AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ. ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. […]

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!
KUSHAL V
| Edited By: |

Updated on:Jul 23, 2020 | 2:09 PM

Share

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ.

ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. ಹೀಗಾಗಿ, ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಚಿವನ ತಲೆದಂಡ? ಅಂದ ಹಾಗೆ, ನ್ಯೂಜಿಲ್ಯಾಂಡ್​ನಲ್ಲಿ​ ಇದೇ ಸೆಪ್ಟಂಬರ್​ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ, ಸಚಿವರ ರಾಸಲೀಲೆ ಪ್ರಕರಣವು ಆಡಳಿತ ಪಕ್ಷದ ಗೆಲುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಜೊತೆಗೆ, ಸಚಿವರ ಕಾಮದಾಟವನ್ನ ಬೆಳಕಿಗೆ ತಂದಿರೋದು ವಿರೋಧ ಪಕ್ಷದ ನಾಯಕಿ ಜೂಡಿಥ್​ ಕಾಲಿನ್ಸ್​. ಆದ್ದರಿಂದ, ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರಧಾನಿ ಆರ್ಡೆರ್ನ್​ಗೆ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.

ಇನ್ನು, ಮೂರು ಮಕ್ಕಳ ತಂದೆಯಾಗಿರುವ ಇಯನ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನ್ನ ವರ್ತನೆ ಅನುಚಿತವಾಗಿದ್ದು, ಈ ಕುರಿತು ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ.

Published On - 1:12 pm, Wed, 22 July 20

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ