AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ಸ್ಮಾರ್ಟ್​ಫೋನ್​ ಮೂಲಕವೇ ಕೊರೊನಾ ವೈರಸ್​ ಪತ್ತೆ ಹಚ್ಚಬಹುದು!

ನನ್ನ ಗೆಳೆಯನೋರ್ವನಿಗೆ ಕೊರೊನಾ ಟೆಸ್ಟ್​​ ಮಾಡಲಾಗಿತ್ತು. ಈ ಪರೀಕ್ಷೆ ನಡೆದ 8 ದಿನಗಳ ನಂತರ ವರದಿ ನೀಡಲಾಗಿತ್ತು. ಹೀಗಾಗಿ, ನಾವು ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ ಎಂದು ತಜ್ಞ ತಿಳಿಸಿದ್ದಾರೆ.

ಈಗ ಸ್ಮಾರ್ಟ್​ಫೋನ್​ ಮೂಲಕವೇ ಕೊರೊನಾ ವೈರಸ್​ ಪತ್ತೆ ಹಚ್ಚಬಹುದು!
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Jan 30, 2021 | 5:05 PM

ಕೊರೊನಾ ವೈರಸ್​ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರೆ ಹತ್ತಿರದ ಆಸ್ಪತ್ರೆಗೆ ತೆರಳಬೇಕು. ಅಲ್ಲಿ ಗಂಟೆಗಟ್ಟಲೆ ಕಾಯಬೇಕು. ಇಷ್ಟಕ್ಕೇ ನಿಂತಿಲ್ಲ. ವೈದ್ಯರು ನಿಮ್ಮ ಗಂಟಲು ದ್ರವ ತೆಗೆದುಕೊಂಡು ಪರಿಕ್ಷೆಯನ್ನೇನೋ ಮಾಡುತ್ತಾರೆ. ಆದರೆ, ಇದರ ವರದಿ ನೀಡೋಕೆ ಹಲವು ದಿನಗಳನ್ನೇ ತೆಗೆದುಕೊಳ್ಳುತ್ತಾರೆ. ಈ ತಲೆನೋವನ್ನು ಕಡಿಮೆ ಮಾಡಲು ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರು ಮೊಬೈಲ್​ ಮೂಲಕವೇ ಕೊರೊನಾ ಪರೀಕ್ಷೆ ನಡೆಸಲು ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾಡಿದ್ದಾರೆ.

ಅರಿಜೋನಾ ವಿಶ್ವವಿದ್ಯಾಲಯದ ಜಿಯಾಂಗ್-ಯಿಯೋಲ್ ಯೂನ್ ಈ ಸಂಶೋಧನೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಅವರು, ಕೊರೊನಾ ವೈರಸ್​ ಪತ್ತೆ ಹಚ್ಚಲು ನಾವು ನಮ್ಮದೇ ಹೊಸ ಅನ್ವೇಷಣೆ ಮಾಡಿದ್ದೇವೆ. ನಿಮ್ಮ ಸ್ಮಾರ್ಟ್​ಫೋನ್​ ಬಳಕೆ ಮಾಡಿಕೊಂಡೇ ನೀವು ಕೊರೊನಾ ವೈರಸ್​ ಪತ್ತೆ ಹಚ್ಚಬಹುದು ಎಂದಿದ್ದಾರೆ ತಜ್ಞರು.

ತಜ್ಞರು ಅಭಿವೃದ್ಧಿ ಮಾಡಿರುವ ಸಂಶೋಧನೆ ಪ್ರಕಾರ ಸ್ಮಾರ್ಟ್​ಫೋನ್​ಗೆ ಒಂದು ಮೈಕ್ರೋಸ್ಕೋಪ್​ ಅವಶ್ಯಕತೆ ಇದೆ. ಇದರ ಜೊತೆಗೆ ನಿಮಗೆ ಮೈಕ್ರೋಫ್ಲೂಯಿಡ್ ಪೇಪರ್ ಕೂಡ ಬೇಕು. ನಂತರ ಗಂಟಲು ದ್ರವವನ್ನು ಮೈಕ್ರೋಫ್ಲೂಯಿಡ್ ಪೇಪರ್ ಮೇಲೆ ಹಾಕಿದಾಗ ಅಲ್ಲಿ ಆಗುವ ರಿಯಾಕ್ಷನ್​ ಆಧರಿಸಿ ನಿಮಗೆ ಕೊರೊನಾ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಂಡು ಹಿಡಿಯಬಹುದಾಗಿದೆ. ಅಲ್ಲಿ ಆಗುವ ರಿಯಾಕ್ಷನ್ನು ಮೊಬೈಲ್​ನಲ್ಲಿರುವ ಮೈಕ್ರೋಸ್ಕೋಪ್ ಬಳಸಿಕೊಂಡು ನೋಡಬಹುದು. ಈ ಪರೀಕ್ಷೆಯನ್ನು ಕೇವಲ 45 ರೂಪಾಯಿಯಲ್ಲಿ ಮಾಡಬಹುದು.

ನನ್ನ ಗೆಳೆಯನೋರ್ವನಿಗೆ ಕೊರೊನಾ ಟೆಸ್ಟ್​​ ಮಾಡಲಾಗಿತ್ತು. ಈ ಪರೀಕ್ಷೆ ನಡೆದ 8 ದಿನಗಳ ನಂತರ ವರದಿ ನೀಡಲಾಗಿತ್ತು. ಹೀಗಾಗಿ, ನಾವು ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ ಎಂದು ಯಿಯೋಲ್ ಯೂನ್ ತಿಳಿಸಿದ್ದಾರೆ.

ಕೊರೊನಾ ನಂತರದ ಮೊದಲ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಬೆಂಗಳೂರು ವಿವಿ! ಇಸ್ರೋ ಮುಖ್ಯಸ್ಥ ಶಿವನ್ ಮುಖ್ಯ ಅತಿಥಿ

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್