AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮಗೆ ಚೀನಾಕ್ಕೆ ಬಲವಂತ ಮಾಡಲು ಸಾಧ್ಯವೇ ಇಲ್ಲ..ನಮ್ಮ ಸದಸ್ಯ ರಾಷ್ಟ್ರಗಳು ಇದಕ್ಕೆ ಸಹಕಾರ ನೀಡಬೇಕು’- ಡಬ್ಲ್ಯೂಎಚ್​ಒ

ಕೊರೊನಾ ಮೂಲದ ಬಗ್ಗೆ ಹಲವು ರೀತಿಯ ವರದಿಗಳು ಹೊರಬೀಳುತ್ತಿವೆ. ಸೋಂಕಿನ ಮೂಲದ ಪತ್ತೆ ಕಾರ್ಯಕ್ಕಾಗಿ ಈ ವರ್ಷದ ಪ್ರಾರಂಭದಲ್ಲಿ ಡಬ್ಲ್ಯೂಎಚ್​ಒ ತಜ್ಞರ ತಂಡ ಚೀನಾಕ್ಕೆ ಭೇಟಿ ಕೊಟ್ಟಿತ್ತು. ಆದರೆ ನಿರೀಕ್ಷಿಸಿದಷ್ಟು ಮಾಹಿತಿ ಹೊರಬಿದ್ದಿರಲಿಲ್ಲ.

‘ನಮಗೆ ಚೀನಾಕ್ಕೆ ಬಲವಂತ ಮಾಡಲು ಸಾಧ್ಯವೇ ಇಲ್ಲ..ನಮ್ಮ ಸದಸ್ಯ ರಾಷ್ಟ್ರಗಳು ಇದಕ್ಕೆ ಸಹಕಾರ ನೀಡಬೇಕು’- ಡಬ್ಲ್ಯೂಎಚ್​ಒ
ಮೈಕ್ ರಯಾನ್​
TV9 Web
| Edited By: |

Updated on:Jun 08, 2021 | 1:11 PM

Share

ಕೊವಿಡ್​ 19 ಸೋಂಕಿನ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ಚೀನಾವನ್ನು ಪದೇಪದೇ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ತಿಳಿಸಿದೆ. ಆದರೆ ವೈರಸ್​ ಎಲ್ಲಿಂದ ಹೊರಹೊಮ್ಮಿತು ಎಂಬುದನ್ನು ಪತ್ತೆ ಹಚ್ಚಲು ಅಗತ್ಯವಿರುವ ಅಧ್ಯಯನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಸ್ತಾವನೆಯನ್ನು ಇಡಬಹುದಷ್ಟೇ ಎಂದೂ ವಿಶ್ವಆರೋಗ್ಯ ಸಂಸ್ಥೆ ತಿಳಿಸಿದೆ. ಸದ್ಯ ಅನೇಕ ರಾಷ್ಟ್ರಗಳು ಕೊರೊನಾ ವೈರಸ್​​ನ ಮೂಲ ಕಂಡು ಹಿಡಿಯುವ ಸಂಬಂಧ ತನಿಖೆ ಶುರು ಮಾಡಿವೆ. ಅದರಲ್ಲೂ ಅಮೆರಿಕ ಗುಪ್ತಚರ ದಳಗಳು ಕೊರೊನಾ ವುಹಾನ್​ ಲ್ಯಾಬ್​​ನಿಂದಲೇ ಹೊರಬಂದಿದ್ದು ಎಂದೂ ವರದಿ ನೀಡಿವೆ. ಈ ಹೊತ್ತಲ್ಲಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಡಬ್ಲ್ಯೂಎಚ್​ಒ ಹಿರಿಯ ಅಧಿಕಾರಿ ಮೈಕ್ ರಯಾನ್​​ ಹೀಗೆಂದು ಉತ್ತರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿ ಮೈಕ್​ ರಯಾನ್​, ಕೊರೊನಾ ವೈರಸ್​ ಮೂಲ ತಿಳಿಸುವಂತೆ ಚೀನಾವನ್ನು ಒತ್ತಾಯಿಸುವ ಅಧಿಕಾರ ನಮಗೆ ಇಲ್ಲ. ಈ ನಿಟ್ಟಿನಲ್ಲಿ ನಮ್ಮೆಲ್ಲ ಸದಸ್ಯ ರಾಷ್ಟ್ರಗಳ ಸಹಕಾರ, ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಜಗತ್ತಿಗೆ ಕಾಲಿಟ್ಟು ಒಂದು ವರ್ಷದ ಮೇಲಾಯಿತು. ಆದರೆ ಅದು ಎಲ್ಲಿಂದ ಶುರುವಾಗಿದ್ದು ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಮೊದಲು ಚೀನಾದ ವೆಟ್ ಮಾರ್ಕೆಟ್​​ನಲ್ಲಿ ಹುಟ್ಟಿತು ಎಂದು ಹೇಳಲಾಯಿತಾದರೂ, ನಂತರ ವುಹಾನ್​​ನ ಲ್ಯಾಬ್​​ನಿಂದ ಸೋರಿಕೆಯಾಗಿದ್ದು ಎಂದು ವರದಿಯಾಯಿತು.

ಕೊರೊನಾ ಮೂಲದ ಬಗ್ಗೆ ಹಲವು ರೀತಿಯ ವರದಿಗಳು ಹೊರಬೀಳುತ್ತಿವೆ. ಸೋಂಕಿನ ಮೂಲದ ಪತ್ತೆ ಕಾರ್ಯಕ್ಕಾಗಿ ಈ ವರ್ಷದ ಪ್ರಾರಂಭದಲ್ಲಿ ಡಬ್ಲ್ಯೂಎಚ್​ಒ ತಜ್ಞರ ತಂಡ ಚೀನಾಕ್ಕೆ ಭೇಟಿ ಕೊಟ್ಟಿತ್ತು. ಆದರೆ ನಿರೀಕ್ಷಿಸಿದಷ್ಟು ಮಾಹಿತಿ ಹೊರಬಿದ್ದಿರಲಿಲ್ಲ. ಚೀನಾದ ಪಾರದರ್ಶಕತೆಯ ಬಗ್ಗೆ ಈಗಲೂ ಹಲವು ರಾಷ್ಟ್ರಗಳು ಅನುಮಾನ ಪಡುತ್ತಿವೆ. ಈ ಮಧ್ಯೆ ಯುಎಸ್​, ಯುಕೆ, ಭಾರತ ಸೇರಿ ಹಲವು ದೇಶಗಳು ಈಗ ಮತ್ತೆ ಕೊವಿಡ್​ 19 ಸೋಂಕಿನ ಜಾಡು ಹಿಡಿದು ಹೊರಟಿವೆ.

ಇದನ್ನೂ ಓದಿ: ಕೊವಿಡ್ ಮೂರನೇ ಅಲೆ ನಂತರ ಏನಾಗುತ್ತದೆ ಎಂದು ಹೇಳುವುದು ಅಸಾಧ್ಯ; ಡಿಜಿಟಲ್ ಕಲಿಕೆ ಮುಂದುವರಿಯಲಿದೆ: ಪಿಣರಾಯಿ ವಿಜಯನ್

(We can not force china to give more information about covid 19 origin said WHO)

Published On - 1:05 pm, Tue, 8 June 21

Follow Us
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್