AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vladimir Putin ಕ್ರಿಮಿಯನ್ ಸೇತುವೆ ಮೇಲೆ ಮರ್ಸಿಡಿಸ್ ಕಾರು ಚಲಾಯಿಸಿದ ವ್ಲಾಡಿಮಿರ್ ಪುಟಿನ್; ವಿಡಿಯೊ ನೋಡಿ

2018 ರಲ್ಲಿ ವ್ಲಾಡಿಮಿರ್ ಪುಟಿನ್ ಅವರು ವೈಯಕ್ತಿಕವಾಗಿ ತೆರೆದ 19 ಕಿಮೀ ರಸ್ತೆ ಮತ್ತು ರೈಲು ಸೇತುವೆ ಮೇಲೆ ಅಕ್ಟೋಬರ್ 8 ರಂದು ಉಕ್ರೇನ್ ಬಾಂಬ್ ದಾಳಿ ನಡೆಸಿದೆ ಎಂದು ರಷ್ಯಾ ಹೇಳಿತ್ತು. ಆದರೆ ಉಕ್ರೇನ್ ಎಂದಿಗೂ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ

Vladimir Putin ಕ್ರಿಮಿಯನ್ ಸೇತುವೆ ಮೇಲೆ ಮರ್ಸಿಡಿಸ್ ಕಾರು ಚಲಾಯಿಸಿದ ವ್ಲಾಡಿಮಿರ್ ಪುಟಿನ್; ವಿಡಿಯೊ ನೋಡಿ
ವ್ಲಾಡಿಮಿರ್ ಪುಟಿನ್ Image Credit source: Kremlinpool_RIA Twitter handle
TV9 Web
| Edited By: |

Updated on:Dec 06, 2022 | 1:52 PM

Share

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ರಷ್ಯಾ ಮತ್ತು ಸ್ವಾಧೀನ ಪಡಿಸಿಕೊಂಡ ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ಸಂಪರ್ಕಿಸುವ ಕ್ರಿಮಿಯನ್ ಸೇತುವೆಯಲ್ಲಿ (Crimean Bridge) ಮರ್ಸಿಡಿಸ್ ಕಾರು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ.ಕೆಲವು ತಿಂಗಳ ಹಿಂದೆ ಈ ಸೇತುವೆ ಮೇಲೆ ಸ್ಫೋಟ ನಡೆದಿತ್ತು.2018 ರಲ್ಲಿ ವ್ಲಾಡಿಮಿರ್ ಪುಟಿನ್ ಅವರು ವೈಯಕ್ತಿಕವಾಗಿ ತೆರೆದ 19 ಕಿಮೀ ರಸ್ತೆ ಮತ್ತು ರೈಲು ಸೇತುವೆ ಮೇಲೆ ಅಕ್ಟೋಬರ್ 8 ರಂದು ಉಕ್ರೇನ್ ಬಾಂಬ್ ದಾಳಿ ನಡೆಸಿದೆ ಎಂದು ರಷ್ಯಾ ಹೇಳಿತ್ತು. ಆದರೆ ಉಕ್ರೇನ್ ಎಂದಿಗೂ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಪುಟಿನ್, ಉಪ ಪ್ರಧಾನ ಮಂತ್ರಿ ಮರಾತ್ ಖುಸ್ನುಲಿನ್ ಅವರೊಂದಿಗೆ ಮರ್ಸಿಡಿಸ್ ಕಾರು ಚಲಾಯಿಸುತ್ತಿರುವುದನ್ನು ರಾಜ್ಯ ದೂರದರ್ಶನ ಪ್ರಸಾರ ಮಾಡಿದ್ದು, ದಾಳಿ ಎಲ್ಲಿ ನಡೆಯಿತು ಎಂಬ ಪ್ರಶ್ನೆ ಕೇಳಿದೆ.ಸೇತುವೆಯ ಎಡಭಾಗ, ನಾನು ಅರ್ಥಮಾಡಿಕೊಂಡಂತೆ ನಿರ್ಮಾಣ ಸ್ಥಿತಿಯಲ್ಲಿದೆ. ಆದರೆ ಅದೇನೇ ಇದ್ದರೂ ಅದನ್ನು ಪೂರ್ಣಗೊಳಿಸಬೇಕಾಗಿದೆ. ಅದಕ್ಕೆ ಸ್ವಲ್ಪ ಹಾನಿಯಾಗಿದೆ. ನಾವು ಅದನ್ನು ಸುಸ್ಥಿತಿಗೆ ತರಬೇಕಾಗಿದೆ ಎಂದು ರಷ್ಯಾದ ದೂರದರ್ಶನ ಜತೆ ಮಾತನಾಡಿದ ವ್ಲಾಡಿಮಿರ್ ಪುಟಿನ್ ಹೇಳಿದರು.ವ್ಲಾಡಿಮಿರ್ ಪುಟಿನ್ ಅವರು ಸೇತುವೆಯ ಭಾಗಗಳಲ್ಲಿ ನಡೆದಿದ್ದು , ಹಾನಿಯಾದ ಭಾಗಗಳನ್ನು ಪರಿಶೀಲಿಸಿದರು.

ಸ್ಫೋಟದಲ್ಲಿ ರಸ್ತೆ ಸೇತುವೆಯ ಒಂದು ಭಾಗವನ್ನು ಧ್ವಂಸಗೊಂಡಿದ್ದು ಕೆರ್ಚ್ ಜಲಸಂಧಿಯಾದ್ಯಂತ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ನೆರೆಯ ದಕ್ಷಿಣ ರಷ್ಯಾದಿಂದ ಸ್ವಾಧೀನಪಡಿಸಿಕೊಂಡ ಕ್ರಿಮಿಯಾನ್ ಪರ್ಯಾಯ ದ್ವೀಪದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿದ್ದ ಹಲವಾರು ಇಂಧನ ಟ್ಯಾಂಕರ್‌ಗಳು ಸ್ಫೋಟದಿಂದ ನಾಶವಾಗಿವೆ. ಇದಕ್ಕೆ ಪ್ರತಿಯಾಗಿ ನಾಗರಿಕ ಪ್ರದೇಶಗಳು ಮತ್ತು ಉಕ್ರೇನ್‌ನ ಪವರ್ ಗ್ರಿಡ್‌ನ ಮೇಲೆ ವೈಮಾನಿಕ ದಾಳಿಯೊಂದಿಗೆ ಪುಟಿನ್ ಪ್ರತೀಕಾರ ತೀರಿಸಿಕೊಂಡಿದ್ದರು.

Published On - 1:50 pm, Tue, 6 December 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್