AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರದ ಆಳ ಎಷ್ಟು ಇದೆ ಎಂದು ತೋರಿಸಲು ನೀರಿಗೆ ಹಾರಿ ಲೈವ್ ರಿಪೋರ್ಟಿಂಗ್ ಮಾಡಿದ ಪಾಕ್ ಪತ್ರಕರ್ತ

ಹೀಗೆ ಲೈವ್ ರಿಪೋರ್ಟಿಂಗ್ ಮಾಡಿದ ವ್ಯಕ್ತಿ ಕ್ಯಾಮೆರಾಮೆನ್ ತೈಮೂರ್ ಖಾನ್ ಜತೆ ಅಬ್ದುಲ್ ರೆಹಮಾನ್ ಖಾನ್, ಅಬ್ದುಲ್ ರೆಹಮಾನ್ ನ್ಯೂಸ್‌ ಕರಾಚಿ ಎಂದು ಹೇಳಿ ಸುದ್ದಿ ಮುಗಿಸುತ್ತಾರೆ. ಆದಾಗ್ಯೂ, ಈ ವ್ಯಕ್ತಿ ವೃತ್ತಿಪರ ವರದಿಗಾರನೇ ಅಥವಾ ಮನರಂಜನಾ ಉದ್ದೇಶಗಳಿಗಾಗಿ ಈ ವಿಡಿಯೊ ಮಾಡಿದ್ದಾನೆಯೇ ಎಂಬುದು ಗೊತ್ತಿಲ್ಲ.

ಸಮುದ್ರದ ಆಳ ಎಷ್ಟು ಇದೆ ಎಂದು ತೋರಿಸಲು ನೀರಿಗೆ ಹಾರಿ ಲೈವ್ ರಿಪೋರ್ಟಿಂಗ್ ಮಾಡಿದ ಪಾಕ್ ಪತ್ರಕರ್ತ
ವೈರಲ್ ವಿಡಿಯೊದಲ್ಲಿರುವ ಪಾಕ್ ಪತ್ರಕರ್ತ
ರಶ್ಮಿ ಕಲ್ಲಕಟ್ಟ
|

Updated on: Jun 15, 2023 | 1:53 PM

Share

ಪಾಕಿಸ್ತಾನದ (Pakistan) ಕರಾಚಿಯಲ್ಲಿ (Karachi) ಪತ್ರಕರ್ತರೊಬ್ಬರ ಹವಾಮಾನ ವರದಿಗಾರಿಕೆ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಮಧ್ಯ ವಯಸ್ಕರೊಬ್ಬರು ಬಹಳ ಜೋಶ್​​​ನಿಂದ ಲೈವ್ ರಿಪೋರ್ಟಿಂಗ್ (Live Reporting) ಮಾಡುವುದನ್ನು ಕಾಣಬಹುದು. ಅವರು ಸಮುದ್ರದ ಆಳ ಎಷ್ಟು ಇದೆ ಎಂಬುದನ್ನು ಮೊದಲು ಹೇಳುತ್ತಾರೆ. ನಂತರ ಇದರ ಆಳ ಎಷ್ಟಿದೆ ಅಂದರೆ ನೋಡಿ ಎಂದು ಮೈಕ್ರೋಫೋನ್ ಹಿಡಿದುಕೊಂಡೇ ನೀರಿಗೆ ಹಾರುತ್ತಾರೆ. ಅಲ್ಲಿರುವ ಜನರು ನಗುವ ಸದ್ದೂ ವಿಡಿಯೊದಲ್ಲಿ ಕೇಳಿಸುತ್ತದೆ. ನೀರಿನಲ್ಲಿ ನಿಂತು ನೋಡಿ ಇಷ್ಟು ಆಳ ಇದೆ ಎಂದು ಅವರು ಹೇಳುತ್ತಾರೆ. ಮತ್ತೊಮ್ಮೆ ನೀರಿನಲ್ಲಿ ಮುಳುಗಿ, ಇದು ತುಂಬಾ ಆಳವಾಗಿದೆ, ಅದಕ್ಕೆ ತಳವಿಲ್ಲ ಅಂತಾರೆ.

ಹೀಗೆ ಲೈವ್ ರಿಪೋರ್ಟಿಂಗ್ ಮಾಡಿದ ವ್ಯಕ್ತಿ ಕ್ಯಾಮೆರಾಮೆನ್ ತೈಮೂರ್ ಖಾನ್ ಜತೆ ಅಬ್ದುಲ್ ರೆಹಮಾನ್ ಖಾನ್, ಅಬ್ದುಲ್ ರೆಹಮಾನ್ ನ್ಯೂಸ್‌ ಕರಾಚಿ ಎಂದು ಹೇಳಿ ಸುದ್ದಿ ಮುಗಿಸುತ್ತಾರೆ. ಆದಾಗ್ಯೂ, ಈ ವ್ಯಕ್ತಿ ವೃತ್ತಿಪರ ವರದಿಗಾರನೇ ಅಥವಾ ಮನರಂಜನಾ ಉದ್ದೇಶಗಳಿಗಾಗಿ ಈ ವಿಡಿಯೊ ಮಾಡಿದ್ದಾನೆಯೇ ಎಂಬುದು ಗೊತ್ತಿಲ್ಲ.

ಈ ಹಿಂದೆ 2008 ರಲ್ಲಿ ಇದೇ ರೀತಿಯ ವಿಡಿಯೊವೊಂದು ವೈರಲ್ ಆಗಿತ್ತು. ಪಾಕಿಸ್ತಾನಿ ಟಿವಿ ವರದಿಗಾರ ಚಾಂದ್ ನವಾಬ್‌ ಕರಾಚಿ ರೈಲು ನಿಲ್ದಾಣದಲ್ಲಿ ಈದ್ ಹಬ್ಬದ ಅವ್ಯವಸ್ಥೆಯ ಬಗ್ಗೆ ವರದಿ ಮಾಡುವಾಗ, ಅಲ್ಲಿ ಹಾದು ಹೋಗುವವರು ಪದೇ ಪದೇ ಕ್ಯಾಮೆರಾ ಮುಂದೆ ಬಂದು ಅಡಚಣೆಯುಂಟು ಮಾಡುತ್ತಿದ್ದರು. ಆಗ ಚಾಂದ್ ನವಾಬ್ ಪ್ರತಿಕ್ರಿಯಿಸುವ ರೀತಿ, ಆತನ ವರದಿಗಾರಿಕೆಯ ವಿಡಿಯೊ ವೈರಲ್ ಆಗಿತ್ತು .

ಇದನ್ನೂ ಓದಿ: Avtar Khanda: ಲಂಡನ್​ನ ರಾಯಭಾರ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜ ಕೆಳಗಿಳಿಸಿದ್ದ ಅವತಾರ್ ಖಂಡಾ ರಕ್ತ ಕ್ಯಾನ್ಸರ್​ನಿಂದ ಸಾವು

ಈ ವೈರಲ್ ವಿಡಿಯೊದಿಂದ ಸ್ಫೂರ್ತಿ ಪಡೆದ ಭಾರತೀಯ ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್ 2015 ರ ಚಲನಚಿತ್ರ ‘ಬಜರಂಗಿ ಭಾಯಿಜಾನ್’ ನಲ್ಲಿ ನವಾಜುದ್ದೀನ್ ಸಿದ್ದಿಕಿ , ಚಾಂದ್ ನವಾಬ್​​ನಂತೆ ವರದಿಗಾರಿಕೆ ಮಾಡುವ ದೃಶ್ಯವೊಂದನ್ನು ಸಿನಿಮಾದಲ್ಲಿ ತೋರಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ