಳಲಾಗಿತ್ತು.

2010ರಲ್ಲಿ ಈ ಮನೆಯನ್ನು ಸಾಂಪ್ರದಾಯಿಕ ಶೈಲಿಯಿಂದ ಆಧುನಿಕ ಜೀವನ ಶೈಲಿಗೆ ಮಾರ್ಪಡಿಸಲಾಗಿತ್ತು. ಆಗಿನಿಂದ ಒಬ್ಬ ಶ್ರೀಮಂತ ವ್ಯಕ್ತಿಯ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಅತ್ಯಾಧುನಿಕ ಶೈಲಿಯ ರೀತಿಯಲ್ಲಿ ಪರಿಸ್ಕರಿಸಿದ್ದ ಈ ಮನೆ ಈಗ 15,.5 ಮಿಲಿಯನ್‌ ಪೌಂಡ್ಸ್‌‌ ಅಂದ್ರೆ ಸುಮಾರು 150 ಕೋಟಿ ರೂ.ಗಳಿಗೆ ಮಾರಾಟವಾಗಿದೆ.

ಅಂದ ಹಾಗೇ ಈ ಮನೆಯಲ್ಲಿ ವಾಸವಾಗಿದ್ದ ಪ್ರಿನ್ಸ್‌ ವಿಕ್ಟರ್‌ ಇಂಗ್ಲೆಂಡ್‌ನ ಮಹಾರಾಣಿಯ ವಂಶಸ್ಥೆ ಌನ್‌ ಕೋವೆಂಟ್ರಿಯನ್ನು ಮದುವೆಯಾಗಿದ್ದ. ಆ ಕಾಲದಲ್ಲಿ ನಡೆದ ಕೆಲವೇ ಕೆಲ ಅಂತರ್‌ ವರ್ಣೀಯರ ನಡುವೆ ನಡೆದ ಮದುವೆ ಇದಾಗಿತ್ತು. ಇದಕ್ಕೆ ಕೆಲ ಬ್ರಿಟನ್‌ನ ಬಿಳಿಯ ವರ್ಣವಾದದ ಕೆಲ ಸೋಶಿಯಲೈಟ್ಸ್‌ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಬ್ರಿಟನ್ನಿನ ಆಗಿನ ಯುವರಾಜನಾಗಿದ್ರ ಎಡ್ವರ್ಡ್‌ನ ಬೆಂಬಲ ಇದ್ದುದರಿಂದ ಉಳಿದವರು ಸುಮ್ಮನಾಗಿದ್ದರು.

Published On - 7:08 pm, Mon, 24 August 20

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ