AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನ ಅಜೋವ್​​ ರೆಜಿಮೆಂಟ್​​ನ್ನು ಉಗ್ರ ಗುಂಪು ಎಂದು ಘೋಷಿಸಿದ ರಷ್ಯಾದ ಸುಪ್ರೀಂಕೋರ್ಟ್

ಉಕ್ರೇನ್​​ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ.

ಉಕ್ರೇನ್​​ನ ಅಜೋವ್​​ ರೆಜಿಮೆಂಟ್​​ನ್ನು ಉಗ್ರ ಗುಂಪು ಎಂದು ಘೋಷಿಸಿದ ರಷ್ಯಾದ ಸುಪ್ರೀಂಕೋರ್ಟ್
ಅಜೋವ್ ರೆಜಿಮೆಂಟ್Image Credit source: AFP
TV9 Web
| Edited By: |

Updated on:Aug 02, 2022 | 5:02 PM

Share

ಮಾಸ್ಕೊ: ಉಕ್ರೇನ್​​ನ (Ukraine) ಅಜೋವ್ ರೆಜಿಮೆಂಟ್​​ನ್ನು (Azov Regiment) ರಷ್ಯಾದ (Russia) ಸುಪ್ರೀಂಕೋರ್ಟ್ ಉಗ್ರರ ಗುಂಪು ಎಂದು ಘೋಷಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಬಲಪಂಥೀಯ ಮತ್ತು ಅಲ್ಟ್ರಾ ನ್ಯಾಷನಲಿಸ್ಟ್ ಮೂಲದ್ದಾಗಿರುವ ಅಜೋವ್ ರೆಜಿಮೆಂಟ್, ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡುತ್ತಿರುವ ಅತ್ಯಂತ ಪ್ರಮುಖವಾದ ಉಕ್ರೇನಿಯನ್ ಮಿಲಿಟರಿ ರಚನೆಗಳಲ್ಲಿ ಒಂದಾಗಿದೆ. ಉಕ್ರೇನ್​​ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ. ರಷ್ಯಾದ ರಾಜ್ಯ ಅಜೆಂಡಾವು ಅಜೋವ್ ಹೋರಾಟಗಾರರನ್ನು ಎರಡನೇ ಮಹಾಯುದ್ಧದ ನಾಝಿಗಳಿಗೆ ಹೋಲಿಸಿದೆ.

ಪೂರ್ವ ಉಕ್ರೇನ್​​ನ ಮಾರಿಯುಪೋಲ್​​ನಲ್ಲಿ ಈ ಹಿಂದೆ ನಿಯೋಜನೆಯಾಗಿದ್ದ ಅಜೋವ್ ರೆಜಿಮೆಂಟ್ ನ ಸಿಬ್ಬಂದಿಗಳನ್ನು ಮೇ ತಿಂಗಳಲ್ಲಿ ರಷ್ಯಾ ಪಡೆ ವಶಕ್ಕೆ ತೆಗೆದುಕೊಂಡಿತ್ತು. ಮಾರಿಯುಪೋಲ್ ಅನ್ನು ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ರಷ್ಯಾದ ಬೆಂಬಲಿತ ಘಟಕವಾದ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ನ ಅಧಿಕಾರಿಗಳು ಮೇ ತಿಂಗಳಲ್ಲಿ ವಶಪಡಿಸಿಕೊಂಡ ಅಜೋವ್ ರೆಜಿಮೆಂಟ್ ಹೋರಾಟಗಾರರು ಸ್ವಯಂ ಘೋಷಿತ ಗಣರಾಜ್ಯದ ಕಾನೂನುಗಳ ಅಡಿಯಲ್ಲಿ ಮರಣದಂಡನೆಯನ್ನು ಎದುರಿಸಬಹುದು ಎಂದು ಹೇಳಿದ್ದಾರೆ.

Published On - 4:44 pm, Tue, 2 August 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ