AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಟರ್ಬನ್ ಧರಿಸಿದ್ದಕ್ಕೆ ಸಿಖ್ ಯುವಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ

ಹಲ್ಲೆಯಿಂದ ತಾನು ಜರ್ಜರಿತನಾಗಿದ್ದು ಕೋಪಗೊಂಡಿದ್ದೇನೆ ಎಂದು ಸಿಖ್ ಯುವಕ ಹೇಳಿದ್ದು, ಅವರು ಹೇಗೆ ಕಾಣುತ್ತಾರೆ ಎಂಬ ಕಾರಣದಿಂದ ಯಾರಿಗೂ ಕಿರುಕುಳ ನೀಡಬಾರದು ಎಂದು ಆತ ಹೇಳಿದ್ದಾರೆ.  ಯುವಕ ತುಂಬಾ ಆಘಾತಕ್ಕೊಳಗಾಗಿದ್ದಾರೆ. ಕುಟುಂಬವು ಅವನ ಬಗ್ಗೆ ತುಂಬಾ ಹೆದರುತ್ತಿದೆ ಎಂದು ಸಮುದಾಯದ ಕಾರ್ಯಕರ್ತ ಜಪ್ನೀತ್ ಸಿಂಗ್ ಉಲ್ಲೇಖಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಅಮೆರಿಕ: ಟರ್ಬನ್ ಧರಿಸಿದ್ದಕ್ಕೆ ಸಿಖ್ ಯುವಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ
ಅಮೆರಿಕ ಪೊಲೀಸ್
ರಶ್ಮಿ ಕಲ್ಲಕಟ್ಟ
|

Updated on: Oct 21, 2023 | 7:13 PM

Share

ವಾಷಿಂಗ್ಟನ್ ಅಕ್ಟೋಬರ್ 21: ಟರ್ಬನ್ (Turban) ಧರಿಸಿದ್ದಕ್ಕಾಗಿ ಬಸ್ಸಿನಲ್ಲಿ ಸಿಖ್ ಯುವಕನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ 26 ವರ್ಷದ ವ್ಯಕ್ತಿಯನ್ನು ಅಮೆರಿಕದಲ್ಲಿ(US) ಬಂಧಿಸಿ ದ್ವೇಷದ ಅಪರಾಧದ (hate crime) ಆರೋಪ ಹೊರಿಸಲಾಗಿದೆ. ಕಳೆದ ವಾರ ಕ್ವೀನ್ಸ್‌ನ 118 ನೇ ಸ್ಟ್ರೀಟ್ ಮತ್ತು ಲಿಬರ್ಟಿ ಅವೆನ್ಯೂ ಬಳಿ ಬಸ್‌ನಲ್ಲಿ ನಡೆದ ಘಟನೆಯ ನಂತರ ಪೊಲೀಸರು ಕ್ರಿಸ್ಟೋಫರ್ ಫಿಲಿಪ್ಪೋಕ್ಸ್ ಅವರನ್ನು ಬಂಧಿಸಿ ದ್ವೇಷದ ಅಪರಾಧದ ಆರೋಪ ಹೊರಿಸಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಕ್ರಿಸ್ಟೋಫರ್ ಫಿಲಿಪ್ಪೋಕ್ಸ್ ನ್ಯೂಯಾರ್ಕ್ ಸಿಟಿ MTA ಬಸ್‌ನಲ್ಲಿ 19 ವರ್ಷದ ಸಿಖ್ ಹುಡುಗನ ಬಳಿಗೆ ಬಂದು, “ನಾವು ಈ ದೇಶದಲ್ಲಿ ಅದನ್ನು ಧರಿಸುವುದಿಲ್ಲ” ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಯುವಕನ್ನು ಮಾಸ್ಕ್ ತೆಗೆಯುವಂತೆ ಹೇಳಿದ್ದು ಆತನ ಮುಖ, ಬೆನ್ನು ಮತ್ತು ಅವನ ತಲೆಯ ಹಿಂಭಾಗದಲ್ಲಿ ಗುದ್ದಿದ್ದಾನೆ. ಟರ್ಬನ್ ತೆಗೆದುಹಾಕಲು ಪ್ರಯತ್ನಿಸುವಾಗ ನೋವುಂಟು ಮಾಡಿದ್ದಾನೆ. ನಂತರ ಅವರು ಬಸ್‌ನಿಂದ ಇಳಿದು ಲಿಬರ್ಟಿ ಅವೆನ್ಯೂದಲ್ಲಿ ಓಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ದಾಖಲೆಗಳಲ್ಲೇನಿದೆ?

ಮ್ಯಾನ್‌ಹ್ಯಾಟನ್ ನಲ್ಲಿ ದರೋಡೆಗೆ ಯತ್ನಿಸಿದ ಅಪರಾಧಕ್ಕಾಗಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯ ಜೈಲಿನಲ್ಲಿ ಸೇವೆ ಸಲ್ಲಿಸಿದ ನಂತರ ಜುಲೈ 2021 ರಲ್ಲಿ ಕ್ರಿಸ್ಟೋಫರ್ ಫಿಲಿಪ್ಪಾಕ್ಸ್ ನ್ನು ಷರತ್ತುಬದ್ಧವಾಗಿ ಪೆರೋಲ್ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ದಾಖಲೆಗಳು ತೋರಿಸಿವೆ ಎಂದು ವರದಿ ಹೇಳಿದೆ. ದಾಖಲೆಗಳ ಪ್ರಕಾರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅವರನ್ನು ಈ ಹಿಂದೆ ಬಂಧಿಸಲಾಗಿದೆ.

ಇದನ್ನೂ ಓದಿ2024ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದರೆ ದೇಶ ತೊರೆಯುತ್ತೇನೆ: ಪಾಪ್ ಗಾಯಕಿ ಚೆರ್

ಘಟನೆಯ ಬಗ್ಗೆ ಸಿಖ್ ಯುವಕ ಹೇಳಿದ್ದೇನು?

ಹಲ್ಲೆಯಿಂದ ತಾನು ಜರ್ಜರಿತನಾಗಿದ್ದು ಕೋಪಗೊಂಡಿದ್ದೇನೆ ಎಂದು ಸಿಖ್ ಯುವಕ ಹೇಳಿದ್ದು, ಅವರು ಹೇಗೆ ಕಾಣುತ್ತಾರೆ ಎಂಬ ಕಾರಣದಿಂದ ಯಾರಿಗೂ ಕಿರುಕುಳ ನೀಡಬಾರದು ಎಂದು ಆತ ಹೇಳಿದ್ದಾರೆ.  ಯುವಕ ತುಂಬಾ ಆಘಾತಕ್ಕೊಳಗಾಗಿದ್ದಾರೆ. ಕುಟುಂಬವು ಅವನ ಬಗ್ಗೆ ತುಂಬಾ ಹೆದರುತ್ತಿದೆ ಎಂದು ಸಮುದಾಯದ ಕಾರ್ಯಕರ್ತ ಜಪ್ನೀತ್ ಸಿಂಗ್ ಉಲ್ಲೇಖಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ನಾನು ವಿಡಿಯೊ ನೋಡಿದ್ದು ನಾನು ಕೋಪಗೊಂಡಿದ್ದೇನೆ. ನಾನು ಆಕ್ರೋಶಗೊಂಡಿದ್ದೇನೆ ಮತ್ತು ಸಂತ್ರಸ್ತನಿಗೆ ಏನಾಯಿತು ಎಂದು ನಾನು ಮನನೊಂದಿದ್ದೇನೆ. ನಾವು ನಮ್ಮ ನಗರಕ್ಕೆ ಜನರನ್ನು ಸ್ವಾಗತಿಸುವ ರೀತಿ ಅಲ್ಲ ಎಂದು MTA ಯ ಕಾರ್ಯನಿರ್ವಾಹಕ ಮುಖ್ಯ ಗ್ರಾಹಕ ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ