AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?

NASA: 2013ರ ಫೆಬ್ರವರಿಯಲ್ಲಿ ಲ್ಯಾಂಡ್​ಸೆಟ್​ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್​ಸ್ಯಾಟ್​ 9 ಪ್ರತಿ 8ದಿನಗಳಿಗೆ ಒಮ್ಮೆ ಅದನ್ನು ಸೇರಿಕೊಳ್ಳಲಿದೆ.

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?
ಲ್ಯಾಂಡ್​ಸ್ಯಾಟ್​ 9ನ್ನು ಉಡಾವಣೆ ಮಾಡಿದ ನಾಸಾ
TV9 Web
| Updated By: Lakshmi Hegde|

Updated on: Sep 28, 2021 | 3:28 PM

Share

ಯುಎಸ್​ನ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ನಿನ್ನೆ (ಸೆ.27) ಪ್ರಬಲ ಭೂ ವೀಕ್ಷಕ ಉಪಗ್ರಹ ಲ್ಯಾಂಡ್​ಸ್ಯಾಟ್​9 (Landsat 9) ಮತ್ತು ಅದರೊಂದಿಗೆ ನಾಲ್ಕು ಸಣ್ಣ ಉಪಗ್ರಹಗಳನ್ನು ಕ್ಯಾಲಿಫೋರ್ನಿಯಾದಿಂದ ಕಕ್ಷೆಗೆ ಉಡಾವಣೆ ಮಾಡಿದೆ.  ನಾಸಾ ಮತ್ತು ಯುಎಸ್​​ನ ಜಿಯೋಲಾಜಿಕಲ್​ ಸರ್ವೇ (USGS)ಯ ಜಂಟಿ ಮಿಷನ್​ ಆಗಿರುವ ಈ ಲ್ಯಾಂಡ್​ಸ್ಯಾಟ್​ ಭೂಮಿಯ ಮೇಲಿನ ನೆಲ ಪ್ರದೇಶ ಮತ್ತು ಕರಾವಳಿ ತೀರಗಳ ವೀಕ್ಷಕ ಆಗಲಿದೆ. ಅಂದಹಾಗೆ ಲ್ಯಾಂಡ್​ಸೆಟ್​ ಸರಣಿಯ ಮೊದಲ ಉಪಗ್ರಹ ಉಡಾವಣೆ ಆಗಿದ್ದು, 1972ರಲ್ಲಿ. ಇದೀಗ ಲ್ಯಾಂಡ್​ಸ್ಯಾಟ್​​ 9 ಉಡಾವಣೆಯಾಗಿದೆ. 

ಸೋಮವಾರ ಕ್ಯಾಲಿಫೋರ್ನಿಯಾದ ವಂಡೆನ್​ಬರ್ಗ್​ ಸ್ಪೇಸ್​ ಫೋರ್ಸ್​ನಿಂದ ಅಟ್ಲಾಸ್​ ವಿ ರಾಕೆಟ್​ (Atlas V rocket) ಮೂಲಕ ಸೋಮವಾರ ಮಧ್ಯಾಹ್ನ 2. 12ಕ್ಕೆ ಉಡಾವಣೆಗೊಂಡ ಲ್ಯಾಂಡ್ ಸ್ಯಾಟ್​ 9 ಸುಮಾರು 1 ತಾಸುಗಳ ಬಳಿಕ ವಾಹಕ ರಾಕೆಟ್​​ನಿಂದ ಬೇರ್ಪಟ್ಟಿದೆ.  ಈ ಉಪಗ್ರಹ ಭೂ ಮೇಲ್ಮೈನ ವೀಕ್ಷಣೆ ಮಾಡುವ ಜತೆಗೆ ಹವಾಮಾನ ಬದಾಲವಣೆಯ ಬಗ್ಗೆ ಡಾಟಾ ಒದಗಿಸಲಿದೆ.

1972ರಲ್ಲಿ ಮೊದಲ ಬಾರಿಗೆ ಲ್ಯಾಂಡ್​ಸ್ಯಾಟ್​ ಉಡಾವಣೆಗೊಳಿಸಿದಾಗಿನಿಂದಲೂ ಅದು ಕಕ್ಷೆಯಲ್ಲಿಯೇ ಉಳಿದಿದೆ. 2013ರ ಫೆಬ್ರವರಿಯಲ್ಲಿ ಲ್ಯಾಂಡ್​ಸೆಟ್​ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್​ಸ್ಯಾಟ್​ 9 ಪ್ರತಿ 8ದಿನಗಳಿಗೆ ಒಮ್ಮೆ ,ಲ್ಯಾಂಡ್​ಸ್ಯಾಟ್​ 8ನ್ನು ಸೇರಿ ಕೊಂಡು ಭೂಮಿಯ ವಿವಿಧ ಭಾಗಗಳ ಫೋಟೋ ಸಂಗ್ರಹಿಸಲಿದೆ. ಇದು ಅರಣ್ಯಗಳು, ಕೃಷಿ, ನೀರಿನ ಗುಣಮಟ್ಟ, ಹಿಮಾಚ್ಛಾದಿತ ಪ್ರದೇಶಗಳ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ

ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ

(NASA launched Landsat 9 satellite from Vandenberg Space Force Base in California)

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?