Earthquake in New Zealand ನ್ಯೂಜಿಲ್ಯಾಂಡ್​ನಲ್ಲಿ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ

ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಅಗಾಧ ಪ್ರಮಾಣದ ಭೂಕಂಪ ದಾಖಲಾಗಿದೆ. ತಾಜಾ ವರದಿಗಳ ಪ್ರಕಾರ ನ್ಯೂಜಿಲ್ಯಾಂಡ್​ ಮತ್ತು ನೆರೆಯ ಆಸ್ಟ್ರೇಲಿಯಾಕ್ಕೂ ಸುನಾಮಿ ಭೀತಿ ಎದುರಾಗಿದೆ. ಪ್ರವಾಸೋದ್ಯಮವನ್ನು ಕೈಬೀಸಿ ಕರೆಯುವ ಪುಟ್ಟ ದ್ವೀಪರಾಷ್ಟ್ರಕ್ಕೆ ಸುನಾಮಿ ಅಪ್ಪಳಿಸಿದರೆ ಭಾರೀ ಅಪಾಯ ಎದುರಾದಂತಾಗುತ್ತದೆ. ಕೆರ್ಮಡೆಕ್ ದ್ವೀಪಗಳ (Kermadec Islands) ದಕ್ಷಿಣ ಭಾಗಕ್ಕೆ ಅಂದ್ರೆ ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಿಂದ 300 ಕಿಮೀ ದೂರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 1 ಗಂಟೆಯಲ್ಲಿ […]

Earthquake in New Zealand ನ್ಯೂಜಿಲ್ಯಾಂಡ್​ನಲ್ಲಿ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ
ಸಾಧು ಶ್ರೀನಾಥ್​

Updated on: Jun 18, 2020 | 10:12 PM

ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಅಗಾಧ ಪ್ರಮಾಣದ ಭೂಕಂಪ ದಾಖಲಾಗಿದೆ. ತಾಜಾ ವರದಿಗಳ ಪ್ರಕಾರ ನ್ಯೂಜಿಲ್ಯಾಂಡ್​ ಮತ್ತು ನೆರೆಯ ಆಸ್ಟ್ರೇಲಿಯಾಕ್ಕೂ ಸುನಾಮಿ ಭೀತಿ ಎದುರಾಗಿದೆ. ಪ್ರವಾಸೋದ್ಯಮವನ್ನು ಕೈಬೀಸಿ ಕರೆಯುವ ಪುಟ್ಟ ದ್ವೀಪರಾಷ್ಟ್ರಕ್ಕೆ ಸುನಾಮಿ ಅಪ್ಪಳಿಸಿದರೆ ಭಾರೀ ಅಪಾಯ ಎದುರಾದಂತಾಗುತ್ತದೆ.

ಕೆರ್ಮಡೆಕ್ ದ್ವೀಪಗಳ (Kermadec Islands) ದಕ್ಷಿಣ ಭಾಗಕ್ಕೆ ಅಂದ್ರೆ ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಿಂದ 300 ಕಿಮೀ ದೂರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 1 ಗಂಟೆಯಲ್ಲಿ ಈ ಭಾರೀ ಕಂಪನ ಉಂಟಾಗಿದ್ದು, ಸಾವಿರಾರು ಮಂದಿ ದುಃಸ್ವಪ್ನ ಕಂಡವರಂತೆ ಎದ್ದು, ಮನೆಗಳಿಂದ ಹೊರಬಂದಿದ್ದಾರೆ.

2010 ರ ಸೆಪ್ಟೆಬರ್​ನಲ್ಲಿ ಕ್ರೈಸ್ಟ್​ಚರ್ಚ್​ನಲ್ಲಿ ಸರಿಸುಮಾರು ಇದೇ ಪ್ರಮಾಣದ ಭೂಕಂಪ ಉಂಟಾಗಿತ್ತು. ಈ ಭಾರಿ ಸಮುದ್ರದಾಳದಲ್ಲಿ (33 ಕಿ.ಮೀ ) ಭೂಕಂಪ ಸಂಭವಿಸಿದ್ದು, ನೆಲಪ್ರದೇಶಗಳಲ್ಲಿ ಹೆಚ್ಚು ಭೂಕಂಪದ ಪರಿಣಾಮ ಕಂಡುಬಂದಿಲ್ಲ. ಆದ್ರೆ ಸಮುದ್ರದೊಡಲಲ್ಲಿ ಕಂಪನಗಳು ಘಟಿಸಿವೆ. ಇದರಿಂದ ಸುನಾಮಿ ಆತಂಕ ಮನೆ ಮಾಡಿದೆ.

Published On - 9:42 pm, Thu, 18 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us