AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ. ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. […]

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!
KUSHAL V
| Edited By: |

Updated on:Jul 23, 2020 | 2:09 PM

Share

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ.

ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. ಹೀಗಾಗಿ, ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಚಿವನ ತಲೆದಂಡ? ಅಂದ ಹಾಗೆ, ನ್ಯೂಜಿಲ್ಯಾಂಡ್​ನಲ್ಲಿ​ ಇದೇ ಸೆಪ್ಟಂಬರ್​ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ, ಸಚಿವರ ರಾಸಲೀಲೆ ಪ್ರಕರಣವು ಆಡಳಿತ ಪಕ್ಷದ ಗೆಲುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಜೊತೆಗೆ, ಸಚಿವರ ಕಾಮದಾಟವನ್ನ ಬೆಳಕಿಗೆ ತಂದಿರೋದು ವಿರೋಧ ಪಕ್ಷದ ನಾಯಕಿ ಜೂಡಿಥ್​ ಕಾಲಿನ್ಸ್​. ಆದ್ದರಿಂದ, ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರಧಾನಿ ಆರ್ಡೆರ್ನ್​ಗೆ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.

ಇನ್ನು, ಮೂರು ಮಕ್ಕಳ ತಂದೆಯಾಗಿರುವ ಇಯನ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನ್ನ ವರ್ತನೆ ಅನುಚಿತವಾಗಿದ್ದು, ಈ ಕುರಿತು ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ.

Published On - 1:12 pm, Wed, 22 July 20

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ