AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಿ ಸುನಾಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಇಸ್ಕಾನ್ ದೇವಸ್ಥಾನಕ್ಕೆ ತೆರಳಿ ಜನ್ಮಾಷ್ಟಮಿ ಆಚರಿಸಿದರು

ಭಾರತೀಯ ಮೂಲದ ದಂಪತಿಗಳಿಗೆ ಸೌಥಾಂಪ್ಟನಲ್ಲಿ ಜನಿಸಿದ ಸುನಾಕ್, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಎಮ್ ಬಿ ಎ ವ್ಯಾಸಂಗ ಮಾಡುವಾಗ ತಮ್ಮ ಬಾಳ ಸಂಗಾತಿ ಅಕ್ಷತಾರನ್ನು ಭೇಟಿಯಾದರು. 2006 ಬೆಂಗಳೂರಲ್ಲಿ ಎರಡು ದಿನಗಳ ಕಾಲ ನಡೆದ ಮದುವೆ ಸಮಾರಂಭದಲ್ಲಿ ಅವರು ಸತಿಪತಿಗಳಾದರು.

ರಿಷಿ ಸುನಾಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಇಸ್ಕಾನ್ ದೇವಸ್ಥಾನಕ್ಕೆ ತೆರಳಿ ಜನ್ಮಾಷ್ಟಮಿ ಆಚರಿಸಿದರು
ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ (ಸಂಗ್ರಹ ಚಿತ್ರ)
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 19, 2022 | 2:48 PM

Share

ಕೃಷ್ಣ ಜನ್ಮಾಷ್ಟಮಿ ಕೇವಲ ಭಾರತದಲ್ಲಿ ಮಾತ್ರ ಅಲ್ಲ ವಿಶ್ವದ ನಾನಭಾಗಗಳಲ್ಲಿ ಆಚರಿಸಲಾಗುತ್ತಿದೆ. ಭಾರತೀಯ-ಮೂಲದ ಬ್ರಿಟಿಷ್ ರಾಜಕಾರಣಿ ಮತ್ತು ಪ್ರಸ್ತುತ ಆ ದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೆ ರೇಸ್ ನಲ್ಲಿರುವ ರಿಷಿ ಸುನಾಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಸ್ಕಾನ್ ಭಕ್ತಿವೇದಾಂತ ಮೇನರ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇನ್ಸ್ಟಾಗ್ರಾಮ್​ನಲ್ಲಿ ಸುನಾಕ್, ‘ಜನ್ಮಾಷ್ಟಮಿ ಅಂಗವಾಗಿ ಇಂದು ನನ್ನ ಪತ್ನಿ ಅಕ್ಷತಾ ಜೊತೆ ಭಕ್ತಿವೇದಾಂತ ಮೇನರ್ ದೇವಸ್ಥಾನಕ್ಕೆ ಹೋಗಿದ್ದೆ, ಹಿಂದೂಗಳ ಪ್ರಮುಖ ಹಬ್ಬವಾಗಿರುವ ಶ್ರೀಕೃಷ್ಣನ ಜನ್ಮದಿನವನ್ನು ನಾವು ಆಚರಿಸಿದೆವು,’ ಎಂದು ಹೇಳಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಂಗ್ಲೆಂಡ್ ನಲ್ಲೇ ಹುಟ್ಟಿ ಬೆಳೆದರೂ ಸುನಾಕ್ ಅಪ್ಪಟ ಹಿಂದೂ ಧರ್ಮದ ಅನುಯಾಯಿ ಅಗಿದ್ದಾರೆ.

View this post on Instagram

A post shared by Rishi Sunak (@rishisunakmp)

ಭಾರತೀಯ ಮೂಲದ ದಂಪತಿಗಳಿಗೆ ಸೌಥಾಂಪ್ಟನಲ್ಲಿ ಜನಿಸಿದ ಸುನಾಕ್, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಎಮ್ ಬಿ ಎ ವ್ಯಾಸಂಗ ಮಾಡುವಾಗ ತಮ್ಮ ಬಾಳ ಸಂಗಾತಿ ಅಕ್ಷತಾರನ್ನು ಭೇಟಿಯಾದರು. 2006 ಬೆಂಗಳೂರಲ್ಲಿ ಎರಡು ದಿನಗಳ ಕಾಲ ನಡೆದ ಮದುವೆ ಸಮಾರಂಭದಲ್ಲಿ ಅವರು ಸತಿಪತಿಗಳಾದರು.

ಏತನ್ಮಧ್ಯೆ, ಬೋರಿಸ್ ಜಾನ್ಸನ್ ಸಂಪುಟದಲ್ಲಿ ಸಚಿರಾಗಿದ್ದ ಸುನಾಕ್ ರಾಜೀನಾಮೆ ಸಲ್ಲಿಸುವ ಮೂಲಕ ಜಾನ್ಸನ್ ಪದಚ್ಯುತಿಗೆ ನಾಂದಿ ಹಾಡಿ ಪ್ರಧಾನ ಮಂತ್ರಿ ಸ್ಥಾನಕ್ಕೆ ತಾನೂ ಅಭ್ಯರ್ಥಿ ಎಂದು ಘೋಷಿಸಿಕೊಂಡರು.

ಆದರೆ ಹಲವಾರು ಸಮೀಕ್ಷೆಗಳ ಪ್ರಕಾರ ಅವರು ತಮ್ಮ ಪ್ರತಿಸ್ಪರ್ಧಿ ಯುಕೆಯ ವಿದೇಶಾಂಗ ವ್ಯವಾಹಾರಗಳ ಸಚಿವೆ ಲಿಜ್ ಟ್ರಸ್ ಅವರಿಗಿಂತ ಬಹಳ ಹಿಂದಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಅಯ್ಕೆಯಾದವರು ಯುಕೆಯ ಪ್ರಧಾನಿಯಾಗಲಿದ್ದಾರೆ. ತಮ್ಮ ಪಕ್ಷದಲ್ಲಿ ಜನಾಂಗೀಯ ತಾರತಮ್ಯಕ್ಕೆ ಅವಕಾಶವಿಲ್ಲ ಅಂತ ಅವರು ಇತ್ತೀಚಿಗೆ ಹೇಳಿದ್ದರು.

ಬುಧವಾರ ಬಿಡುಗಡೆಯಾದ ಕನ್ಸರ್ವೇಟಿವ್ ಪಕ್ಷದ ಸಮೀಕ್ಷೆಯ ಪ್ರಕಾರವೂ ಸುನಾಕ್ ಅವರು ಲಿಜ್ ಗಿಂತ ಹಿಂದಿದ್ದಾರೆ.

‘ಸುನಾಕ್ ಅವರಿಗೆ ಶೇಕಡ 26 ರಷ್ಟು ಸದಸ್ಯರ ಬೆಂಬಲವಿದ್ದರೆ ಲಿಜ್ ಅವರಿಗೆ ಶೇಕಡಾ 58 ಸದಸ್ಯರು ಬೆಂಬಲ ಸೂಚಿಸಿದ್ದಾರೆ, ಮಿಕ್ಕ 12 ಪರ್ಸೆಂಟ್ ಜನ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಈಗ, ಆ ಅಂಕಿಅಂಶಗಳು ಶೇಕಡಾ 28, ಶೇಕಡಾ 60 ಮತ್ತು ಶೇಕಡಾ 9 ಆಗಿವೆ. ಈ ಬಾರಿ ‘ಯಾರಿಗೂ ವೋಟ್ ಮಾಡಲ್ಲ’, ‘ವೋಟಿಂಗ್ ನಿಂದ ಹಿಂತೆಗೆಯುವುದು’ ಎಂಬ ಹೊಸ ಕಾಲಮ್ ಗಳನ್ನು ಜಾರಿ ಮಾಡಿದ್ದೇವೆ,’ ಎಂದು 961 ಪಕ್ಷದ ಸದಸ್ಯರ ಕನ್ಸರ್ವೇಟಿವ್ ಪಕ್ಷದ ಹೋಮ್ ಸಮೀಕ್ಷೆ ಹೇಳಿದೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ