AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?

ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್​ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?
ಸೈಕಲ್ Image Credit source: Dialogue Pakistan
ನಯನಾ ರಾಜೀವ್
|

Updated on: Nov 20, 2024 | 11:55 AM

Share

ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್​ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ ಪ್ರಕಾರ, ಚೀನಾದ ಜಿಯಾಂಗ್ಸು ಪ್ರಾಂತ್ಯದ ಲಿಯಾನ್ಯುಂಗಾಂಗ್​ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಶಾಂಘೈನಲ್ಲಿ ಯುವತಿಯೊಬ್ಬಳನ್ನು ಭೇಟಿಯಾಗಿ 2007ರಲ್ಲಿ ಮದುವೆಯಾಗುತ್ತಾರೆ. 2013ರಲ್ಲಿ ವಿಚ್ಛೇದನ ಪಡೆಯುತ್ತಾರೆ. ವಿಚ್ಛೇದನ ಬಳಿಕ ರಾಜಿ ಮಾಡಿಕೊಂಡು ಮತ್ತೆ ಮದುವೆಯಾಗಿದ್ದರು. ನಂತರ ಓರ್ವ ಮಗ, ಮಗಳು ಜನಿಸಿದರು. ಕೆಲವು ದಿನಗಳ ನಂತರ ಮತ್ತೆ ಜಗಳ ಶುರುವಾಗಿತ್ತು. ಮತ್ತೆ ಇಬ್ಬರು ಬೇರ್ಪಟ್ಟರು.

ನಮ್ಮ ನದುವೆ ಯಾವುದೇ ಗಂಭೀರ ಸಮಸ್ಯೆಯಿಲ್ಲ ಇಬ್ಬರೂ ಹಠಮಾರಿಗಳು, ಈ ನಮ್ಮ ಗುಣವೇ ನಾವು ದೂರವಾಗುವುದಕ್ಕೆ ಕಾರಣ ಎಂದು ವ್ಯಕ್ತಿ ಹೇಳಿದ್ದಾರೆ. ಬ್ರೇಕಪ್ ಆದ ಬಳಿಕವೂ ಅವರಿಬ್ಬರು ಸಂಪರ್ಕದಲ್ಲಿದ್ದರು. ಒಂದೊಮ್ಮೆ ನಾನು ಮರಳಿ ಬರಬೇಕೆಂದರೆ ನೀವು ಲಾಸಾಗೆ ಸೈಕಲ್​ನಲ್ಲಿ ತೆರಳಬೇಕು ಎಂದು ಪತ್ನಿ ಸವಾಲು ಹಾಕಿದ್ದಳು.

ಮತ್ತಷ್ಟು ಓದಿ: Viral: ಕುಡಿದು ವಾಹನ ಚಲಾಯಿಸುವವರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಪೊಲೀಸರ ವಿಶೇಷ ತಂತ್ರ

ಹಾಗಾಗಿ 100 ದಿನಗಳ ಕಾಲ 4,400 ಕಿ.ಮೀ ದೂರ ಸೈಕಲ್​ನಲ್ಲಿ ಕ್ರಮಿಸಿದ್ದಾರೆ. ಅಕ್ಟೋಬರ್ 28ರಂದು ಲಾಸಾ ತಲುಪಿದ್ದರು. ಅಲ್ಲಿ ವಿಪರೀತ ಸೆಕೆ ಇದ್ದ ಕಾರಣ ಎರಡು ಬಾರಿ ಹೀಟ್​ಸ್ಟ್ರೋಕ್ ಆಗಿತ್ತು, ಕುಸಿದು ಬಿದ್ದಿದ್ದರು ಅವರ ಬಳಿ ನೀರು ಕೂಡ ಇರಲಿಲ್ಲ. ನೂರಾರು ಕಿ.ಮೀ ಹೋದ ಬಳಿಕ ಪತ್ನಿಯೇ ತನ್ನನ್ನು ನೋಡಿಕೊಳ್ಳಲು ಬಂದಿದ್ದಾಗಿ ಖುಷಿಯಿಂದ ಹೇಳಿದ್ದಾರೆ.

ನಿನ್ನ ಆರೋಗ್ಯಕ್ಕಿಂತ ಸವಾಲು ಮುಖ್ಯವಲ್ಲ ಇದನ್ನು ಇಲ್ಲಿಯೇ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದಳು. ಆದರೆ ಝೌ ಒಪ್ಪಿರಲಿಲ್ಲ. ಸೈಕ್ಲಿಂಗ್ ಮುಂದುವರೆಸಿದರು. ಬಳಿಕ ಅಕ್ಟೋಬರ್ 28ರಂದು ಝೌ ಲಾಸಾಗೆ ತೆರಳಿದ ಬಳಿಕ ಮತ್ತೆ ಅವರಿಬ್ಬರು ಒಂದಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ