ದ್ವೀಪರಾಷ್ಟ್ರದಿಂದ ಭಾರತೀಯ ಸೇನೆ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಆಗ್ರಹ

|

Updated on: Jan 14, 2024 | 8:44 PM

ಸೈನ್ಯವನ್ನು ಹಿಂಪಡೆಯಲು ಈಗಾಗಲೇ ಉನ್ನತ ಮಟ್ಟದ ಕೋರ್ ಗ್ರೂಪ್ ಅನ್ನು ಸ್ಥಾಪಿಸಲಾಗಿದೆ. ಗುಂಪಿನ ಮೊದಲ ಸಭೆ ಭಾನುವಾರ ಮಾಲೆಯಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಈ ಸಭೆಗೆ ಭಾರತೀಯ ಹೈಕಮಿಷನರ್ ಮುನು ಮಹಾವರ್ ಉಪಸ್ಥಿತರಿದ್ದರು. ನಜೀಮ್ ಪ್ರಕಾರ, ಸಭೆಯ ಮುಖ್ಯ ಕಾರ್ಯಸೂಚಿಯು ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿತ್ತು.

ದ್ವೀಪರಾಷ್ಟ್ರದಿಂದ ಭಾರತೀಯ ಸೇನೆ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಆಗ್ರಹ
ಮೊಹಮ್ಮದ್ ಮುಯಿಝು
Follow us on

ಮಾಲೆ ಜನವರಿ 14: ಮಾರ್ಚ್ 15 ರೊಳಗೆ ದ್ವೀಪರಾಷ್ಟ್ರದಿಂದ ಭಾರತೀಯ ಸೇನೆ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ (Maldives ) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಭಾನುವಾರ ಕೇಳಿದ್ದಾರೆ. ದೇಶದ ಹೊಸದಾಗಿ ಚುನಾಯಿತ ಸರ್ಕಾರವು ಅವರನ್ನು ತೆಗೆದುಹಾಕಲು ಪ್ರಯತ್ನಿಸಿದ ಸುಮಾರು 2 ತಿಂಗಳ ನಂತರ ಇದು ಬಂದಿದೆ. ಸದ್ಯಕ್ಕೆ ದೇಶದಲ್ಲಿ 88 ಭಾರತೀಯ ಸೇನಾ ಸಿಬ್ಬಂದಿ ಇದ್ದಾರೆ. ಈ ಬೆಳವಣಿಗೆಯ ಕುರಿತು ಮಾತನಾಡಿದ ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ, ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರು ಮಾರ್ಚ್ 15 ರೊಳಗೆ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಔಪಚಾರಿಕವಾಗಿ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

ಸೈನ್ಯವನ್ನು ಹಿಂಪಡೆಯಲು ಈಗಾಗಲೇ ಉನ್ನತ ಮಟ್ಟದ ಕೋರ್ ಗ್ರೂಪ್ ಅನ್ನು ಸ್ಥಾಪಿಸಲಾಗಿದೆ. ಗುಂಪಿನ ಮೊದಲ ಸಭೆ ಭಾನುವಾರ ಮಾಲೆಯಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಈ ಸಭೆಗೆ ಭಾರತೀಯ ಹೈಕಮಿಷನರ್ ಮುನು ಮಹಾವರ್ ಉಪಸ್ಥಿತರಿದ್ದರು. ನಜೀಮ್ ಪ್ರಕಾರ, ಸಭೆಯ ಮುಖ್ಯ ಕಾರ್ಯಸೂಚಿಯು ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿತ್ತು.

ನವೆಂಬರ್‌ನಲ್ಲಿ ಮುಯಿಝು ಅಧಿಕಾರಕ್ಕೆ ಬಂದ ಕೂಡಲೇ, ತನ್ನ ದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತವನ್ನು ಕೇಳಿಕೊಂಡಿದ್ದು. ಮಾಲ್ಡೀವಿಯನ್ ಜನರು ತನಗೆ ಬಲವಾದ ಜನಾದೇಶವನ್ನು ನೀಡಿದ್ದು ಭಾರತ ಸರ್ಕಾರಕ್ಕೆ ಅಂತಹ ವಿನಂತಿಯನ್ನು ಮಾಡಲು ಅವರಿಗೆ ಅಧಿಕಾರ ನೀಡಿದ್ದಾರೆ ಎಂದು ಅವರು ಹೇಳಿದರು. ಮಾಲ್ಡೀವ್ಸ್ ನಾಯಕನನ್ನು ಚೀನಾ ಪರ ಎಂದು ಪರಿಗಣಿಸಲಾಗಿದೆ.

ಭಾರತ ಮತ್ತು ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ಜಗಳ

ಮಾಲ್ಡೀವ್ಸ್ ಸರ್ಕಾರದ ಈ ವಿನಂತಿಯು 2 ದೇಶಗಳ ನಡುವಿನ ದೊಡ್ಡ ರಾಜತಾಂತ್ರಿಕ ಜಗಳದ ನಡುವೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಸರ್ಕಾರದ ಮೂವರು ಸಚಿವರನ್ನು ವಜಾಗೊಳಿಸಲಾಗಿದೆ.

ಅಂದಿನಿಂದ ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುವ ಕರೆ ಭಾರತದಲ್ಲಿ ಹೆಚ್ಚಾಗಿದೆ. ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು, ಎಲ್ಲರೂ ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನದಲ್ಲಿ ಸೇರಿಕೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಹೆಚ್ಚು ಪ್ರವಾಸಿಗರು ಎಂದರೆ ಅದು ಭಾರತೀಯರೇ. ರಷ್ಯನ್ನರು ಮತ್ತು ಚೀನಿಯರು ನಂತರದ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಚೀನಾಕ್ಕೆ 5 ದಿನಗಳ ಪ್ರವಾಸದಲ್ಲಿ, ಮುಯಿಝು ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಲು ವಿನಂತಿಸಿದ್ದಾರೆ.

ಭಾರತದ ಮೇಲೆ ಪರೋಕ್ಷ ದಾಳಿ ನಡೆಸಿದ ಅವರು ಮಾಲ್ಡೀವ್ಸ್ ಸಣ್ಣ ದೇಶವಾಗಿರಬಹುದು ಆದರೆ ಅದನ್ನು ಬೆದರಿಸುವ ಹಕ್ಕನ್ನು ಯಾರಿಗೂ ನೀಡುವುದಿಲ್ಲ ಎಂದು ಹೇಳಿದರು. ಆದಾಗ್ಯೂ ಹಿಂದೂ ಮಹಾಸಾಗರವು ಅದರಲ್ಲಿರುವ ಎಲ್ಲಾ ದೇಶಗಳಿಗೆ ಸೇರಿದೆ, ಮಾಲ್ಡೀವ್ಸ್ ಯಾರೊಬ್ಬರ ಅಧೀನದಲ್ಲಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿಗೆ ಅವಹೇಳನ: ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ನಾಗಾರ್ಜುನ

ಮಾಲ್ಡೀವ್ಸ್ ಸ್ವತಂತ್ರ, ಸಾರ್ವಭೌಮ ದೇಶ. ಯಾವುದೇ ದೇಶವು ಅದರ ಗಾತ್ರವನ್ನು ಲೆಕ್ಕಿಸದೆ ದೇಶದ ಆಂತರಿಕ ವ್ಯವಹಾರಗಳ ಮೇಲೆ ಪ್ರಭಾವ ಬೀರುವ ಹಕ್ಕು ಹೊಂದಿಲ್ಲ ಎಂದಿದ್ದರು ಅವರು. ಮಾಲ್ಡೀವ್ಸ್ ಕೋರಿರುವ ಪಡೆಗಳನ್ನು ಹಿಂತೆಗೆದುಕೊಳ್ಳುವ ವಿಷಯದ ಬಗ್ಗೆ ಭಾರತ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ