AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?

NASA: 2013ರ ಫೆಬ್ರವರಿಯಲ್ಲಿ ಲ್ಯಾಂಡ್​ಸೆಟ್​ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್​ಸ್ಯಾಟ್​ 9 ಪ್ರತಿ 8ದಿನಗಳಿಗೆ ಒಮ್ಮೆ ಅದನ್ನು ಸೇರಿಕೊಳ್ಳಲಿದೆ.

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?
ಲ್ಯಾಂಡ್​ಸ್ಯಾಟ್​ 9ನ್ನು ಉಡಾವಣೆ ಮಾಡಿದ ನಾಸಾ
TV9 Web
| Edited By: |

Updated on: Sep 28, 2021 | 3:28 PM

Share

ಯುಎಸ್​ನ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ನಿನ್ನೆ (ಸೆ.27) ಪ್ರಬಲ ಭೂ ವೀಕ್ಷಕ ಉಪಗ್ರಹ ಲ್ಯಾಂಡ್​ಸ್ಯಾಟ್​9 (Landsat 9) ಮತ್ತು ಅದರೊಂದಿಗೆ ನಾಲ್ಕು ಸಣ್ಣ ಉಪಗ್ರಹಗಳನ್ನು ಕ್ಯಾಲಿಫೋರ್ನಿಯಾದಿಂದ ಕಕ್ಷೆಗೆ ಉಡಾವಣೆ ಮಾಡಿದೆ.  ನಾಸಾ ಮತ್ತು ಯುಎಸ್​​ನ ಜಿಯೋಲಾಜಿಕಲ್​ ಸರ್ವೇ (USGS)ಯ ಜಂಟಿ ಮಿಷನ್​ ಆಗಿರುವ ಈ ಲ್ಯಾಂಡ್​ಸ್ಯಾಟ್​ ಭೂಮಿಯ ಮೇಲಿನ ನೆಲ ಪ್ರದೇಶ ಮತ್ತು ಕರಾವಳಿ ತೀರಗಳ ವೀಕ್ಷಕ ಆಗಲಿದೆ. ಅಂದಹಾಗೆ ಲ್ಯಾಂಡ್​ಸೆಟ್​ ಸರಣಿಯ ಮೊದಲ ಉಪಗ್ರಹ ಉಡಾವಣೆ ಆಗಿದ್ದು, 1972ರಲ್ಲಿ. ಇದೀಗ ಲ್ಯಾಂಡ್​ಸ್ಯಾಟ್​​ 9 ಉಡಾವಣೆಯಾಗಿದೆ. 

ಸೋಮವಾರ ಕ್ಯಾಲಿಫೋರ್ನಿಯಾದ ವಂಡೆನ್​ಬರ್ಗ್​ ಸ್ಪೇಸ್​ ಫೋರ್ಸ್​ನಿಂದ ಅಟ್ಲಾಸ್​ ವಿ ರಾಕೆಟ್​ (Atlas V rocket) ಮೂಲಕ ಸೋಮವಾರ ಮಧ್ಯಾಹ್ನ 2. 12ಕ್ಕೆ ಉಡಾವಣೆಗೊಂಡ ಲ್ಯಾಂಡ್ ಸ್ಯಾಟ್​ 9 ಸುಮಾರು 1 ತಾಸುಗಳ ಬಳಿಕ ವಾಹಕ ರಾಕೆಟ್​​ನಿಂದ ಬೇರ್ಪಟ್ಟಿದೆ.  ಈ ಉಪಗ್ರಹ ಭೂ ಮೇಲ್ಮೈನ ವೀಕ್ಷಣೆ ಮಾಡುವ ಜತೆಗೆ ಹವಾಮಾನ ಬದಾಲವಣೆಯ ಬಗ್ಗೆ ಡಾಟಾ ಒದಗಿಸಲಿದೆ.

1972ರಲ್ಲಿ ಮೊದಲ ಬಾರಿಗೆ ಲ್ಯಾಂಡ್​ಸ್ಯಾಟ್​ ಉಡಾವಣೆಗೊಳಿಸಿದಾಗಿನಿಂದಲೂ ಅದು ಕಕ್ಷೆಯಲ್ಲಿಯೇ ಉಳಿದಿದೆ. 2013ರ ಫೆಬ್ರವರಿಯಲ್ಲಿ ಲ್ಯಾಂಡ್​ಸೆಟ್​ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್​ಸ್ಯಾಟ್​ 9 ಪ್ರತಿ 8ದಿನಗಳಿಗೆ ಒಮ್ಮೆ ,ಲ್ಯಾಂಡ್​ಸ್ಯಾಟ್​ 8ನ್ನು ಸೇರಿ ಕೊಂಡು ಭೂಮಿಯ ವಿವಿಧ ಭಾಗಗಳ ಫೋಟೋ ಸಂಗ್ರಹಿಸಲಿದೆ. ಇದು ಅರಣ್ಯಗಳು, ಕೃಷಿ, ನೀರಿನ ಗುಣಮಟ್ಟ, ಹಿಮಾಚ್ಛಾದಿತ ಪ್ರದೇಶಗಳ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ

ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ

(NASA launched Landsat 9 satellite from Vandenberg Space Force Base in California)

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ