AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಪದಾರ್ಥಗಳ ರಫ್ತಿನಲ್ಲಿ ಟಾಪ್​ 10 ಪಟ್ಟಿಯಲ್ಲಿರುವ ಪುಟ್ಟ ರಾಷ್ಟ್ರ ಉಕ್ರೇನ್​

ಉಕ್ರೇನ್​ ದೇಶವು ಜಗತ್ತಿನ ಪುಟ್ಟ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ  ಹಾಗೂ ಸೋಯಾಬೀನ್​ಗಳ ರಪ್ತಿನಲ್ಲಿ ಟಾಪ್​ 10ನಲ್ಲಿದೆ.

ಆಹಾರ ಪದಾರ್ಥಗಳ ರಫ್ತಿನಲ್ಲಿ ಟಾಪ್​ 10 ಪಟ್ಟಿಯಲ್ಲಿರುವ ಪುಟ್ಟ ರಾಷ್ಟ್ರ ಉಕ್ರೇನ್​
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 26, 2022 | 11:53 AM

Share

ರಷ್ಯಾ (Russia)  ಪಡೆಯ ದಾಳಿಯ ಅಬ್ಬರಕ್ಕೆ ಉಕ್ರೇನ್ (Ukraine)​ ನಲುಗಿಹೋಗಿದೆ. ನಾಗರಿಕರು ದೇಶವನ್ನು ತೊರೆದು ಹೊರಡಲು ತಯಾರಾಗಿದ್ದಾರೆ. ಈಗಾಗಲೇ ನೂರಾರು, ಸೈನಿಕರು, ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹಗಲು ರಾತ್ರಿ ಜೀವಭಯದಲ್ಲಿ ಬದುಕುತ್ತಿದ್ದಾರೆ. ಉಕ್ರೇನ್​ ರಷ್ಯಾ ಯುದ್ಧದಿಂದ (Russia-Ukraine War) ಕೇವಲ ಅವರೆಡು ರಾಷ್ಟ್ರಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಹೊಡೆತ ಬಿದ್ದಿದೆ. ಉಕ್ರೇನ್​ ದೇಶವು ಜಗತ್ತಿನ ಪುಟ್ಟ ರಾಷ್ಟರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ  ಹಾಗೂ ಸೋಯಾಬೀನ್​ಗಳ ರಪ್ತಿನಲ್ಲಿ ಟಾಪ್​ 10ನಲ್ಲಿದೆ. ಈಗ ಉಂಟಾಗುತ್ತಿರುವ ಬಿಕ್ಕಟ್ಟಿನಿಂದಾಗಿ ಉಕ್ರೇನ್​ನಿಂದ ರಪ್ತಾಗುವ ಈ ಎಲ್ಲಾ ಪದಾರ್ಥಗಳಲ್ಲಿ ವ್ಯತ್ಯವಾಗುತ್ತದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳಿ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ.

ಉಕ್ರೇನ್ ​ ಸೂರ್ಯಕಾಂತಿ ಬೀಜಗಳನ್ನು ರಫ್ತು ಮಾಡುವ ಜಗತ್ತಿನ ಅತಿದೊಡ್ಡ ದೇಶವಾಗಿದೆ. ಇನ್ನು ಜೋಳ ಮತ್ತು ಬಾರ್ಲಿಯನ್ನು ರಫ್ತು ಮಾಡುವುದರಲ್ಲಿ 6 ನೇ ಅತಿದೊಡ್ಡ ದೇಶವಾಗಿದ್ದು, ಸಾಸಿವೆಯನ್ನು ಪೂರೈಸುವ 7 ನೇ ಅತಿದೊಡ್ಡ ಮತ್ತು ಗೋದಿ ಮತ್ತು ಸೋಯಾಬಿನ್​ಪದಾರ್ಥಗಳನ್ನು ಪೂರೈಕೆ ಮಾಡುವ  9 ನೇ ಅತಿದೊಡ್ಡ ರಾಷ್ಟ್ರವಾಗಿದೆ. ವರದಿಯ ಪ್ರಕಾರ ರಷ್ಯಾ ಸುಮಾರು 170 ಲಕ್ಷ ಟನ್​ಗಳಷ್ಟು ಸೂರ್ಯಕಾಂತಿ ಉತ್ಪನ್ನವನ್ನು ವಿವಿಧ ದೇಶಗಳಿಗೆ ಪೂರೈಕೆ ಮಾಡುತ್ತದೆ. ರಷ್ಯಾ ದಾಳಿಯಿಂದ ಉಕ್ರೇನ್​ನ ವಿದೇಶಿ ರಫ್ತು ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಹಲವು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉಕ್ರೇನ್​ನಿಂದ ರಫ್ತಾಗುತ್ತಿದ್ದ ಪದಾರ್ಥಗಳ ಬೆಲೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ ಎನ್ನುವಂತಾಗಿದೆ.

ಮುಖ್ಯವಾಗಿ ಸೂರ್ಯಕಾಂತಿ ಬೀಜ ಮತ್ತು ಸೂರ್ಯಕಾಂತಿ ಎಣ್ಣೆಗೆ ಭಾರತ ಉಕ್ರೇನ್​ ದೇಶವನ್ನೇ ಅವಲಂಭಿಸಿದೆ. ಒಂದು ವರದಿಯ ಪ್ರಕಾರ ಶೆ.70ರಷ್ಟು ಸೂರ್ಯಕಾಂತಿ ಉತ್ಪನ್ನಗಳನ್ನು ಭಾರತಕ್ಕೆ ಉಕ್ರೇನ್​ನಿಂದಲೇ ಪೂರೈಕೆಯಾಗುತ್ತದೆ. ರಷ್ಯಾ ಕೂಡ ಸೂರ್ಯಕಾಂತಿಯನ್ನು ಬೆಳೆಯುತ್ತದೆ. ಆದರೆ  ಶೇ. 10ರಷ್ಟು ಮಾತ್ರ ಭಾರತಕ್ಕೆ ಪೂರೈಕೆಯಾಗುತ್ತದೆ. ಭಾರತಕ್ಕೆ ಪ್ರತೀ ತಿಂಗಳಿಗೆ ಸುಮಾರು 2ಲಕ್ಷ ಟನ್​ಗಳಷ್ಟು ಸೂರ್ಯಕಾಂತಿ ಎಣ್ಣೆ ಉಕ್ರೇನ್​ನಿಂದ ಫೂರೈಕೆಯಾಗುತ್ತದೆ. ಆದರೆ ಈಗ ಆ ಪೂರೈಕೆಗೆ ಬಹುದೊಡ್ಟ ಪೆಟ್ಟು ಬಿದ್ದಿದೆ. ಭಾರತೀಯ ಮಾರುಕಟ್ಟೆಗೆ ಇದರ ಬಿಸಿ ನೇರವಾಗಿ ತಟ್ಟಿದೆ. ಈ ಬಗ್ಗೆ ವಿಶ್ವ ಆಹಾರ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್​ನ ಬಿಕ್ಕಟ್ಟಿನಿಂದಾಗಿ ನೇರವಾಗಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಇದನ್ನು ಸರಿ ಪಡಿಸುವ ಬಗೆಯ ಬಗ್ಗೆ ಆತಂಕವ್ಯಕ್ತಪಡಿಸಿ ಟ್ವೀಟ್​ ಮಾಡಿದೆ.

ಉಕ್ರೇನ್​​​ ವಿದ್ಯಾಭ್ಯಾಸಕ್ಕೂ ಹೆಸರುವಾಸಿ: ಉಕ್ರೇನ್​ ಪುಟ್ಟ ದೇಶವಾದರೂ ಸಮೃದ್ಧ ದೇಶವಾಗಿದೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಮಾತ್ರವಲ್ಲದೆ ಶಿಕ್ಷಣದಲ್ಲಿಯೂ ಮುಂದೆವರೆದ ರಾಷ್ಟ್ರ. ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನಗಳ ಆಧುನಿಕತೆಯನ್ನು ಅಳವಡಿಸಿಕೊಂಡಿರುವ ದೇಶ. ಹೀಗಾಗಿಯೇ ಭಾರತ ಸೇರಿದಂತೆ ಹಲವು ರಾಷ್ಟರಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅರಸಿಕೊಂಡು ಉಕ್ರೇನ್​ಗೆ ತೆರಳುತ್ತಾರೆ. ರಾಜಧಾನಿ ಕೈವ್‌ನಿಂದ ಸುಮಾರು 480 ಕಿಮೀ ದೂರದಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯವು ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ವೈದ್ಯಕೀಯ ಶಾಲೆಯಾಗಿದೆ.

Published On - 11:21 am, Sat, 26 February 22

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ