AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?

ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್​ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?
ಸೈಕಲ್ Image Credit source: Dialogue Pakistan
ನಯನಾ ರಾಜೀವ್
|

Updated on: Nov 20, 2024 | 11:55 AM

Share

ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್​ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ ಪ್ರಕಾರ, ಚೀನಾದ ಜಿಯಾಂಗ್ಸು ಪ್ರಾಂತ್ಯದ ಲಿಯಾನ್ಯುಂಗಾಂಗ್​ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಶಾಂಘೈನಲ್ಲಿ ಯುವತಿಯೊಬ್ಬಳನ್ನು ಭೇಟಿಯಾಗಿ 2007ರಲ್ಲಿ ಮದುವೆಯಾಗುತ್ತಾರೆ. 2013ರಲ್ಲಿ ವಿಚ್ಛೇದನ ಪಡೆಯುತ್ತಾರೆ. ವಿಚ್ಛೇದನ ಬಳಿಕ ರಾಜಿ ಮಾಡಿಕೊಂಡು ಮತ್ತೆ ಮದುವೆಯಾಗಿದ್ದರು. ನಂತರ ಓರ್ವ ಮಗ, ಮಗಳು ಜನಿಸಿದರು. ಕೆಲವು ದಿನಗಳ ನಂತರ ಮತ್ತೆ ಜಗಳ ಶುರುವಾಗಿತ್ತು. ಮತ್ತೆ ಇಬ್ಬರು ಬೇರ್ಪಟ್ಟರು.

ನಮ್ಮ ನದುವೆ ಯಾವುದೇ ಗಂಭೀರ ಸಮಸ್ಯೆಯಿಲ್ಲ ಇಬ್ಬರೂ ಹಠಮಾರಿಗಳು, ಈ ನಮ್ಮ ಗುಣವೇ ನಾವು ದೂರವಾಗುವುದಕ್ಕೆ ಕಾರಣ ಎಂದು ವ್ಯಕ್ತಿ ಹೇಳಿದ್ದಾರೆ. ಬ್ರೇಕಪ್ ಆದ ಬಳಿಕವೂ ಅವರಿಬ್ಬರು ಸಂಪರ್ಕದಲ್ಲಿದ್ದರು. ಒಂದೊಮ್ಮೆ ನಾನು ಮರಳಿ ಬರಬೇಕೆಂದರೆ ನೀವು ಲಾಸಾಗೆ ಸೈಕಲ್​ನಲ್ಲಿ ತೆರಳಬೇಕು ಎಂದು ಪತ್ನಿ ಸವಾಲು ಹಾಕಿದ್ದಳು.

ಮತ್ತಷ್ಟು ಓದಿ: Viral: ಕುಡಿದು ವಾಹನ ಚಲಾಯಿಸುವವರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಪೊಲೀಸರ ವಿಶೇಷ ತಂತ್ರ

ಹಾಗಾಗಿ 100 ದಿನಗಳ ಕಾಲ 4,400 ಕಿ.ಮೀ ದೂರ ಸೈಕಲ್​ನಲ್ಲಿ ಕ್ರಮಿಸಿದ್ದಾರೆ. ಅಕ್ಟೋಬರ್ 28ರಂದು ಲಾಸಾ ತಲುಪಿದ್ದರು. ಅಲ್ಲಿ ವಿಪರೀತ ಸೆಕೆ ಇದ್ದ ಕಾರಣ ಎರಡು ಬಾರಿ ಹೀಟ್​ಸ್ಟ್ರೋಕ್ ಆಗಿತ್ತು, ಕುಸಿದು ಬಿದ್ದಿದ್ದರು ಅವರ ಬಳಿ ನೀರು ಕೂಡ ಇರಲಿಲ್ಲ. ನೂರಾರು ಕಿ.ಮೀ ಹೋದ ಬಳಿಕ ಪತ್ನಿಯೇ ತನ್ನನ್ನು ನೋಡಿಕೊಳ್ಳಲು ಬಂದಿದ್ದಾಗಿ ಖುಷಿಯಿಂದ ಹೇಳಿದ್ದಾರೆ.

ನಿನ್ನ ಆರೋಗ್ಯಕ್ಕಿಂತ ಸವಾಲು ಮುಖ್ಯವಲ್ಲ ಇದನ್ನು ಇಲ್ಲಿಯೇ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದಳು. ಆದರೆ ಝೌ ಒಪ್ಪಿರಲಿಲ್ಲ. ಸೈಕ್ಲಿಂಗ್ ಮುಂದುವರೆಸಿದರು. ಬಳಿಕ ಅಕ್ಟೋಬರ್ 28ರಂದು ಝೌ ಲಾಸಾಗೆ ತೆರಳಿದ ಬಳಿಕ ಮತ್ತೆ ಅವರಿಬ್ಬರು ಒಂದಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ