AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey: ಬರೀ ಮೂತ್ರ ಕುಡಿದು 12 ದಿನ ಜೀವ ಉಳಿಸಿಕೊಂಡಿದ್ದ ಸಿರಿಯಾ ವ್ಯಕ್ತಿ

Miracle Save In Turkey Earthquake: ಸಿರಿಯಾ ಮೂಲದ ಸಮೀರ್ ಮುಹಮ್ಮದ್ ಅಚ್ಚರ್ ಎಂಬ ವ್ಯಕ್ತಿ ಹಾಗೂ ಆತನ ಪತ್ನಿ ಮತ್ತು ಒಂದು ಮಗು ಟರ್ಕಿ ಭೂಕಂಪವಾಗಿ 296 ಗಂಟೆಗಳ ಬಳಿಕ ಪವಾಡಸದೃಶ ರೀತಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಸಮೀರ್ ತಾನು ಮೂತ್ರ ಕುಡಿದು ಬದುಕಿದ್ದಾಗಿ ಹೇಳಿಕೊಂಡಿದ್ದಾನೆ.

Turkey: ಬರೀ ಮೂತ್ರ ಕುಡಿದು 12 ದಿನ ಜೀವ ಉಳಿಸಿಕೊಂಡಿದ್ದ ಸಿರಿಯಾ ವ್ಯಕ್ತಿ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2023 | 5:38 PM

Share

ಇಸ್ತಾಂಬುಲ್: ಟರ್ಕಿ ಭೂಕಂಪದಿಂದ ಧರೆಗುರುಳಿದ ಕಟ್ಟಡಗಳ ಅವಶೇಷಗಳ ಅಡಿಯಿಂದ 10 ದಿನಗಳ ಬಳಿಕ ಜೀವಂತವಾಗಿ (Alive In the rubbles) ಜನರು ಸಿಕ್ಕಿದ್ದಾರೆ. 12ನೇ ದಿನ ರಕ್ಷಣಾ ಕಾರ್ಯಕರ್ತರು ಒಂದೇ ಕುಟುಂಬದ ಮೂವರನ್ನು ಜೀವಂತವಾಗಿ ಹೊರತಂದಿದ್ದರು. 13ನೇ ದಿನ 45 ವರ್ಷದ ಒಬ್ಬ ವ್ಯಕ್ತಿ ಬದುಕಿ ಬಂದಿದ್ದನು. ಟರ್ಕಿ ಭೂಕಂಪದಂಥ ಘನಘೋರ ಘಟನೆಯಲ್ಲಿ ಇಂಥ ಹತ್ತಾರು ಅಚ್ಚರಿ, ಚಮತ್ಕಾರಗಳೂ ನಡೆದಿವೆ.

ಮೊನ್ನೆ ಕಿರ್ಗಿಸ್ತಾನದ ರಕ್ಷಣಾ ತಂಡವೊಂದು ಟರ್ಕಿಯ ಅಂಟಾಕ್ಯಾ (Antakya) ನಗರದಲ್ಲಿ ಕುಸಿದಿದ್ದ ಅಪಾರ್ಟ್ಮೆಂಟ್ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವಾಗ ಒಂದೇ ಕುಟುಂಬದ ಮೂವರು ವ್ಯಕ್ತಿಗಳು ಜೀವಂತ ಸಿಕ್ಕಿದ್ದರು. ಸಮೀರ್ ಮುಹಮ್ಮದ್ ಅಚ್ಚರ್ (49 ವರ್ಷ), ಪತ್ನಿ ರಗಡಾ (40 ವರ್ಷ) ಮತ್ತು ಮಗ (12 ವರ್ಷ) 12 ದಿನಗಳ ಕಾಲ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜೀವ ಉಳಿಸಿಕೊಂಡಿದ್ದರು.

ಈ ಪೈಕಿ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸಮೀರ್ ಕುಟುಂಬದ ಇತರ ಮೂವರು ಮಕ್ಕಳೂ ಕೂಡ ಮೊದಲೇ ಸಾವನ್ನಪ್ಪಿದ್ದು, ಅವರ ಶವಗಳು ಸಿಕ್ಕಿವೆ.

ಫೆಬ್ರುವರಿ 6ರಂದು ಭೂಕಂಪ ಸಂಭವಿಸಿದ್ದು. ಅದಾಗಿ 296 ಗಂಟೆ ಕಾಲ ಸಮೀರ್ ಮುಹಮ್ಮದ್ ಅಚ್ಚರ್ ಹಾಗೂ ಅವರ ಪತ್ನಿ ಹೇಗೆ ಬದುಕಿದ್ದರು ಎಂಬುದು ಅಚ್ಚರಿ. ಈತ ತನ್ನದೇ ಮೂತ್ರ ಕುಡಿದಿದ್ದರಿಂದ ಅಷ್ಟು ದಿನ ಬದುಕಲು ಸಾಧ್ಯವಾಯಿತಂತೆ. ಹಾಗಂತ ಈತ ಹೇಳಿದನೆಂದು ಟರ್ಕಿಯ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈತನ ಪತ್ನಿ ಮತ್ತು ಮಗ ಹೇಗೆ ಜೀವ ಉಳಿಸಿಕೊಂಡಿದ್ದರು ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: Miracle: 12 ದಿನ ನಂತರವೂ ಬದುಕುಳಿದ ವ್ಯಕ್ತಿ; ಟರ್ಕಿಯಲ್ಲಿ ಸಾವು, ನೋವು, ಅಚ್ಚರಿಗಳ ಸರಮಾಲೆ

ಭೂಕಂಪವಾಗಿ ತಾವು ವಾಸವಿದ್ದ ಕಟ್ಟಡ ಬಿದ್ದಾಗ ಇವರ ಕುಟುಂಬದವರೆಲ್ಲರೂ ಅವಶೇಷಗಳ ಅಡಿಯಲ್ಲಿ ಸಿಲುಕಿದರಂತೆ. ಮೊದಲ ಎರಡು ಮೂರು ದಿನ ಸಮೀರ್ ಧ್ವನಿಗೆ ಅವರ ಮಕ್ಕಳು ಸ್ಪಂದಿಸುತ್ತಿದ್ದರಂತೆ. ಅದಾದ ಬಳಿಕ ಧ್ವನಿ ಕೇಳಿಬರಲಿಲ್ಲ ಎಂದು ಈತ ನೋವಿನಿಂದ ಹೇಳಿಕೊಂಡಿದ್ದಾನೆ. ಸಿರಿಯಾ ಮೂಲದ ಈ ಕುಟುಂಬದವರು ಟರ್ಕಿಯಲ್ಲಿ ವಾಸವಿದ್ದರು.

ಟರ್ಕಿ ಭೂಕಂಪದಿಂದ ಇಲ್ಲಿಯವರೆಗೆ ಮೃತಪಟ್ಟಿರುವವರ ಸಂಖ್ಯೆ 46 ಸಾವಿರ ಗಡಿ ದಾಟಿ ಹೋಗಿದೆ. ಸಿರಿಯಾದಲ್ಲಿ ಸುಮಾರು 5 ಸಾವಿರದಷ್ಟು ಜನರು ಸತ್ತಿರಬಹುದು. ಟರ್ಕಿಯಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆನ್ನಲಾಗಿದೆ.

ಟರ್ಕಿ ಭೂಕಂಪದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು