AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrs World 2022: ಬೆಸ್ಟ್ ನ್ಯಾಷನಲ್​​ ಕಾಸ್ಟ್ಯೂಮ್​ ಪ್ರಶಸ್ತಿ ಗೆದ್ದ ಮಿಸೆಸ್​ ವರ್ಲ್ಡ್​ 2022 ಸ್ಪರ್ಧಿ ನವದೀಪ್​ ಕೌರ್​

2021ರಲ್ಲಿ ಮಿಸಸ್​ ಇಂಡಿಯಾ ಪಟ್ಟವನ್ನು ಗೆದ್ದು ಬೀಗಿದ್ದ ನವದೀಪ್​ ಕೌರ್​ ಅವರು  2022 ರ ಮಿಸಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಇದೀಗ ಸ್ಪರ್ಧೆಯಲ್ಲಿ ಅತ್ಯುತ್ತಮ ವೇಷಭೂಷಣ ಪ್ರಶಸ್ತಿಯನ್ನು ಗೆದ್ದಿದ್ದು, ಮಿಸಸ್​ ವರ್ಲ್ಡ್​ ಪಟ್ಟವನ್ನೂ ಗೆಲ್ಲುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

Mrs World 2022: ಬೆಸ್ಟ್ ನ್ಯಾಷನಲ್​​ ಕಾಸ್ಟ್ಯೂಮ್​ ಪ್ರಶಸ್ತಿ ಗೆದ್ದ ಮಿಸೆಸ್​ ವರ್ಲ್ಡ್​ 2022 ಸ್ಪರ್ಧಿ ನವದೀಪ್​ ಕೌರ್​
ನವದೀಪ್​ ಕೌರ್​
TV9 Web
| Edited By: |

Updated on:Jan 17, 2022 | 9:38 AM

Share

2021ರ ಮಿಸೆಸ್ ಇಂಡಿಯಾ ಪಟ್ಟ ಗೆದ್ದು ಲಾಸ್​ ವೇಗಾಸ್​ನಲ್ಲಿ ನಡೆಯುತ್ತಿರುವ ಮಿಸೆಸ್​ ವರ್ಲ್ಡ್​ 2022ರ ಸ್ಪರ್ಧೆಗೆ ಆಯ್ಕೆಯಾಗಿರುವ ಭಾರತದ ನವದೀಪ್​ ಕೌರ್​ ಮಿಸೆಸ್​ ವರ್ಲ್ಡ್ ಸ್ಪರ್ಧೆಯಲ್ಲಿ ನಡೆದ ಬೆಸ್ಟ್​ ನ್ಯಾಷನಲ್​ ಕಾಸ್ಟ್ಯೂಮ್​​ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಕುಂಡಲಿನಿ ಚಕ್ರದ ವೇಷಭೂಷಣ ಧರಿಸಿ ಪ್ರಶಸ್ತಿ ಗೆದ್ದಿದ್ದಾರೆ.  ಈ ವಸ್ತ್ರವಿನ್ಯಾಸವನ್ನು ಕಲಾವಿದ ಎಗ್ಗಿ ಜಾಸ್ಮಿನ್ ಕೌರ್​ ವಿನ್ಯಾಸಗೊಳಿಸಿದ್ದಾರೆ. ಈ ವಿಶೇಷ ವಸ್ತ್ರ ವಿನ್ಯಾಸವನ್ನು ಧರಿಸಿದ ಫೋಟೋವನ್ನು ನವದೀಪ್​ ಕೌರ್​ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್​ ಮಾಡಿದ ಅವರು ಉಡುಗೆಯ ಬಗ್ಗೆ ಚಕ್ರವು ತಲೆಯ ಮೇಲೆ ಧರಿಸಿದ ಕಿರೀಟದ ಬುಡದಿಂದ ಬೆನ್ನುಮೂಳೆಯವರೆಗೆ ದೇಹದ ಶಕ್ತಿಯ ಚಲನೆಯನ್ನು ಸಂಕೇತಿಸುತ್ತದೆ ಎಂದು ತಮ್ಮ ಉಡುಪಿನ ಅರ್ಥವನ್ನು ಹೇಳಿದ್ದಾರೆ. ನವದೀಪ್​ ಕವರ್​ ಅವರು ಧರಿಸಿರುವ ಚಿನ್ನದ ವೇಷಭೂಷಣದಲ್ಲಿ ದೈತ್ಯಾಕಾರದ ಸರ್ಪದ ಆಕೃತಿಯನ್ನು ತಲೆಯ ಇಟ್ಟುಕೊಂಡಿರುವುದನ್ನು ಕಾಣಬಹದು. ಜತೆಗೆ ಹಾವಿನ ಬೆತ್ತದ ಜೊತೆಗೆ ಚಿನ್ನದ ಬಣ್ಣದಲ್ಲಿ ಉಡುಗೆಯನ್ನು ಧರಿಸಿದ್ದಾರೆ.

ಮಿಸೆಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವ ವೇಷಭೂಷಣ ರೌಂಡ್​ನಲ್ಲಿ ಕುಂಡಲಿನಿ ಚಕ್ರದ ಉಡುಪನ್ನು ನವದೀಪ್​ ಕೌರ್​ ಧರಿಸಿದ್ದಾರೆ. ಕುಂಡಲಿನಿ ಚಕ್ರ ಮಾನವನ ದೇಹದ ವಿವಿಧ ಸಕಾರಾತ್ಮಕ ಗುಣಗಳನ್ನು ಪ್ರಚೋದಿಸುತ್ತದೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಅವರು ಅಧಿಕೃತ ಇನ್ಸ್ಟಾಗ್ರಾಮ್​  ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಯಾವುದೆ ಪ್ಯಾಷನ್​ ಜಗತ್ತಿನ ಹಿನ್ನಲೆಯಿಲ್ಲದೆ  ಬಂದ ನವದೀಪ್​ ಒಡಿಶಾ, ಮೂಲದ ರೋರ್ಕೆಲಾದವರು. 2021ರಲ್ಲಿ ಮಿಸಸ್​ ಇಂಡಿಯಾ ಪಟ್ಟವನ್ನು ಗೆದ್ದು ಬೀಗಿದ್ದ ನವದೀಪ್​ ಕೌರ್​ ಅವರು  2022ರ ಮಿಸಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಇದೀಗ ಸ್ಪರ್ಧೆಯಲ್ಲಿ ಅತ್ಯುತ್ತಮ ವೇಷಭೂಷಣ ಪ್ರಶಸ್ತಿಯನ್ನು ಗೆದ್ದಿದ್ದು, ಮಿಸಸ್​ ವರ್ಲ್ಡ್​ ಪಟ್ಟವನ್ನೂ ಗೆಲ್ಲುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

21

ಇದನ್ನೂ ಓದಿ:

ಆಸ್ಕರ್​ ಸಮಾರಂಭ ನಿರೂಪಣೆ ಮಾಡ್ತಾರಾ ಸೆಲೆನಾ ಗೊಮೆಜ್​? ಕೇಳಿಬರ್ತಿವೆ ಹಲವರ ಹೆಸರು​

Published On - 6:26 pm, Sun, 16 January 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ