AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ. ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. […]

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!
KUSHAL V
| Edited By: |

Updated on:Jul 23, 2020 | 2:09 PM

Share

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ.

ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. ಹೀಗಾಗಿ, ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಚಿವನ ತಲೆದಂಡ? ಅಂದ ಹಾಗೆ, ನ್ಯೂಜಿಲ್ಯಾಂಡ್​ನಲ್ಲಿ​ ಇದೇ ಸೆಪ್ಟಂಬರ್​ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ, ಸಚಿವರ ರಾಸಲೀಲೆ ಪ್ರಕರಣವು ಆಡಳಿತ ಪಕ್ಷದ ಗೆಲುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಜೊತೆಗೆ, ಸಚಿವರ ಕಾಮದಾಟವನ್ನ ಬೆಳಕಿಗೆ ತಂದಿರೋದು ವಿರೋಧ ಪಕ್ಷದ ನಾಯಕಿ ಜೂಡಿಥ್​ ಕಾಲಿನ್ಸ್​. ಆದ್ದರಿಂದ, ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರಧಾನಿ ಆರ್ಡೆರ್ನ್​ಗೆ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.

ಇನ್ನು, ಮೂರು ಮಕ್ಕಳ ತಂದೆಯಾಗಿರುವ ಇಯನ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನ್ನ ವರ್ತನೆ ಅನುಚಿತವಾಗಿದ್ದು, ಈ ಕುರಿತು ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ.

Published On - 1:12 pm, Wed, 22 July 20

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು