AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕ್​ಫಾಸ್ಟ್ ವಿಚಾರಕ್ಕೆ ಸಿಕ್ಕಾಪಟೆ ಟ್ರೋಲ್​ ಆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​

ಹಾಗೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತೀರಲ್ಲ, ಅವರ ಬಳಿ ಮಾತನಾಡುವುದು ಬಿಟ್ಟು, ತಿನ್ನಲು ಕೊಡಬಹುದಲ್ಲ ! ಶೇರಿಂಗ್ ಈಸ್ ಕೇರಿಂಗ್​ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಬ್ರೇಕ್​ಫಾಸ್ಟ್ ವಿಚಾರಕ್ಕೆ ಸಿಕ್ಕಾಪಟೆ ಟ್ರೋಲ್​ ಆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​
ಇಮ್ರಾನ್ ಖಾನ್​
Follow us
Lakshmi Hegde
|

Updated on:Mar 21, 2021 | 6:42 PM

ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಉಪಾಹಾರ ಸೇವಿಸುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಭಿನ್ನ-ವಿಭಿನ್ನವಾಗಿ ಕಮೆಂಟ್ ಮಾಡುತ್ತ, ಪ್ರಧಾನಿ ಇಮ್ರಾನ್​ ಖಾನ್​ರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಮ್ರಾನ್ ಖಾನ್​ ಯಾರೊಂದಿಗೋ ಮಾತನಾಡುತ್ತ, ಆಹಾರ ಸೇವಿಸುತ್ತಿರುವುದನ್ನು ನೀವು ಫೋಟೋದಲ್ಲಿ ನೋಡಬಹುದು. ಈಗ ಇದೇ ಫೋಟೋದೊಂದಿಗೆ, ಹಲವು ವರ್ಷಗಳ ಹಿಂದಿನ ಅವರ ಫೋಟೋವೊಂದನ್ನು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ಆ ಹಳೇ ಫೋಟೋದಲ್ಲೂ ಸಹ ಇಮ್ರಾನ್ ಖಾನ್​ ಜರ್ನಲಿಸ್ಟ್ ಒಬ್ಬರೊಂದಿಗೆ ಮಾತನಾಡುತ್ತಲೇ ಬ್ರೇಕ್​ಫಾಸ್ಟ್ ಮಾಡುತ್ತಿದ್ದಾರೆ.

ಆದರೆ ಇದೀಗ ವೈರಲ್​ ಆದ ಫೋಟೋ ನೋಡಿದ ನೆಟ್ಟಿಗರು ಇಮ್ರಾನ್​ ಖಾನ್​ ಅವರದ್ದು ಬ್ಯಾಡ್​ ಹ್ಯಾಬಿಟ್​ ಎಂದಿದ್ದಾರೆ. ಇಮ್ರಾನ್​ ಖಾನ್ ಆಹಾರ ಸೇವನೆ ಮಾಡುವ ಹೀಗೆ ಇನ್ನೊಬ್ಬರೊಂದಿಗೆ ಮಾತನಾಡುವುದು ಹಳೇ ಹಾಗೂ ಈಗಿನ ಫೋಟೋಗಳೆರಡರಲ್ಲೂ ಕಾಣುತ್ತಿದೆ. ಇದು ಒಳ್ಳೆಯ ಅಭ್ಯಾಸ ಅಲ್ಲ ಎಂದೇ ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಇಮ್ರಾನ್​ ಖಾನ್​ರನ್ನು ಟ್ರೋಲ್ ಮಾಡಿದ್ದು ಪಾಕಿಸ್ತಾನದ ಟ್ವಿಟರ್​ ಬಳಕೆದಾರರೇ ಆಗಿದ್ದಾರೆ. ಇನ್ನು ವೈರಲ್ ಆದ ಎರಡೂ ಫೋಟೋಗಳಲ್ಲೂ ಇಮ್ರಾನ್ ಖಾನ್ ಮೊಟ್ಟೆ, ಮಾವಿನಹಣ್ಣು ಮತ್ತು ಮೊಸರಿನ ಪಾತ್ರೆಗಳನ್ನು ಮುಂದಿಟ್ಟುಕೊಂಡಿರುವುದು ಕಾಣುತ್ತದೆ. ಈ ವಿಚಾರದಲ್ಲೂ ನೆಟ್ಟಿಗರು ಟೀಕಿಸಿದ್ದಾರೆ. ಇದ್ಯಾವ ವಿಧದ ಬ್ರೇಕ್​ಫಾಸ್ಟ್​. ಮೊಟ್ಟೆ, ಮೊಸರು.. ಮಾವಿನಹಣ್ಣನ್ನು ಒಟ್ಟಿಗೆ ತಿನ್ನುವ ಹವ್ಯಾಸ ಇವರಿಗೆ ಹೇಗೆ ಬೆಳೆದುಬಂತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರಂತೂ ನಿಮ್ಮ ಡಯಟ್​ ವಿಧಾನ ಯಾವುದು ಎಂದು ಕೇಳಿದ್ದಾರೆ. ಇನ್ನೊಂದಿಷ್ಟು ಮಂದಿ, ಹಾಗೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತೀರಲ್ಲ, ಅವರ ಬಳಿ ಮಾತನಾಡುವುದು ಬಿಟ್ಟು, ತಿನ್ನಲು ಕೊಡಬಹುದಲ್ಲ ! ಶೇರಿಂಗ್ ಈಸ್ ಕೇರಿಂಗ್​ ಎಂದು ವ್ಯಂಗ್ಯವಾಡಿದ್ದಾರೆ.

Published On - 6:36 pm, Sun, 21 March 21

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು