AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?

NASA: 2013ರ ಫೆಬ್ರವರಿಯಲ್ಲಿ ಲ್ಯಾಂಡ್​ಸೆಟ್​ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್​ಸ್ಯಾಟ್​ 9 ಪ್ರತಿ 8ದಿನಗಳಿಗೆ ಒಮ್ಮೆ ಅದನ್ನು ಸೇರಿಕೊಳ್ಳಲಿದೆ.

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?
ಲ್ಯಾಂಡ್​ಸ್ಯಾಟ್​ 9ನ್ನು ಉಡಾವಣೆ ಮಾಡಿದ ನಾಸಾ
TV9 Web
| Edited By: |

Updated on: Sep 28, 2021 | 3:28 PM

Share

ಯುಎಸ್​ನ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ನಿನ್ನೆ (ಸೆ.27) ಪ್ರಬಲ ಭೂ ವೀಕ್ಷಕ ಉಪಗ್ರಹ ಲ್ಯಾಂಡ್​ಸ್ಯಾಟ್​9 (Landsat 9) ಮತ್ತು ಅದರೊಂದಿಗೆ ನಾಲ್ಕು ಸಣ್ಣ ಉಪಗ್ರಹಗಳನ್ನು ಕ್ಯಾಲಿಫೋರ್ನಿಯಾದಿಂದ ಕಕ್ಷೆಗೆ ಉಡಾವಣೆ ಮಾಡಿದೆ.  ನಾಸಾ ಮತ್ತು ಯುಎಸ್​​ನ ಜಿಯೋಲಾಜಿಕಲ್​ ಸರ್ವೇ (USGS)ಯ ಜಂಟಿ ಮಿಷನ್​ ಆಗಿರುವ ಈ ಲ್ಯಾಂಡ್​ಸ್ಯಾಟ್​ ಭೂಮಿಯ ಮೇಲಿನ ನೆಲ ಪ್ರದೇಶ ಮತ್ತು ಕರಾವಳಿ ತೀರಗಳ ವೀಕ್ಷಕ ಆಗಲಿದೆ. ಅಂದಹಾಗೆ ಲ್ಯಾಂಡ್​ಸೆಟ್​ ಸರಣಿಯ ಮೊದಲ ಉಪಗ್ರಹ ಉಡಾವಣೆ ಆಗಿದ್ದು, 1972ರಲ್ಲಿ. ಇದೀಗ ಲ್ಯಾಂಡ್​ಸ್ಯಾಟ್​​ 9 ಉಡಾವಣೆಯಾಗಿದೆ. 

ಸೋಮವಾರ ಕ್ಯಾಲಿಫೋರ್ನಿಯಾದ ವಂಡೆನ್​ಬರ್ಗ್​ ಸ್ಪೇಸ್​ ಫೋರ್ಸ್​ನಿಂದ ಅಟ್ಲಾಸ್​ ವಿ ರಾಕೆಟ್​ (Atlas V rocket) ಮೂಲಕ ಸೋಮವಾರ ಮಧ್ಯಾಹ್ನ 2. 12ಕ್ಕೆ ಉಡಾವಣೆಗೊಂಡ ಲ್ಯಾಂಡ್ ಸ್ಯಾಟ್​ 9 ಸುಮಾರು 1 ತಾಸುಗಳ ಬಳಿಕ ವಾಹಕ ರಾಕೆಟ್​​ನಿಂದ ಬೇರ್ಪಟ್ಟಿದೆ.  ಈ ಉಪಗ್ರಹ ಭೂ ಮೇಲ್ಮೈನ ವೀಕ್ಷಣೆ ಮಾಡುವ ಜತೆಗೆ ಹವಾಮಾನ ಬದಾಲವಣೆಯ ಬಗ್ಗೆ ಡಾಟಾ ಒದಗಿಸಲಿದೆ.

1972ರಲ್ಲಿ ಮೊದಲ ಬಾರಿಗೆ ಲ್ಯಾಂಡ್​ಸ್ಯಾಟ್​ ಉಡಾವಣೆಗೊಳಿಸಿದಾಗಿನಿಂದಲೂ ಅದು ಕಕ್ಷೆಯಲ್ಲಿಯೇ ಉಳಿದಿದೆ. 2013ರ ಫೆಬ್ರವರಿಯಲ್ಲಿ ಲ್ಯಾಂಡ್​ಸೆಟ್​ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್​ಸ್ಯಾಟ್​ 9 ಪ್ರತಿ 8ದಿನಗಳಿಗೆ ಒಮ್ಮೆ ,ಲ್ಯಾಂಡ್​ಸ್ಯಾಟ್​ 8ನ್ನು ಸೇರಿ ಕೊಂಡು ಭೂಮಿಯ ವಿವಿಧ ಭಾಗಗಳ ಫೋಟೋ ಸಂಗ್ರಹಿಸಲಿದೆ. ಇದು ಅರಣ್ಯಗಳು, ಕೃಷಿ, ನೀರಿನ ಗುಣಮಟ್ಟ, ಹಿಮಾಚ್ಛಾದಿತ ಪ್ರದೇಶಗಳ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ

ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ

(NASA launched Landsat 9 satellite from Vandenberg Space Force Base in California)

Follow Us
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!